ಚಿಂತನೆ: ಬೈರೂತ್‌ ಸ್ಫೋಟ: ಜಗತ್ತಿಗೆ ಕಲಿಸುತ್ತಿರುವ ಪಾಠ!


Team Udayavani, Aug 13, 2020, 5:50 PM IST

ಚಿಂತನೆ: ಬೈರೂತ್‌ ಸ್ಫೋಟ: ಜಗತ್ತಿಗೆ ಕಲಿಸುತ್ತಿರುವ ಪಾಠ!

ಆಗಸ್ಟ್ 5ರಂದು ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭಯಾನಕ ಸ್ಫೋಟವು 200ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, 7 ಸಾವಿರಕ್ಕೂ ಅಧಿಕ ಜನರನ್ನು ಗಾಯಗೊಳಿಸಿತು. ಈ ಸ್ಫೋಟದಿಂದಾಗಿ ಕನಿಷ್ಠ 10-15 ಶತಕೋಟಿ ಡಾಲರ್‌ಗಳಷ್ಟಾ ದರೂ ಆಸ್ತಿಪಾಸ್ತಿ ನಾಶವಾಗಿದ್ದು, ಇದು ಸರಿಸುಮಾರು 3 ಲಕ್ಷ ಜನರನ್ನು ನಿರ್ವಸತಿಗರನ್ನಾಗಿಸಿದೆ. ಈ ಸ್ಫೋಟದ ತೀವ್ರತೆಯು ಅನೇಕ ದೇಶಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳು ಹಿಸಿದೆ.

2013ರಿಂದ ಬೈರೂತ್‌ ಬಂದರಿನಲ್ಲಿ ಶೇಖರಣೆಯಲ್ಲಿದ್ದ 2,750 ಟನ್‌ ಅಮೋನಿಯಂ ನೈಟ್ರೇಟ್‌ನಿಂದಾಗಿ ಬೃಹತ್‌ ಸ್ಫೋಟ ಕಾಣಿಸಿಕೊಂಡಿದೆ. ಅದನ್ನು ಸಾಗಿಸಿದ ಹಡಗು ಕಾಣದಂತಾಯಿತು ಮತ್ತು ಅದರ ಮಾಲೀಕ ಆ ಹಡಗನ್ನು ಬಂದರಿನಲ್ಲೇ ಎಂದೋ ಬಿಟ್ಟುಹೋಗಿದ್ದನಂತೆ. 1947ರಲ್ಲೂ ಇದೇ ರೀತಿ ಅಮೆರಿಕದ ಟೆಕ್ಸಾಸ್‌ನಲ್ಲಿ ಬಂದರು ಪ್ರದೇಶದಲ್ಲಿ ಅಮೋನಿಯಂ ನೈಟ್ರೇಟ್‌ ಸಾಗಿಸುತ್ತಿದ್ದ ಹಡಗನ್ನು ನಿಲ್ಲಿಸಲು ಯತ್ನಿಸಿದಾಗ ಅದು ಬೆಂಕಿಗೆ ಆಹುತಿಯಾಗಿತ್ತು. ಆ ಮಹಾಸ್ಫೋಟವು 1,000 ಕಟ್ಟಡಗಳನ್ನು ನಾಶಪಡಿಸಿತ್ತು ಮತ್ತು 500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು!

ಅಮೋನಿಯಂ ನೈಟ್ರೇಟ್‌ ಮೊದಲಿಂದಲೂ ಒಂದಲ್ಲ ಒಂದು ರೀತಿಯ ಅವಘಡಗಳಿಗೆ ಕಾರಣವಾಗಿವೆ. ಈ ಕಾರಣಕ್ಕಾಗಿಯೇ ಹೆಚ್ಚಿನ ದೇಶಗಳು ಈ ರಾಸಾಯನಿಕವನ್ನು ಶೇಖರಿಸಿಡುವ ವಿಚಾರದಲ್ಲಿ ಕಠಿಣ ನಿಯಮಗಳನ್ನು ಹೊಂದಿವೆ. ಆದರೆ ಬೈರೂತ್‌ನಂಥ ಘಟನೆಯು, ಇಂಥ ನಿಯಮಗಳು ಸರಿಯಾಗಿ ಪಾಲನೆಯಾಗುವುದಿಲ್ಲ ಎನ್ನುವುದನ್ನು ಸಾರುತ್ತಿದೆ. ಮತ್ತೂಂದು ಅಂಶವೆಂದರೆ, ಅಮೋನಿಯಂ ನೈಟ್ರೇಟ್‌ ಎಂದಷ್ಟೇ ಅಲ್ಲ, ಇತರೆ ಅಪಾಯಕಾರಿ ವಸ್ತುಗಳನ್ನು ಈಗಲೂ ಪ್ರಪಂಚದಾದ್ಯಂತ ನಿರ್ವಿಘ್ನವಾಗಿ ರವಾನಿಸಲಾಗುತ್ತಿದೆ ಮತ್ತು ಇದರ ಅಕ್ರಮ ವ್ಯಾಪಾರ ನಡೆದೇ ಇದೆ.

2015ರಿಂದ ತಮಿಳುನಾಡಿನ ಚೆನ್ನೈನಲ್ಲಿ ಸುಮಾರು 700 ಟನ್‌ ಅಮೋನಿಯಂ ನೈಟ್ರೇಟ್‌ ಇರುವುದು ಕಂಡು ಬಂದಿದೆ. ಇದು ಸ್ಫೋಟಕ ದರ್ಜೆಯದ್ದಾಗಿದೆ ಮತ್ತು ರಸಗೊಬ್ಬರ ದರ್ಜೆಯದ್ದಲ್ಲ ಎಂದು ಪತ್ತೆಯಾದ ನಂತರ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕಡಲ ಸುರಕ್ಷತಾ ವ್ಯವಸ್ಥೆ ಗಳು ಹೆಚ್ಚಾಗಿ ತಮ್ಮ ಗಮನವನ್ನು ಕಡಲ್ಗಳ್ಳತನ ಅಥವಾ ಭಯೋತ್ಪಾದನೆಯ ಮೇಲೆಯೇ ಕೇಂದ್ರೀಕರಿಸಿರುವುದರಿಂದಾಗಿ, ಅನ್ಯ ಅಪಾಯಗಳ ತಡೆಗಟ್ಟುವಿಕೆ ಪ್ರಾಮುಖ್ಯತೆ ಪಡೆಯುತ್ತಿಲ್ಲ.

ಇಂಟನ್ಯಾಷನಲ್‌ ಮ್ಯಾರಿಟೈಮ್‌ ಆರ್ಗನೈಸೇಶನ್‌ ಪ್ರಕಾರ, 2017ರಿಂದ ವಿಶ್ವಾದ್ಯಂತ ಬಂದರುಗಳಲ್ಲಿ 97 ಹಡಗುಗಳನ್ನು ತ್ಯಜಿಸಲಾಗಿದೆ. ಆದರೆ ಸತ್ಯವೇನೆಂದರೆ, ಪ್ರಪಂಚದಾದ್ಯಂತ ಬಂದರುಗಳಲ್ಲಿ ಈ ರೀತಿ ಕೈಬಿಡಲಾದ ಹಡಗು, ಕಂಟೇನರ್‌ಗಳ ಸಂಖ್ಯೆ ನಿಖರವಾಗಿ ಎಷ್ಟಿದೆ? ಅಥವಾ ಅವುಗಳು ಎಷ್ಟು ಅಪಾಯಕಾರಿ ವಸ್ತುಗಳಿಂದ ತುಂಬಿವೆ ಎಂಬುದರ ಬಗ್ಗೆ ಯಾವುದೇ ವಿಶ್ವಾಸಾರ್ಹ ಅಂದಾಜು ಇಲ್ಲ. ಕೆಲವು ವರದಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಕಂಟೇನರ್ಗಳು – ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ನಂಥ ತ್ಯಾಜ್ಯ ಗಳನ್ನು ಏಷ್ಯನ್‌ ಬಂದರುಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತವೆ ಎಂದು ಈ ವರದಿಗಳು ತಿಳಿಸಿವೆ.

ಕಳೆದ ವರ್ಷವಷ್ಟೇ ಕೊಲಂಬೊದ ಬಂದರು ಅಧಿಕಾರಿಗಳು ಮಾನವ ಅವಶೇಷ ಗಳನ್ನು ಒಳಗೊಂಡಿರಬಹುದಾದ ಕ್ಲಿನಿಕಲ್‌ ತ್ಯಾಜ್ಯದಿಂದ ತುಂಬಿದ 100ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಪತ್ತೆ ಮಾಡಿದ್ದರು! ಈ ಕಂಟೇನರ್‌ಗಳಿಂದ ಆಗುತ್ತಿದ್ದ ಸೋರಿಕೆಯು ಸಾರ್ವಜನಿಕ ಆರೋಗ್ಯ ಭೀತಿಗೆ ಕೂಡ ಕಾರಣವಾಗಿತ್ತು.

ಬೈರೂತ್‌ ದುರಂತವು, ಕಡಲ ಭದ್ರತೆಯ ನಿಯಮಗಳನ್ನು ಮರುಪರಿಶೀಲಿಸುವುದಕ್ಕೆ ಎಲ್ಲಾ ರಾಷ್ಟ್ರಗಳಿಗೂ ಪಾಠ ಕಲಿಸಬೇಕು. ಮುಖ್ಯವಾಗಿ, ಕಾನೂನುಬಾಹಿರವಾಗಿ ಅಪಾಯಕಾರಿ ವಸ್ತುಗಳ ಸಾಗಣೆ ಮತ್ತು ಸಂಗ್ರಹಣೆಗಳನ್ನು ಮಾಡುವ ಮಾಲೀಕರಿಗೆ ಭಾರೀ ದಂಡ, ಕಠಿಣ ಶಿಕ್ಷೆಗಳನ್ನು ನೀಡಿದಾಗ ಮಾತ್ರ ಭವಿಷ್ಯದಲ್ಲಿ ಇಂಥ ಘಟನೆಗಳು ಸಂಭವಿಸುವುದನ್ನು ತಡೆಯಬಹುದಾಗಿದೆ.

ಸಂದೀಪ್‌ ಶರ್ಮಾ ಎಂ., ಸಿವಿಲ್‌ ಎಂಜಿನಿಯರ್‌

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.