ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ
Team Udayavani, Aug 8, 2022, 6:25 AM IST
ಸರ್ದಾರ್ ಸಿಂಗ್ಜಿ ರಾವ್ಜಿ ರಾಣ (1870-1957)
ಶಾಲೆಯಲ್ಲಿ ಮೋಹನ್ದಾಸ್ ಗಾಂಧಿಯವರ ಸಹಪಾಠಿಯಾಗಿದ್ದ ಸರ್ದಾರ್ ಸಿಂಗ್ಜಿ ರಾವ್ಜಿ ರಾಣ ಅವರು ತಮ್ಮ ಬ್ಯಾರಿಸ್ಟರ್ ಓದಿನ ಬಳಿಕ ಪ್ಯಾರಿಸ್ಗೆ ತೆರಳಿದರು. ಅಲ್ಲಿನ ಕ್ಯಾಂಬೆ ಆಭರಣ ವ್ಯಾಪಾರಿಗಳಿಗೆ ಸಹಾಯಕರಾಗಿದ್ದರು. ಅನೇಕ ಭಾರತೀಯ ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. 1905ರಲ್ಲಿ ಇಂಡಿಯನ್ ಹೋಮ್ರೂಲ್ ಸೊಸೈಟಿ ಸಂಸ್ಥಾಪನ ಸದಸ್ಯರಾದರು. ಸಾವರ್ಕರ್ ಅವರ ನಿಷೇಧಿತ ಪುಸ್ತಕಗಳ ಮುದ್ರಣ, ಲಾಲಾ ಲಜಪತ್ರಾಯ್ ಅವರು ತಂಗಲು ಅವಕಾಶ ಸೇರಿದಂತೆ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು.
ನರಸಿಂಹ ಚಿಂತಮನ್ ಕೇಳ್ಕರ್ (1872-1962)
ಬಾಲಗಂಗಾಧರ ತಿಲಕರ ನಿಕಟವರ್ತಿಯಾಗಿದ್ದ ನರಸಿಂಹ ಚಿಂತಮನ್ ಕೇಳ್ಕರ್ ಮರಾಠಿ ಬರಹಗಾರರಾಗಿ, ವಕೀಲರಾಗಿ, ರಾಷ್ಟ್ರೀಯವಾದಿ ನಾಯಕನಾಗಿ ಕಾಣ ಸಿಗುತ್ತಾರೆ. ಗಾಂಧೀಜಿ ಅವರ ಅಸಹಕಾರ ಚಳವಳಿ ಬಳಿಕ ಸ್ವರಾಜ್ ಪಕ್ಷವನ್ನು ಸೇರಿದರು. ತಿಲಕರ ನಿಧನಾನಂತರ ಕೇಸರಿ ಪತ್ರಿಕೆಯ ಸಂಪಾದಕರಾಗಿ, ಟ್ರಸ್ಟಿಯಾಗಿ ಹಲವು ವರ್ಷ ನಡೆಸಿದರು. ಸಾಹಿತಿ ಸಾಮ್ರಾಟ್ ತಾತ್ಯಾಸಾಹೇಬ್ ಕೇಳ್ಕರ್ ಎಂದೇ ಪ್ರಸಿದ್ದರು.
ಪುರುಷೋತ್ತಮ್ ದಾಸ್ ತಂಡನ್(1882-1962)
ವಂಗಭಂಗ ಚಳವಳಿಯಿಂದ ಪ್ರಭಾವಿತರಾದ ಪುರುಷೋತ್ತಮ್ ದಾಸ್ ತಂಡನ್ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರು. ಕಾಂಗ್ರೆಸ್ಗೆ ಹತ್ತಿರವಾಗಿ ಗೋಪಾಲಕೃಷ್ಣಗೋಖಲೆ ಅವರ ಅಂಗ ರಕ್ಷಕರಂತೆ ಅಧಿವೇಶನದಲ್ಲಿ ಭಾಗವಹಿಸಿ ದರು. ವಕೀಲರಾಗಿದ್ದ ಅವರು 1931ರ ದುಂಡು ಮೇಜಿನ ಸಮ್ಮೇಳನದ ಅನಂತರ ಭಾರತದಲ್ಲಿ ಬಂಧಿತರಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಂಡನ್ ಕೂಡ ಇದ್ದರು.
ವಿನಾಯಕ ದಾಮೋದರ ಸಾವರ್ಕರ್(1883-1966)
ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ಚೇತನ ವಿನಾಯಕ ದಾಮೋ ದರ ಸಾವರ್ಕರ್. ದೇಶದ ವಿವಿಧ ವಿಷಯಗಳ ಬಗ್ಗೆ ಚಿಂತಿಸಿದ ವಾಗ್ಮಿ, ಲೇಖಕ, ಇತಿಹಾಸಕಾರ, ಕವಿ, ತತ್ವಶಾ ಸ್ತ್ರಜ್ಞ. ಕ್ರಾಂತಿಕಾರಿಯಾಗಿ ಅವರು ಬರೆದ ಪುಸ್ತಕಗಳನ್ನು ಬ್ರಿಟಿಷ್ ಸರಕಾರ ನಿಷೇಧಿಸಿತ್ತು. ಭಾರತೀಯರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಿದ ಕಾರಣ ಅವರನ್ನು ಕೋಮುವಾದಿ ಎಂದು ಬಣ್ಣಿಸಲಾಗಿತ್ತು.
ಜಿತೇಂದ್ರನಾಥ ಮುಖರ್ಜಿ (1879-1915)
ಬ್ರಿಟಿಷರ ವಿರುದ್ಧ ಸಿಡಿದೆದ್ದ ಯುವಕ ಜಿತೇಂದ್ರನಾಥ್ ಮುಖರ್ಜಿ. ಇವರನ್ನು ಬಾಗಾ ಜತಿನ್ ಎಂದು ಕರೆಯುತ್ತಿದ್ದರು. 1900ರಲ್ಲಿ ಅನುಶೀಲನ ಸಮಿತಿಯ ರಚನೆಗೆ ಕಾರಣರಾದ ಅವರು, ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆದು ರಹಸ್ಯ ಸಭೆಗಳ ಮೂಲಕ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತಿದರು. ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಬಂದೂಕು, ಬಾಂಬ್ಗಳನ್ನು ಬಳಸಿ ಸ್ಫೋಟಗಳನ್ನು ನಡೆಸುತ್ತಿದ್ದರು. ಅಲಿಪೋರ್ ಬಾಂಬ್ ಪ್ರಕರಣದಲ್ಲಿ ಇವರೂ ಆರೋಪಿ.
ಅರವಿಂದ ಘೋಷ್ (1872-1950)
ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರದಲ್ಲಿ ಅಧ್ಯಾತ್ಮದೆಡೆಗೆ ಪರಿವರ್ತನೆಗೊಂಡ ಚೇತನ ಅರವಿಂದ ಘೋಷರು. ಇಂಡಿಯನ್ ಸಿವಿಲ್ ಸರ್ವಿಸ್ನಲ್ಲಿ ಅನುತ್ತೀರ್ಣರಾದ ಅರವಿಂದರೂ ಆಂಗ್ಲ ಪ್ರಾಧ್ಯಾಪಕರಾದರು. ಆ ವೇಳೆಗೆ ಬ್ರಿಟಿಷರು ದೇಶಕ್ಕೆ ಮಾಡುತ್ತಿದ್ದ ಅನ್ಯಾಯವನ್ನು ಅರಿತರು. ವಂದೇ ಮಾತರಂ ಪತ್ರಿಕೆ ಹೊರತಂದು ಬ್ರಿಟಿಷರ ವಿರುದ್ಧ ಕ್ರಾಂತಿ ಕಾರಿ ಚಿಂತನೆಗಳನ್ನು ಜಾಗೃತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ