ಚಿತ್ರ-ವರದಿ : ರೋನ್ಸ್ ಬಂಟ್ವಾಳ್ | Aug 11, 2012
ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕೇಂದ್ರ ಕಚೇರಿ, ಸಾಂತಾಕ್ರೂಜ್ ಪೂರ್ವದಲ್ಲಿರುವ ಬಿಲ್ಲವ ಭವನದಲ್ಲಿ ಕೇಂದ್ರ ಕಚೇರಿಯ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಅಸೋಸಿಯೇಶನ್ನ ಗೌರವಾಧ್ಯಕ್ಷ ಜಯ ಸಿ.ಸುವರ್ಣ, ಅಧ್ಯಕ್ಷ ಎಲ್.ವಿ.ಅಮೀನ್ ಮತ್ತು ಸುಧಾ ವಿ. ಅಮೀನ್ ದಂಪತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಭಾರತ್ ಕೋ. ಆಪರೇಟಿವ್ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ರೋಹಿಣಿ ಸಾಲ್ಯಾನ್ ಅವರು ದೀಪ ಬೆಳಗಿಸಿ ತೆಂಗಿನಗರಿಯನ್ನು ಅರಳಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಸಿ.ಟಿ.ಸಾಲ್ಯಾನ್, ಭಾಸ್ಕರ ಎಂ. ಸಾಲ್ಯಾನ್, ಚಂದ್ರಶೇಖರ ಎಸ್. ಪೂಜಾರಿ, ಅಕ್ಷಯದ ಗೌರವ ಪ್ರಧಾನ ಸಂಪಾದಕ ಎಂ.ಬಿ. ಕುಕ್ಯಾನ್, ಹಿರಿಯರಾದ ವೈ. ನಾಗೇಶ್, ಗೌರವ ಪ್ರಧಾನ ಕೋಶಾಧಿಕಾರಿ ಭಾಸ್ಕರ ಬಂಗೇರ, ಎಸೋಸಿಯೇಶನಿನ ಪದಾಧಿಕಾರಿಗಳಾದ ಶಂಕರ ಡಿ.ಪೂಜಾರಿ, ಮಹೇಶ್ ಕಾರ್ಕಳ, ರಾಜೇಶ್ ಬಂಗೇರ, ಸಚಿನ್ ಎಸ್.ಪೂಜಾರಿ, ಡಾ| ಯು ಧನಂಜಯ ಕುಮಾರ್, ಗಂಗಾಧರ ಜೆ. ಪೂಜಾರಿ, ಸದಾಶಿವ ಕರ್ಕೆàರ, ಗಣೇಶ್ ಕೆ.ಪೂಜಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಉಪಾಧ್ಯಕ್ಷೆಯರಾದ ಶ್ರೀಮತಿ ಎಸ್.ಪೂಜಾರಿ, ಪ್ರಭಾ ಕೆ. ಬಂಗೇರ, ಗೌ| ಕಾರ್ಯದರ್ಶಿ ಚಂದ್ರಕಲಾ ಸುವರ್ಣ, ಪದಾಧಿಕಾರಿಗಳಾದ ಸುಮಿತ್ರಾ ಎಸ್.ಬಂಗೇರ, ಸುಮಲತಾ ವಿ. ಅಮೀನ್, ವಿಲಾಸಿನಿ ಸಾಲ್ಯಾನ್, ಲಕ್ಷಿ$¾à ಕೋಟ್ಯಾನ್, ಪ್ರಮೀಳಾ ಕೋಟ್ಯಾನ್, ಗೀತಾಂಜಲಿ ಸಾಲ್ಯಾನ್, ಆಶಾಲತಾ ಕೋಟ್ಯಾನ್, ಗಿರಿಜಾ ಪೂಜಾರಿ, ಜಯಂತಿ ಕೋಟ್ಯಾನ್, ವತ್ಸಲಾ ಪೂಜಾರಿ, ಶೋಭಾ ಪೂಜಾರಿ, ಸಭಿತಾ ಪೂಜಾರಿ ಸೇರಿದಂತೆ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸ್ಥಳೀಯ ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಕುಂತಳಾ ಕೋಟ್ಯಾನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕಾರ್ಯದರ್ಶಿ ಚಂದ್ರಕಲಾ ಸುವರ್ಣ ಧನ್ಯವಾದಗೆ„ದರು.