ಉಡುಪಿ: ಕಮಲಾ ಬಾೖ ವಿಠಲ್ ಪಾಟೀಲ್ ಮೆಮೋರಿಯಲ್ ಟ್ರಸ್ಟ್ನ 2012-13ನೇ ಸಾಲಿನ ವಿದ್ಯಾರ್ಥಿವೇತನವನ್ನು ವಿತರಿಸಲು ಅವಿಭಜಿತ ದ.ಕ. ಜಿಲ್ಲೆಯ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಪದವಿ, ಪಿಜಿ, ವೃತ್ತಿಪರ, ಪಾಲಿಟೆಕ್ನಿಕ್, ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮುದ್ರಿತ ಅರ್ಜಿಗಾಗಿ ಉಡುಪಿ ವಿಭಾಗದವರು ಕೆ. ಭರತ್ ಪ್ರಭು, ಮಂಗಳೂರು ವಿಭಾಗದವರು ಬಿ. ರಾಮ ನಾಯಕ್ ಶಕ್ತಿನಗರ ಮತ್ತು ಬಂಟ್ವಾಳ ವಿಭಾಗದವರು ಡಿ. ಗಣಪತಿ ಶೆಣೈ ಡೆಚ್ಚಾರು ಅವರನ್ನು ಸಂಪರ್ಕಿಸಬಹುದು.ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ ಮಾ. 15 ಎಂದು ಟ್ರಸ್ಟ್ ಅಧ್ಯಕ್ಷ ಕೆ. ಭರತ ಪ್ರಭು ತಿಳಿಸಿದ್ದಾರೆ.