Udayavani | Aug 05, 2012
ಮುಂಬಯಿ: ಡಾ| ಜಿ. ಡಿ. ಜೋಶಿ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ತಿಂಗಳಿಗೊಮ್ಮೆ ಜರಗುವ ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮ ಆ. 11 ರಂದು ಶನಿವಾರ ಸಂಜೆ 5.00 ಗಂಟೆಗೆ ಥಾಣೆ ಪಶ್ಚಿಮದ ಯಶೋಧಾಮ ಬಸ್ ನಿಲುಗಡೆ ಎದುರಿನ ಜೆ. ಕೆ. ಗ್ರಾಮ, ಕರ್ವೆಲೋ ನಗರದ ವೀರ್ ಸಾವರ್ಕರ್ ಆಸ್ಪತ್ರೆ ಸಮೀಪದ ದುರ್ಗಾ ಆಪಾರ್ಟ್ಮೆಂಟ್ನ ಮನೆ ಕ್ರಮಾಂಕ 204ರ ಡಾ| ವಾಣಿ ಎನ್. ಉಚ್ಚಿಲ್ಕರ್ ಅವರ ಮನೆಯಲ್ಲಿ ನಡೆಯಲಿದೆ. ಸಾಹಿತಿಗಳು ತಮ್ಮ ತಮ್ಮ ಕವನ, ಚುಟುಕ, ಸಣ್ಣಕಥೆ, ನಾಟಕದ ಒಂದು ದೃಶ್ಯ, ವಿಮರ್ಶೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು 5-10 ನಿಮಿಷಗಳಲ್ಲಿ ಪ್ರಸ್ತುತ ಪಡಿಸಬಹುದು. ನಂತರ ಅವುಗಳ ಬಗ್ಗೆ ಸೇರಿದ ಸಾಹಿತಿಗಳಿಂದ ಮುಕ್ತ ಚರ್ಚೆ ನಡೆಯಲಿದೆ.
ಹೆಚ್ಚಿನ ವಿವರಗಳಿಗಾಗಿ ಡಾ| ಜಿ. ಡಿ. ಜೋಶಿ(25231260), ಪ್ರಾ| ವೆಂಕಟೇಶ ಪೈ(9224102053/9869921397), ಡಾ| ಕರುಣಾಕರ ಶೆಟ್ಟಿ(9869057913), ಎಚ್. ಎಸ್. ಆಡೂರ್(28703702) ಅವರನ್ನು ಸಂಪರ್ಕಿಸಬಹುದು.