ಸೊಲ್ಹಾಪುರ : ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನನ್ನ ರಾಜಕೀಯ ಗುರು. ನನ್ನ ರಾಜಕೀಯ ವೃತಿ ಜೀವನದಲ್ಲಿ ಸದಾ ನೆರವು ಒದಗಿಸುತ್ತಿದ್ದರು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರವಿವಾರ ಇಲ್ಲಿ ಹೇಳಿದ್ದಾರೆ.ಇದೇವೇಳೆ, ತಾನು ಲೋಕಸಭೆಯಲ್ಲಿ ಸದನ ನಾಯಕನಾಗಲು ಪವಾರ್ ವಿರೋಧಿಸಿದ್ದರು ಎಂಬ ವರದಿಗಳನ್ನು ಶಿಂದೆ ತಳ್ಳಿ ಹಾಕಿದರು.ಪವಾರ್ ಸಣ್ಣಹೃದಯದ ಮನುಷ್ಯನಲ್ಲ. ನಾನು ಸದನ ನಾಯಕನಾಗಲು ಪವಾರ್ ವಿರೋಧಿಸಿಲ್ಲ. ವಾಸ್ತವ ಏನೆಂದರೆ ಅವರೇ ಎರಡು ಬಾರಿ ದೂರವಾಣಿ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದೊಂದು ಕಾಂಗ್ರೆಸ್ ಪಕ್ಷದ ವಿಷಯವಾಗಿದೆ. ಹಾಗಾಗಿ ಇದರಲ್ಲಿ ಅವರೇನೂ ಮಾಡಿಲ್ಲ ಎಂದರು.