ಹೊಸದಿಲ್ಲಿ: ವೀರಪ್ಪನ್ನ ನಾಲ್ವರು ಸಹಚರರ ಗಲ್ಲು ಶಿಕ್ಷೆ ಜಾರಿಯನ್ನು ಸರ್ವೋಚ್ಚ ನ್ಯಾಯಾಲಯ ಫೆ.20ರ ವರೆಗೆ ತಡೆ ಹಿಡಿದೆದೆ.
ವೀರಪ್ಪನ್ನ ನಾಲ್ವರು ಸಹಚರರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ತಮ್ಮ ಗಲ್ಲು ಶಿಕ್ಷೆ ಜಾರಿಯನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ನ ಸಿಜೆ ನೇತೃತ್ವದ ಪೀಠವು ಗಲ್ಲು ಶಿಕ್ಷೆ ಜಾರಿಯನ್ನು ಫೆ.20ರ ವರೆಗೆ ತಡೆಯುವಂತೆ ಆದೇಶ ನೀಡಿದೆ.
ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿದ್ದ ವೀರಪ್ಪನ್ನ ನಾಲ್ವರು ಸಹಚರರೆಂದರೆ ಜ್ಞಾನಪ್ರಕಾಶ, ಸೈಮನ್, ಮೀಸೆಕಾರ ಮಾದಯ್ಯ ಹಾಗೂ ಬಿಲವೇಂದ್ರ. ಇವರ ಗಲ್ಲು ಶಿಕ್ಷೆಗೆ ಕ್ಷಣಗಣನೆ ಆರಂಭವಾಗಿತ್ತು.