Udayavani | Dec 23, 2012
ಹುಬ್ಬಳ್ಳಿ: ಇರಾನಿ ಜನಾಂಗದ ಆರು ಜನರ ತಂಡ ದರೋಡೆ ಮಾಡಲು ಹೊಂಚು ಹಾಕಿ ನಿಂತಿದ್ದಾಗ ಕೇಶ್ವಾಪುರ ಠಾಣೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ನಡೆಯಬೇಕಾಗಿದ್ದ ದರೋಡೆ ತಪ್ಪಿದಂತಾಗಿದೆ.
ಶನಿವಾರ ಬೆಳಗಿನ 4 ಗಂಟೆ ಸುಮಾರಿಗೆ ಇಲ್ಲಿನ ಗದಗ ರಸ್ತೆ ರೇಲ್ನಗರ ಕ್ವಾರ್ಟರ್ಸ್ ಬಳಿ ದರೋಡೆಗೆ ಹೊಂಚು ಹಾಕಿ ನಿಂತಿದ್ದ ಪುನೆಯ ಶಿವಾಜಿನಗರ ಜೋಪಡಿಪಟ್ಟಿಯ ತಾಲಿಬ್ ಹುಸೇನ ಇರಾನಿ, ಮಹಮ್ಮದ ಹುಸೇನ ಇರಾನಿ, ಬೆಂಗಳೂರಿನ ಅಲಿಶಿರಾಜ್ ಇರಾನಿ, ಸಾದಿಕ್ಅಲಿ ಇರಾನಿ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಎಸಿಪಿ ಎ.ಆರ್. ಬಡಿಗೇರ ನೇತೃತ್ವದಲ್ಲಿ ಠಾಣೆ ಇನ್ಸ್ಪೆಕ್ಟರ್ ಪ್ರಭುಗೌಡ ಪಾಟೀಲ ಹಾಗೂ ಸಿಬ್ಬಂದಿ ದಾಳಿ ಮಾಡಿ, ಬಂಧಿತರಿಂದ 3 ಬೈಕ್, 2 ರಾಡ್, 1 ಕಟ್ಟಿಗೆ ತುಂಡ, ಖಾರದ ಪುಡಿ ವಶಪಡಿಸಿಕೊಂಡಿದ್ದಾರೆ.
ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.