ಕಾರ್ಕಳ: ಶಿರ್ಲಾಲು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಶ್ರೀ ಸಿದ್ಧಗಿರಿ ಕ್ಷೇತ್ರ ಭಗವಾನ್ ಶ್ರೀ ತೀರ್ಥಂಕರ ಆದಿನಾಥ ಸ್ವಾಮಿಯವರ ಪಂಚಕಲ್ಯಾಣ ಮಹೋತ್ಸವ ಮತ್ತು ಭಗವಾನ್ ಶ್ರೀ ಭರತ ಕೇವಲೀ ಮತ್ತು ಭಗವಾನ್ ಶ್ರೀ ಬಾಹುಬಲಿ ಕೇವಲೀ ಸ್ವಾಮಿಯ ಪ್ರತಿಷ್ಠಾಪನಾ ಮಹೋತ್ಸವ ಪೂರ್ವಕ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಫೆ. 18ರಂದು ಶ್ರೀ ಭೈರವ ಅರಸು ಸಭಾಂಗಣದ ಮಹಾಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ಸಮವಸರಣ ಪೂಜೆ ನಡೆಯಿತು. ಬಳಿಕ ತ್ರಿಮೂರ್ತಿ ಜಿನಬಿಂಬಗಳಿಗೆ ಶ್ರೀ ಸಿದ್ಧಗಿರಿ ಕ್ಷೇತ್ರದ ಪ್ರತಿಷ್ಠಾಪಕರಾದ ಸೇವಾರ್ಥಿ ಎಸ್. ರತ್ನವರ್ಮ ಪೂವಣಿ, ವಿನಂತಿ ದಂಪತಿ ಮತ್ತು ಕುಟುಂಬಸ್ಥರಿಂದ 1008 ಕಲಷಗಳಿಂದ ಮೊದಲದಿನದ ಮಹಾಮಸ್ತಕಾಭಿಷೇಕ ನಡೆಯಿತು.