ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

‘ಕಾಲೇಜ್ ಶುರುವಾಗಲಿ ನಿನ್ನಾ ನೋಡ್ಕೋತೀನಿ’ ಮಾತಲ್ಲೇ ಸ್ನೇಹ ಸಿಹಿಸವಿ

Team Udayavani, Aug 9, 2021, 1:44 PM IST

Oline Classes

ಆಗತಾನೆ ಆನ್ ಲೈನ್ ತರಗತಿ ಮುಗಿಸಿ  ಪುನಃ ಆಫ್ ಲೈನ್ ತರಗತಿ ಕೇಳಲು  ಕಾಲೇಜಿಗೆ ಬಂದ ಸಮಯವದು. ತರಗತಿಯವರನ್ನು ಕೇವಲ ಆನ್ ಲೈನ್ ಅಲ್ಲಿ ಮಾತಾಡಿಸಿ ಗೊತ್ತಿತ್ತೇ ಹೊರತು ಮುಖಪರಿಚಯ ಇರಲಿಲ್ಲ. ಆದರೂ ವಾಟ್ಸಾಪ್, ಫೇಸ್ ಬುಕ್ ನಲ್ಲಿ ತುಂಬಾ ಚಾಟ್ ಗಳು ನೆಡಿದಿದ್ದವು. ಒಮ್ಮೆಯಾದರು ಮುಖಾ ಮುಖಿ ಮಾತನಾಡಬೇಕು ಎಂಬ ಹಂಬಲ ತುಂಬಾ ಕಾಡುತಿತ್ತು ನಮ್ಮನ್ನು. ಆದರೆ ಅದಕ್ಕೊಂದು ಕಾಲ ಕೂಡಿಬರಬೇಕು ಎಂಬ ಕಾರಣಕ್ಕೆ ಸುಮ್ಮನಿದ್ದೆವು ಅಷ್ಟೇ.

ನಾವು ನಮ್ಮ ಆನ್ ಲೈನ್  ತರಗತಿಯಲ್ಲಿ  ಎಷ್ಟೇ ಮಾತನಾಡಿಕೊಂಡರು, ಒಬ್ಬರನೊಬ್ಬರು ಕಾಲೆಳೆದುಕೊಂಡರು ಮುಖಾ ಮುಖಿಯ ಭೇಟಿಯಾದಾಗ ಸಿಗಬೇಕಾಗಿದ್ದ ಖುಷಿ ಸಿಗುತ್ತಿರಲಿಲ್ಲ. ಹೀಗೆ ನಮ್ಮ ಆನ್ ಲೈನ್ ತರಗತಿ ಮುಂದುವರೆದುಕೊಂಡು ಹೋಯಿತು. ಇನ್ನೇನು ನಮ್ಮ ಒಂದು ಸೆಮಿಸ್ಟರೇ ಪೂರ್ಣಗೊಂಡು ಬಿಡುತ್ತದೆಯೇನೋ ಎನ್ನುವ ಸಂದರ್ಭದಲ್ಲಿ  ಆಪ್ ಲೈನ್ ತರಗತಿಗೆ ಸರ್ಕಾರ ಅನುಮತಿ ನೀಡಿತು.

ಇದನ್ನೂ ಓದಿ : ಮಧ್ಯಪ್ರದೇಶ ಕಲಾಪದಲ್ಲಿ “ಪಪ್ಪು, ಸರ್ವಾಧಿಕಾರಿ” ಶಬ್ದ ಬಳಕೆಗೆ ನಿಷೇಧ;ಕಿರುಹೊತ್ತಗೆ ರಿಲೀಸ್!

ಯಾರ ಮುಖವನ್ನು ಕಾಣದೆ ಬೇಸರಗೊಂಡಿದ್ದ ನಮಗೆ ಎಲ್ಲರ ಮುಖವನ್ನು ಕಾಣುವ ಭಾಗ್ಯಬಂದಿತ್ತು. ನಾವೆಲ್ಲರೂ ಖುಷಿ ಖುಷಿಯಾಗಿಯೇ ಆಪ್ ಲೈನ್ ತರಗತಿಗೆ ಬರುವ ಎಲ್ಲಾ ತಯಾರಿಯನ್ನು ನಡೆಸಿ ಅಂತೂ ಇಂತೂ ಕಾಲೇಜಿನ ಮೆಟ್ಟಿಲನ್ನು ಎರಿದೆವು. ಹೊಸ ಜಾಗ, ಹೊಸ ಮುಖಗಳು, ಹೊಸ ದಿನಚರಿಗಳು ಹೀಗೆ ಎಲ್ಲವೂ ಹೊಸದಾಗಿ ಪ್ರಾರಂಭವಾಗಿತ್ತು. ನಾವು ಆ ಹೊಸತನಕ್ಕೆ ಒಗ್ಗಿಕೊಂಡು ಒಂದು ಹೆಜ್ಜೆ ಮುಂದೆಯಿಡುವ ದಾವಂತದಲ್ಲಿ ಸಾಗುತ್ತಿದ್ದೆವು.

ಬರಿ ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ನೋಡಿದ ಮುಖವನ್ನು ಎಲ್ಲರೂ ಅಂದುಕೊಂಡಂತೆ ಮುಖಾ ಮುಖಿ ಭೇಟಿಮಾಡಿದೆವು. ಕಾಲೇಜಿನ ಮೊದಲ ದಿನವಂತು ಬರಿ ಎಲ್ಲರ ಮುಖ ನೋಡಿಕೊಂಡು ಆನ್ ಲೈನ್ ತರಗತಿಯಲ್ಲಿ ಹೊಡೆದ ಡೈಲಾಗ್ ಗಳನ್ನೂ ನೆನೆದುಕೊಂಡು, ತಮಾಷೆ ಮಾಡಿಕೊಂಡಿಯೇ ಕಳೆದು ಬಿಟ್ಟೆವು. ಎರಡನೇ ದಿನ ಸ್ವಲ್ಪ ಮುಖ ಪರಿಚಯವಾದ್ದರಿಂದ ಮೊದಲ ದಿನಕ್ಕಿಂತಲೂ ಹೆಚ್ಚಿನ ಮಾತು ಕಥೆಗಳು ನಡೆದವು.

ಹೀಗೆ ನಮ್ಮ ಮೊದಲ ವರ್ಷದ ಕಾಲೇಜ್ ದಿನಗಳು ತಮಾಷೆ, ಖುಷಿ, ಪಾಠ, ಕಲಿಯುವಿಕೆ ಇತ್ಯಾದಿಗಳಿಂದ  ಸಾಗುವಾಗ ಮತ್ತೆ ಬ್ರೇಕಿಂಗ್ ನ್ಯೂಸ್ ಬಂತು ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದರಿಂದ ಶಾಲಾ ಕಾಲೇಜುಗಳನ್ನು ಮುಚ್ಚಿ ಆನ್ ಲೈನ್ ತರಗತಿಯನ್ನು ತೆರೆದು ಪಾಠಮಾಡಬೇಕು ಎಂದು. ಪ್ರೀತಿಯಿಂದ ಪಡೆದ ತುತ್ತನ್ನು ಗಂಟಲೊಳಗೆ ಹಾಕಿ ಅರಗಿಸಿಕೊಳ್ಳುವುದರ ಒಳಗೆ ಮತ್ತೊಂದು ಪ್ರೀತಿಯ ತುತ್ತನ್ನು ಪಡೆಯುವಲ್ಲಿ ಸೋತಹಾಗಾಗಿತ್ತು ನಮ್ಮ ಜೀವನ.

ಇನ್ನೇನು ಮಾಡುವುದು ಮತ್ತೆ ಎಲ್ಲಾ ಗಂಟು ಮೂಟೆ ಕಟ್ಟಿಕೊಂಡು ಪುನಃ ನಮ್ಮ ನಮ್ಮ ಮನೆಗೆ ತೆರಳಿ ಬಂದೆವು. ನಾವು ಕಂಡ ಪ್ರವಾಸದ ಕನಸು, ಹುಟ್ಟುಹಬ್ಬದ ಆಚರಣೆ, ಕುಡಿತಿನ್ನುವ ಊಟ, ಪಠ್ಯಕ್ಕೆ ಸಂಬಂಧಿಸಿದ ಪಾಠ ಎಲ್ಲವೂ ಮತ್ತೆ ಛಿಧ್ರ ಛಿಧ್ರವಾದವು. ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್ ಎನ್ನುವ ಹಾಗೆ ನಮ್ಮಲ್ಲೇ ನಾವೇ ಈ ಕೊರೋನಾಕ್ಕೆ ಬೈದು ಸುಮ್ಮನಾದೆವು.

ಈಗ ಮತ್ತದೆ ಆನ್ ಲೈನ್ ತರಗತಿ, ಅದೆ ವಿಡಿಯೋ ಕಾಲ್, ಯಾರಾದರೂ ಕಾಲೆಳೆದಾಗ ‘ಕಾಲೇಜ್ ಶುರುವಾಗಲಿ ನಿನ್ನಾ ನೋಡ್ಕೋತೀನಿ’ ಎಂಬ ಮಾತು, ಕಾಲೇಜ್ ಪ್ರಾರಂಭ ಆದಕೂಡಲೇ ಮುರಿದ ಕನಸಿಗೆ ರೆಕ್ಕೆ ಕಟ್ಟುವ ಆಸೆ. ಹೀಗೆ ಎಲ್ಲವೂ ನಡೆಯುತ್ತಿದೆ. ಇನ್ಯಾವಾಗ ನಮ್ಮ ಬೇಟಿ ಎಂಬ ಪ್ರಶ್ನೆ ಮಾತ್ರ ಎಲ್ಲರ ಮನದಲ್ಲಿ ಹಾಗೆ ಉಳಿದುಕೊಂಡಿದೆ.

-ಮಧುರಾ ಎಲ್. ಭಟ್ಟ

ಎಸ್ ಡಿ ಎಮ್ ಕಾಲೇಜು, ಉಜಿರೆ

ಇದನ್ನೂ ಓದಿ : ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಸಭೆಯಲ್ಲಿ ಹೈಡ್ರಾಮ: ಆಯನೂರು ಮಂಜುನಾಥ್ ಗಲಾಟೆ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

College Campus

ಕರಾವಳಿಯ ಪ್ರಮುಖ ವಾಣಿಜ್ಯ ಕೃಷಿ – ಮಲ್ಲಿಗೆ ಕೃಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.