Friday, May 24, 2013
Last Updated: 11:42:13 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ದಾಂಧಲೆ: ಶಾಶ್ವತ ಕ್ರಮ ಆಗ್ರಹಿಸಿ ರ್ಯಾಲಿ, ಸಾರ್ವಜನಿಕ ಸಭೆ
  • ಸಂವಿಧಾನಕ್ಕೆ ಗೌರವ ಸರ್ವರ ಕರ್ತವ್ಯ
  • ಲಲಿತಾ ನಾಯಕ್‌
  • ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್‌ ಅವರು ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.

    • Udayavani | Aug 05, 2012


      ಮಂಗಳೂರು : ಕರ್ನಾಟಕ ಕರಾವಳಿಯಲ್ಲಿ ಸಂಘ ಪರಿವಾರದ ಸಂಘಟನೆಗಳು ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ನಿರಂತರ ನಡೆಸುತ್ತಿರುವ ಪುಂಡಾಟಿಕೆಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ರ್ಯಾಲಿ ಹಾಗೂ ಸಾರ್ವಜನಿಕ ಸಭೆ ಜರಗಿತು. ಡಾ| ಅಂಬೇಡ್ಕರ್‌ ವೃತ್ತದಿಂದ ದ. ಕನ್ನಡ ಜಿಲ್ಲಾಧಿಕಾರಿ ಕಚೇರಿ ತನಕ ನಡೆದ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಮಹಿಳಾ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

      ಇತ್ತೀಚೆಗೆ ಹೋಂ ಸ್ಟೇ ಮೇಲೆ ದಾಳಿ ನಡೆಸಿದವರ ಮೇಲೆ ಗೂಂಡಾ ಕಾಯ್ದೆಯಡಿ ಕಠಿನ ಕಾನೂನು ಕ್ರಮ ತೆಗೆದುಕೊಳ್ಳುವುದರ ಜೊತೆಯಲ್ಲಿ ಈ ದಾಳಿಯ ಪ್ರಾಯೋಜಕರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ದಾಳಿ ಪ್ರಕರಣ ಬೆಳಕಿಗೆ ಬರಲು ಕಾರಣವಾದ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಖಲಾಗಿರುವ ಕೇಸುಗಳನ್ನು ಹಿಂದೆಗೆಯಬೇಕು. ಸಂಘ ಪರಿವಾರದ ವಿವಿಧ ಸಂಘಟನೆಗಳನ್ನು ನಿಷೇಧಿಸಬೇಕು, ಪಕ್ಷಪಾತಿ ನೀತಿ ಅನುಸರಿಸುತ್ತಾ ಇಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿ, ಪೊಲೀಸ್‌ ಕಮೀಶನರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ವರ್ಗಾಯಿಸಬೇಕು ಎನ್ನುವುದು ಸಂಘಟನೆಯ ಕೆಲವು ಪ್ರಮುಖ ಬೇಡಿಕೆಗಳು.

      ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ, ಲೇಖಕಿ ಬಿ. ಟಿ. ಲಲಿತಾ ನಾಯಕ್‌ ಅವರು, ದೇಶದ ಸಂವಿಧಾನಕ್ಕೆ ಗೌರವ ಸೂಚಿಸುವುದು ಎಲ್ಲ ಪ್ರಜೆಗಳ ಕರ್ತವ್ಯವಾಗಿದೆ. ಪ್ರತಿಯೋರ್ವರನ್ನು ಮನುಷ್ಯನಾಗಿ ಕಾಣುವುದು ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವುದೇ ಧರ್ಮ ಎಂದು ಪ್ರತಿಪಾದಿಸಿದರು.

      ಅಹಿತಕರ ಘಟನೆಯನ್ನು ನೆಪಮಾತ್ರಕ್ಕೆ ಖಂಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಈ ಘಟನೆಯಲ್ಲಿ ದಾಳಿ ನಡೆಸಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬದಲು ವಿಷಯಾಂತರ ನಡೆಸುವ ಪ್ರಯತ್ನ ನಡೆಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮುಖ್ಯ ಅತಿಥಿ ಪ್ರೊ| ಸಬೀಹಾ ಭೂಮಿ ಗೌಡ ಅವರು ಆಕ್ಷೇಪಿಸಿದ್ದಾರೆ.

      ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಫಿಲೋಮಿನಾ ಪೆರಿಸ್‌, ಪತ್ರಕರ್ತೆ ಗೌರಿ ಲಂಕೇಶ್‌, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೆ. ಎಲ್‌. ಅಶೋಕ್‌, ಎಐಸಿಸಿ ಸದಸ್ಯ ಪಿ. ವಿ. ಮೋಹನ್‌, ಮುಖಂಡರಾದ ಲೋಲಾಕ್ಷ, ಸುರೇಶ ಭಟ್‌ ಬಾಕ್ರಬೈಲು, ಅಲಿ ಹಸನ್‌, ಫಾ| ವಿಲಿಯಂ ಮಾರ್ಟಿಸ್‌, ಕೃಷ್ಣಾನಂದ, ಫ‌ಣಿರಾಜ್‌ ಕೆ., ಗಿರೀಶ್‌ ಕುಮಾರ್‌, ತುಫೈಲ್‌, ಮೊಹಮ್ಮದ್‌ ಕಕ್ಕಿಂಜೆ ಮುಂತಾದವರು ಉಪಸ್ಥಿತರಿದ್ದರು.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus