ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ನವರು ಇತ್ತೀಚೆಗೆ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಯೋಜಿಸಿದ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮದಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದರು ಪ್ರಸ್ತುತ ಪಡಿಸಿದ "ಜಾಂಬವತಿ ಕಲ್ಯಾಣ' ಆಖ್ಯಾನದಲ್ಲಿ ರಸಿಕರನ್ನು ರಂಜಿಸಿದ ಕಲಾತ್ಮಕ ಕ್ಷಣಗಳಿವು. ಈ ಸಂದರ್ಭದಲ್ಲಿ ಹಿರಿಯ ಮದೆಗಾರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಪದ್ಯಾಣ ಶಂಕರನಾರಾಯಣ ಭಟ್ರನ್ನು ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಮಾನೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.ಫೊಟೊಗಳು : ಜನಾರ್ದನ ಹಾವಂಜೆ, ಕಾರ್ತಿಕ ಸುಬ್ರಹ್ಮಣ್ಯ ಕರ್ಗಲ್ಲು