ಮುಂಬಯಿ: ಬಂಟರ ಸಂಘ ಸಂಚಾಲಿತ ಕರ್ನಾಟಕ ಧರ್ಮಾರ್ಥ ರಾತ್ರಿ ಶಾಲೆ ಹಾಗೂ ನಿತ್ಯಾನಂದ ರಾತ್ರಿ ಶಾಲೆಗಳ ವಾರ್ಷಿಕ ಕ್ರೀಡೋತ್ಸವವು ಇತ್ತೀಚೆಗೆ ಚರ್ಚ್ಗೇಟ್ನ ಕೆಎಸ್ಎ ಮೈದಾನದಲ್ಲಿ ವಿಜೃಂಭಣೆಯಿಂದ ಜರಗಿತು.ಪ್ರಾರಂಭದಲ್ಲಿ ಶಾಲಾ ಪರಿವೀಕ್ಷಕ ಸಂಜೀವ ಎಂ. ಶೆಟ್ಟಿಯವರು ತೆಂಗಿನಕಾಯಿ ಒಡೆದು ವಿಧ್ಯುಕ್ತವಾಗಿ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಎರಡೂ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಶಾಲೆಗಳ ಮುಖೋಪಾಧ್ಯಾಯರು, ಅಧ್ಯಾಪಕರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.