ಟರ್ಮ್ ಇನ್ಷೊರೆನ್ಸ್‌…


Team Udayavani, Feb 26, 2018, 3:55 PM IST

terms.jpg

ವಿಮೆ ಮಾಡಿಸಬೇಕು ಅಂದರೆ ಎಲ್ಲರೂಟರ್ಮ್ ಇನ್ಷೊರೆನ್ಸ್‌ ಹಿಂದೆ ಬೀಳುತ್ತಾರೆ. ಇದನ್ನು ನೋಡಿಯೋ ಏನೋ ವಿಮಾ ಕಂಪೆನಿಗಳು ಕೂಡ ಸ್ಪರ್ಧೆಗೆ ಇಳಿದು ಬಿಟ್ಟಿವೆ. ಕಡಿಮೆ ದರದಲ್ಲಿ ಹೆಚ್ಚು ಪ್ರೀಮಿಯಂ ಅಂತ.

ಪ್ರೀಮಿಯಂ ಅನ್ನು ತುಲನಾತ್ಮಕವಾಗಿ ನೋಡಲು, ಹಣಕಾಸು ಸೇವೆ ನೀಡುವ ಸಾಕಷ್ಟು ಕಂಪನಿಗಳು ಹಾಗೂ ಮೊಬೈಲ… ಅಪ್ಲಿಕೇಷನ್‌ಗಳು, ಅತೀ ಕಡಿಮೆ ದರದ ಪ್ರೀಮಿಯಂ ತಿಳಿಸುತ್ತವೆ. ಹೀಗೆ ಕನಿಷ್ಠ ದರದಲ್ಲಿ ಗರಿಷ್ಠ ವಿಮಾ ರಕ್ಷಣೆ ನೀಡುವ ಜೀವ ವಿಮಾ ಕಂಪನಿಯ ಮೂಲಕ ಜನರಿಗೆ ಖರೀದಿಸಲು ಆಕರ್ಷಕವೆನಿಸುತ್ತದೆ.

– ಆದರೆ ಲಾಭಾಂಶದ ಜೊತೆಗೆ ವಿಮಾ ರಕ್ಷಣೆ ನೀಡುವ ಪಾಲಿಸಿಗಳಿಂದ ಪಡೆಯುವ ಸಾಕಷ್ಟು ಸವಲತ್ತುಗಳನ್ನು, ಟರ್ಮ್ ಇನ್ಷೊರೆನ್ಸ್‌ ಪಾಲಿಸಿಗಳು ನೀಡುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹಾಗೆಯೇ ಜೀವ ವಿಮೆಯು ದೀರ್ಘ‌ಕಾಲದ ಒಪ್ಪಂದವಾದ ಕಾರಣ ಲಾಭಾಂಶ ನೀಡುವ ಪಾಲಿಸಿಗಳನ್ನು ಪಡೆಯುವುದರಿಂದ ನಿರಂತರ ಉಳಿತಾಯದ ಜೊತೆಗೆ ವಿಮಾ ರಕ್ಷಣೆ ಸಿಗುತ್ತದೆ.  ಮೆಚೂÂರಿಟಿ ನಂತರ ವಿಮಾ ಮೊತ್ತ ಹಾಗೂ ಬೋನಸ್‌ನೊಂದಿಗೆ ಹಾಗೂ ಆದಾಯ ತೆರಿಗೆ ವಿನಾಯಿತಿಯೊಂದಿಗೆ ಉತ್ತಮ ಮೊತ್ತವು ಕೈಸೇರುವುದು. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯ ಅವಧಿಯಲ್ಲಿ ಮಾತ್ರ ವಿಮಾ ರಕ್ಷಣೆ ಇರುತ್ತದೆ. ಅವಧಿಯ ನಂತರ ಯಾವುದೇ ಮೊತ್ತ ಸಿಗುವುದಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಿಂದ ಹಣಕಾಸು ತೊಂದರೆ ಎನಿಸಿದಾಗ ಸಾಲ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಹಾಗೆಯೇ ಹಣಹಿಂದಿರುಗಿಸುವ (ಮನಿಬ್ಯಾಕ್‌) ಯೋಜನೆಗಳಲ್ಲಿ ನಿಯಮಿತ ಕಾಲಕ್ಕೆ ಹಣ ಪಡೆಯುವುದರ ಜೊತೆಗೆ ಪೂರ್ಣಪ್ರಮಾಣದ ವಿಮಾ ರಕ್ಷಣೆ ಮುಂದುವರೆಯುತ್ತದೆ. ಅಲ್ಲದೇ 3ವರ್ಷಕ್ಕೂ ಮೇಲ್ಪಟ್ಟು ಪ್ರೀಮಿಯಂ ಪಾವತಿಸಿದ್ದರೆ ಮುಂದೆ ತುಂಬಲು ಆಗದಿದ್ದರೆ ಸರಂಡರ್‌ ವ್ಯಾಲ್ಯೂ ದೊರೆಯುತ್ತದೆ. ಆದರೆ ಟರ್ಮ್… ಇನ್ಷೊರೆನ್ಸ… ಪಾಲಿಸಿಗಳಲ್ಲಿ ಈ ಸೌಲಭ್ಯವಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಲ್ಲಿ ಪ್ರೀಮಿಯಂ ಪಾವತಿಸುವ ವಿಧಾನ ಅಂದರೆ ವಾರ್ಷಿಕ, ಅರ್ಧವಾರ್ಷಿಕ ಅಥವಾ ತ್ತೈಮಾಸಿಕವಾಗಿ ಪಾವತಿಸುವ ಪ್ರಿಮಿಯಂಗಳಿಗೆ 30ದಿನಗಳ ಗ್ರೇಸ್‌ ಅವಧಿ ಇರುತ್ತದೆ. ಈ ಅವಧಿ ಮೀರಿಯೂ ತಾವು ಪ್ರಿಮಿಯಂ ಅಲ್ಪ ಬಡ್ಡಿಯೊಂದಿಗೆ ಪಾವತಿಸಲು ಅವಕಾಶವಿದೆ. ಆದರೆ ಟರ್ಮ್… ಇನ್ಷೊರೆನ್ಸ್‌ ಪಾಲಿಸಿಗಳಲ್ಲಿ ಗ್ರೇಸ್‌ ಅವಧಿ ಮುಗಿದ ನಂತರ ಮತ್ತೆ ಎÇÉಾ ವೈದ್ಯಕೀಯ ತಪಾಸಣೆ ಮಾಡಿಸಬೇಕಾಗುತ್ತದೆ. ಹಾಗಾಗಿ ಪಾಲಿಸಿಯನ್ನು ರಿವೈವಲ… ಮಾಡದೇ ಹಾಗೇ ಬಿಡುವವರೇ ಜಾಸ್ತಿ.

– ಲಾಭಾಂಶ ನೀಡುವ ಪಾಲಿಸಿಗಳು ಉಳಿತಾಯದ ವಿಧಾನವನ್ನು ನಿರಂತರವಾಗಿಸುತ್ತವೆ. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯಲ್ಲಿ ಉಳಿತಾಯದ ಉದ್ದೇಶವಿಲ್ಲ.

– ಅತೀ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಅತೀ ಹೆಚ್ಚು ವಿಮಾ ರಕ್ಷಣೆ ಕಡಿಮೆ ಪ್ರೀಮಿಯಂ ದರದಲ್ಲಿ ದೊರೆಯುತ್ತದೆ ಎಂದರೆ ಆ ಕಂಪನಿಯ ಲಾಭಾಂಶ ಅಥವಾ ಲೈಫ್ ಫ‌ಂಡ್‌ ಎಷ್ಟಿದೆ ಎಂದು ಗಮನಿಸಬೇಕಾಗುತ್ತದೆ.  ಯಾಕೆಂದರೆ ಬಹಳಷ್ಟು ಜನರಿಂದ ಹಣ ಸಂಗ್ರಹಿಸಿ ವಿಮಾ ರಕ್ಷಣೆಯಾದ ಡೆತ…-ಕ್ಲೇಮ… ನೀಡುವುದು ಕೆಲವೇ ಜನರಿಗೆ. ಹೀಗೆ ಸಂಗ್ರಹಿಸಿದ ಮೊತ್ತದ ಅತೀ ಹೆಚ್ಚು ಹಣವು ಬರೀ ಡೆತ್‌-ಕ್ಲೈಮ… ನೀಡಲು ವಿನಿಯೋಗವಾದಲ್ಲಿ ಆ ಕಂಪನಿಯ ಆರ್ಥಿಕ ಪರಿಸ್ಥಿತಿ ಏನಾಗಬಹುದೆಂದು ನೀವೇ ಊಹಿಸಿ. ಹೀಗೆ ಕಂಪನಿಯ ಹಣಕಾಸು ಪರಿಸ್ಥಿತಿ ಅಧೋಗತಿಗೆ ಬಂದಾಗ ಅಥವಾ ಲೈಫ‌… ಫ‌ಂಡ… ಗೆ ಹಾನಿಯಾದಾಗ, ಆ ಕಂಪನಿಯು ನೀಡಿದ ಭರವಸೆಯನ್ನು ಈಡೇರಿಸುವುದು ಕಷ್ಟ. ಇಲ್ಲದೇ ಇದ್ದರೆ ಡೆತ…-ಕ್ಲೇಮ… ಪಡೆಯುವ ಕುಟುಂಬದವರಿಗೆ ಏನೋ ಸಬೂಬು ಹೇಳಿ ಕ್ಲೇಮ… ಹಣ ನೀಡುವಲ್ಲಿ ನಿರಾಕರಿಸಬಹುದು. ಹಾಗಾಗಿ ನಾವು ವಿಮಾ ರಕ್ಷಣೆ ಪಡೆಯುವಾಗ ಕಡಿಮೆ ದರದ ಪ್ರಿಮಿಯಂನಲ್ಲಿ ದೊರೆಯುತ್ತದೆ ಎಂದು ವಿಮೆ ಮಾಡಿಸುವುದಕ್ಕಿಂತ,  ಆ ಕಂಪನಿಯ ಆರ್ಥಿಕ ಸದೃಢತೆ ಕಡೆಗೆ ಗಮನಹರಿಸಬೇಕು.  ಜೀವ ವಿಮೆಯನ್ನು ಪಡೆಯುವುದು ನಮ್ಮ ಆಪತ್ಕಾಲದಲ್ಲಿ ನಮ್ಮ ಕುಟುಂಬದವರಿಗೆ ಆರ್ಥಿಕ ಸಹಾಯ ಸುಲಭವಾಗಿ ದೊರೆಯಲೆಂದು. ಆದರೆ ಈ ಉದ್ದೇಶ ಈಡೆರದೇ ಇದ್ದಲ್ಲಿ ಎಷ್ಟೇ ದೊಡ್ಡ ವಿಮಾ ರಕ್ಷಣೆ ಪಡೆದರೂ ವ್ಯರ್ಥ. ಹಾಗಾಗಿ ಜೀವ ವಿಮೆ ಪಡೆಯುವಾಗ ಲಾಭಾಂಶ ನೀಡುವ ವಿಮಾ ಯೋಜನೆ ಪಡೆಯುವುದೋ ಅಥವಾ ಟರ್ಮ್… ಇನ್ಷೊರೆನ್ಸ್‌ ಪಡೆಯುವುದೋ ಎನ್ನುವುದುನಿ ‌ಮ್ಮ ವಿವೇಚನೆಗೆ ಬಿಟ್ಟದ್ದು.

– ಜೆ.ಸಿ.ಜಾಧವ.

ಟಾಪ್ ನ್ಯೂಸ್

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.