ನವದೆಹಲಿ : ಯುಪಿಎ ಸರ್ಕಾರದ ವಿರುದ್ಧ ಅಣ್ಣಾ ತಂಡ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಜನಬೆಂಬಲ ಸಾಕಷ್ಟು ಕುಗ್ಗತೊಡಗಿದೆ. ಇದೇ ಸಂಧರ್ಭದಲ್ಲಿ ಇಲ್ಲಿ ಕೆಲವು ಕಿಡಿಗೇಡಿಗಳು ಮಹಿಳಾ ಪತ್ರಕರ್ತರ ಮೇಲೆ ಅಸಭ್ಯವಾಗಿ ವರ್ತಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಸಭ್ಯ ವರ್ತನೆಯನ್ನು ತೋರಿದ ವ್ಯಕ್ತಿಯನ್ನು ಗುರುತಿಸಿದ ಮಹಿಳಾ ಪರ್ತಕರ್ತರು ಅಣ್ಣಾ ತಂಡಕ್ಕೆ ಒಪ್ಪಿಸಿದರು. ವ್ಯಕ್ತಿಯನ್ನು ಗುರುತಿಸಿದ ಅಣ್ಣಾ ತಂಡ ಆ ವ್ಯಕ್ತಿ ತಮ್ಮ ತಂಡಕ್ಕೆ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದರು.ಅಲ್ಲದೇ ಇದು ಹೋರಾಟವನ್ನು ನಾಶ ಮಾಡಲು ಹೂಡಿದ ತಂತ್ರ ಎಂದು ಆಪಾದಿಸಿದರು.