Sunday, May 19, 2013
Last Updated: 1:15:04 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಔಷಧಗಳಾಗಿ ಜೈವಿಕ ಪದಾರ್ಥ ಹೆಚ್ಚಳ
    • ಡಾ| ಬಿ. ಸುರೇಶ್‌
    • ಮಣಿಪಾಲ: ಸ್ವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಡಾ| ಬಿ. ಸುರೇಶ್‌ ಮಾತನಾಡಿದರು.

      • Udayavani | Feb 18, 2013

        ಉಡುಪಿ: ಮುಂದಿನ ದಿನಗಳಲ್ಲಿ ಔಷಧಗಳಾಗಿ ಜೈವಿಕ ಪದಾರ್ಥಗಳ ಬಳಕೆ ಹೆಚ್ಚಲಿವೆ. ಫಾರ್ಮಾಸಿಸ್ಟ್‌ಗಳು ಸುಧಾರಿತ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಮೈಸೂರು ಜೆಎಸ್ಸೆಸ್‌ ವಿ.ವಿ. ಕುಲಪತಿ, ಫಾರ್ಮಸಿ ಕೌನ್ಸಿಲ್‌ ಆಫ್ ಇಂಡಿಯಾದ ಅಧ್ಯಕ್ಷ ಡಾ| ಬಿ. ಸುರೇಶ್‌ ಕರೆ ನೀಡಿದ್ದಾರೆ.

        ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸ್ಯೂಟಿಕಲ್‌ ಸೈನ್ಸಸ್‌ನ ಸ್ವರ್ಣ ಮಹೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯಸೇವೆ ನೀಡುವಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸಬೇಕು ಎಂದರು.

        ಮಣಿಪಾಲ ವಿ.ವಿ. ಕುಲಾಧಿಪತಿ ಡಾ| ರಾಮದಾಸ್‌ ಎಂ. ಪೈ, ಕುಲಸಚಿವ ಡಾ| ಜಿ.ಕೆ. ಪ್ರಭು ಉಪಸ್ಥಿತರಿದ್ದರು. ಇಂಡಿಯನ್‌ ಹಾಸ್ಪಿಟಲ್‌ ಫಾರ್ಮಾಸಿಸ್ಟ್ಸ್ ಅಸೋಸಿಯೇಶನ್‌ ಅಧ್ಯಕ್ಷ ಎಸ್‌.ಎಲ್‌. ನಾಸಾ ಶುಭ ಕೋರಿದರು. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ, ಪ್ರಾಂಶುಪಾಲ ಡಾ| ಎನ್‌. ಉಡುಪ ವರದಿ ವಾಚಿಸಿದರು. ಉಪಪ್ರಾಂಶುಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್‌ ವಂದಿಸಿದರು.

        ಒಂಬತ್ತು ಮಂದಿ ವಿಶಿಷ್ಟ ಪ್ರಾಕ್ತನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಫಾರ್ಮಾಸ್ಯೂಟಿಕಲ್‌ ರಸಾಯನಶಾಸ್ತ್ರದ ಸಹ ಪ್ರಾಧ್ಯಾಪಕ ಡಾ| ಅಲೆಕ್ಸ್‌ ಜೋಸೆಫ್ ಅವರಿಗೆ ಶ್ರೇಷ್ಠ ಶಿಕ್ಷಕ, ಕ್ವಾಲಿಟಿ ಅಶ್ಯುರೆನ್ಸ್‌ ವಿಭಾಗದ ಹಿರಿಯ ತಾಂತ್ರಿಕ ಕೃಷ್ಣ ಅಮೀನ್‌ ಅವರಿಗೆ ಶ್ರೇಷ್ಠ ಪೂರಕ ಸಿಬಂದಿ ಪ್ರಶಸ್ತಿ ನೀಡಲಾಯಿತು. ಡಾ| ಎನ್‌. ಉಡುಪ ಅವರು ಕೊಡಮಾಡಿದ ವರ್ಷದ ಶಿಕ್ಷಕ ಪ್ರಶಸ್ತಿಯನ್ನು ಫಾರ್ಮಸಿ ಪ್ರಾಕ್ಟಿಸ್‌ ವಿಭಾಗದ ಮುಖ್ಯಸ್ಥ ಡಾ| ಎಂ.ಕೆ. ಉಣ್ಣಿಕೃಷ್ಣನ್‌ ಅವರಿಗೆ, ವರ್ಷದ ಪೂರಕ ಸಿಬಂದಿ ಪ್ರಶಸ್ತಿಯನ್ನು ಲೆಕ್ಕ ವಿಭಾಗದ ಕೃಷ್ಣ ಪ್ರಭು ಅವರಿಗೆ ನೀಡಲಾಯಿತು.




      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus