Monday, May 20, 2013
Last Updated: 12:30:54 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • 3 ವರ್ಷ ದಿವಂಗತ್‌!
    • ದಿಗಂತ್‌ ಡೇಟ್‌ ಕೊಡಲಿಲ್ಲ; ಕರಣ್‌ ''''ಪಾನೀಪುರಿ'' ತಿನಿಸಲಿಲ್ಲ

      • Udayavani | Jan 26, 2013

        ದಿಗಂತ್‌ ಡೇಟ್‌ ಕೊಡಲಿಲ್ಲ; ಕರಣ್‌ 'ಪಾನೀಪುರಿ' ತಿನಿಸಲಿಲ್ಲ
        ಇದು ಮತ್ತೂಂದು ವಿವಾದದ ಮುನ್ಸೂಚನೆ. ವಿವಾದದ ಕೇಂದ್ರ ಬಿಂದು ನಟ ದಿಗಂತ್‌ ...
        ವಿಷಯ ಏನಪ್ಪಾ ಅಂದರೆ, 'ಕನಸುಗಾರ' ಎಂಬ ಚಿತ್ರ ಮಾಡಿದ್ದ ನಿರ್ದೇಶಕ ಕರಣ್‌, ದಿಗಂತ್‌ ಅಭಿನಯದಲ್ಲಿ ಸಿನಿಮಾ ಮಾಡೋಣ ಎಂದು ಮೂರು ವರ್ಷದ ಹಿಂದೆ ಹೋದರಂತೆ. ಕಥೆ ಹೇಳಿದ್ದು, 23 ಲಕ್ಷ ಸಂಭಾವನೆ ಮಾತಾಡಿದ್ದು, ಮುಂಗಡವಾಗಿ ಮೂರು ಲಕ್ಷ ಕೊಟ್ಟಿದ್ದು, ಕರಣ್‌ ನಿರ್ದೇಶನದಲ್ಲಿ ದಿಗಂತ್‌ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿದ್ದು ... ಎಲ್ಲಾ ಆಗಿದೆ. ಆದರೆ, ಇದುವರೆಗೂ ಚಿತ್ರ ಮಾತ್ರ ಸೆಟ್ಟೇರಿಲ್ಲ ಎಂಬುದು ಕರಣ್‌ ಬೇಸರ.
        ಕರಣ್‌ ಹೇಳುವಂತೆ ಅವರು ದಿಗಂತ್‌ರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು 2010ರ ಜನವರಿಯಲ್ಲಿ. ಆಗಲೇ ಕಥೆ ಹೇಳಿ ಒಪ್ಪಿಸಿದರಂತೆ. ದಿಗಂತ್‌ ಕಥೆ ಕೇಳಿ ಏಪ್ರಿಲ್‌ಗೆ ಡೇಟ್‌ಗೆ ಕೊಡುವುದಾಗಿ ಹೇಳಿದರಂತೆ. ನಂತರ ಏಪ್ರಿಲ್‌ ಇದ್ದಿದ್ದು ಜೂನ್‌, ನಂತರ ಸೆಪ್ಟೆಂಬರ್‌, ಕೊನೆಗೆ 2011ರವರೆಗೂ ಕಾಲ್‌ಶೀಟ್‌ ಮುಂದಕ್ಕೆ ಹೋಯಿತಂತೆ. ಈ ಸಮಯದಲ್ಲಿ ಕರಣ್‌, ಜೋಶ್ವಾ ಶ್ರೀಧರ್‌ ಸಂಗೀತ ನಿರ್ದೇಶನದಲ್ಲಿ ಹಾಡುಗಳನ್ನು ಕಂಪೋಸ್‌ ಮಾಡಿಸಿದ್ದಾರೆ. ಚಿತ್ರಕ್ಕೆ ನಿಧಿ ಸುಬ್ಬಯ್ಯರನ್ನು ಆಯ್ಕೆ ಮಾಡಿದ್ದೂ ಆಗಿದೆ. ಆದರೆ, ದಿಗಂತ್‌ ಮಾತ್ರ ಕರಣ್‌ ಕೈಗೆ ಸಿಗಲಿಲ್ಲವಂತೆ. 2011 ಮುಗಿದು 2012ರ ಮೇ ಬಂದರೂ ಯಾವಾಗ ದಿಗಂತ್‌ರಿಂದ ಸುದ್ದಿ ಬರಲಿಲ್ಲವೋ, ಆ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕನ್ನಡ ಚಿತ್ರ ಕಲಾವಿದರ ಸಂಘಕ್ಕೆ ದೂರು ನೀಡಿದರಂತೆ.
        'ದೂರು ನೀಡಿದ ಮರುದಿನವೇ, ಅಂದರೆ ಮೇ 18ಕ್ಕೆ ದಿಗಂತ್‌ ನಿರ್ಮಾಪಕರ ಸಂಘದಿಂದ ದೂರು ಪ್ರತಿಯನ್ನು ಪಡೆದ ದಿಗಂತ್‌ ಮತ್ತೆ ಎರಡು ತಿಂಗಳ ಕಾಲ ಆಟ ಆಡಿಸಿದರು. ಅವರು ಫೋನ್‌ ಪಿಕ್‌ ಮಾಡಲ್ಲ, ಅವರ ಮ್ಯಾನೇಜರ್‌ ಮುತ್ತು ಸರಿಯಾಗಿ ಸಹಕರಿಸುವುದಿಲ್ಲ. ನಿರ್ಮಾಪಕ ಸಂಘಕ್ಕೆ ದೂರು ಕೊಟ್ಟು ಏಳು ತಿಂಗಳ ನಂತರವೂ ಯಾವಾಗ ಏನೂ ಉತ್ತರ ಬರಲಿಲ್ಲವೋ ಮತ್ತೆ ಸಂಘಕ್ಕೆ ಹೋದೆ. ಆದರೆ, ಅಲ್ಲೂ ದಿಗಂತ್‌ ಸಹಕರಿಸುತ್ತಿಲ್ಲ ಎಂದರು' ಎನ್ನುತ್ತಾರೆ ಕರಣ್‌.
        ಇದೆಲ್ಲದರಿಂದ ಸುಸ್ತಾಗಿದ್ದರಂತೆ ಕರಣ್‌. 'ಮೂರು ವರ್ಷ ವೇಸ್ಟ್‌ ಆಗಿದೆ. ಚಿತ್ರಕ್ಕಾಗಿ ಆಫೀಸ್‌ ತೆರೆದೆ. ಹಾಡುಗಳ ಮುದ್ರಣ ಮಾಡಿಸಿಕೊಂಡೆ. ಈಗ ಅದೇ ಕಥೆಯನ್ನು ಬೇರೆಯವರಿಗೆ ಮಾಡೋಣ ಎಂದರೆ ಯಾರು ಡೇಟ್‌ ಕೊಡುತ್ತಾರೆ ಹೇಳಿ? ದಿಗಂತ್‌ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟರು. ನನಗೆ ಕಾಲ್‌ಶೀಟೂ ಸಿಗಲಿಲ್ಲ, ಕೊಟ್ಟ ಅಡ್ವಾನ್ಸ್‌ ಸಹ ವಾಪಸ್ಸು ಬಂದಿಲ್ಲ. ದುಡ್ಡು ತಗೊಂಡು ಎಸ್ಕೇಪ್‌ ಆಗಿಬಿಟ್ಟಿದ್ದಾರೆ' ಎನ್ನುತ್ತಾರೆ.
        ದಿಗಂತ್‌ ಹೋಗಿದ್ದಾದರೂ ಎಲ್ಲಿಗೆ ಎಂದು ಅವರಿಗೆ ಫೋನ್‌ ಮಾಡಿದರೆ, ಅವರ ಫೋನು 'ಟೆಂಪೊರರಿ ಔಟ್‌ ಆಫ್ ಸರ್ವೀಸ್‌ ...' ಎಂಬ ಉತ್ತರ ಕೊಡುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಭಾನುವಾರ ನಡೆದ ''ರೋಜ್‌' ಚಿತ್ರದ ಮುಹೂರ್ತ ಒಂದಷ್ಟು ವಿಶೇಷಗಳಿಗೆ ಸಾಕ್ಷಿಯಾಯಿತು. ಮುಹೂರ್ತಕ್ಕೆ ಅತಿಥಿಗಳಾಗಿ ಆಗಮಿಸಿದ ಶಿವರಾಜ್‌ ಕುಮಾರ್‌ ದಂಪತಿಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು.
      • ಈ ವಿಭಾಗದಲ್ಲಿಯೂ ಇದೆ
      • picಟೀವಿಕ್ಲಬ್‌ ಗೃಹಪ್ರವೇಶ
        ಅಂತೂ ಟೆಲಿವಿಷನ್‌ ಕಲ್ಚರಲ್‌ ಮತ್ತು ನ್ಪೋರ್ಟ್ಸ್ ಕ್ಲಬ್‌ ಸದ್ದಿಲ್ಲದೆ ಸಾಧನೆ ಮಾಡಿದೆ. ಸ್ವಂತದ್ದೊಂದು ಕಟ್ಟಡ ನಿರ್ಮಾಣಕ್ಕೆ ಸಂಘ ಕೈ ಹಾಕಿ ಎರಡು ವರುಷ ಕಳೆದಿದೆ. ಅಷ್ಟರಲ್ಲೇ ಅದ್ಭುತವಾದ ಕ್ಲಬ್‌ ಕಟ್ಟಡ ನಿರ್ಮಾಣವಾಗಿದೆ.
      image
      • Copyright @ 2009 Udayavani.All rights reserved.
      • Designed & Hosted By 4cplus