ಉಡುಪಿ: ಅಮ್ಮುಂಜೆ ನಾಯಕ್ ಕುಟುಂಬಿಕರ ಸ್ವಾಮ್ಯಕ್ಕೆ ಒಳಪಟ್ಟಿರುವ ಶ್ರೀ ದಾಮೋದರ ದೇವರ ಪುನಃಪ್ರತಿಷ್ಠಾಪನಾ ಮಹೋತ್ಸವವು ಫೆ.14ರಿಂದ 22ರ ವರೆಗೆ ನಡೆಯಲಿದೆ.ಫೆ. 20ರಂದು ಪೂರ್ವಾಹ್ನ 11.37ಕ್ಕೆ ದೇವಳದ ಮೂಲಕಟ್ಟಡದಿಂದ 200 ಮೀ.ಉತ್ತರದಲ್ಲಿ ನೂತನವಾಗಿ ಶಿಲೆಯಿಂದ ನಿರ್ಮಿಸಲ್ಪಟ್ಟ ದೇವಳದಲ್ಲಿ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಅವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರು ಶ್ರೀ ದಾಮೋದರ ದೇವರ ಪುನಃಪ್ರತಿಷ್ಠೆಯನ್ನು ನೆರವೇರಿಸುವರು. ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.