ಮುಂಬಯಿ : ಕರ್ನಾಟಕ ಸರ್ಕಾರದ ಮುಜುರಾಯಿ ಖಾತೆ ಸಚಿವರಾಗಿ ಆಯ್ಕೆಗೊಂಡ ಶ್ರೀನಿವಾಸ ಪೂಜಾರಿ ಅವರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಮತ್ತು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಮಾಜಿ ಅಧ್ಯಕ್ಷ ಎಲ್.ವಿ. ಅಮೀನ್ ಅಭಿನಂದನೆ ಸಲ್ಲಿಸಿದ್ದಾರೆ.ಶ್ರೀನಿವಾಸ ಪೂಜಾರಿ ಅವರಿಂದ ಉತ್ತಮ ಕೆಲಸಗಳು ನಡೆಯಲಿ ಎಂದೂ ಅವರು ಹಾರೈಸಿದ್ದಾರೆ.