‘ಪಾನಿಪುರಿ’ ಹೆಸರೇ ಬಾಯಲ್ಲಿ ನೀರೂರಿಸುತ್ತದೆ…

ವಾವ್ಹ್.. ಪಾನಿಪುರಿ ಅದೆಷ್ಟು ರುಚಿ

Team Udayavani, Jun 20, 2021, 4:03 PM IST

Panipuri consists of a round or ball-shaped, hollow puri (a deep-fried crisp flatbread), filled with a mixture of flavored water

ಪ್ರಾತಿನಿಧಿಕ ಚಿತ್ರ

ಪಾನಿಪುರಿ ಹೆಸರು ಕೇಳಿದರೆ ಯಾರಿಗೆ ತಾನೇ ಬಾಯಲ್ಲಿ ನೀರೂರಿವುದಿಲ್ಲ ಹೇಳಿ..? ಎಷ್ಟೇ ದೊಡ್ಡ ಶ್ರೀಮಂತ ವ್ಯಕ್ತಿ ಕೂಡ ತನ್ನ ಭಾರಿ ಭೂರಿ ಭೋಜನಕ್ಕಿಂತಲೂ ಮಿಗಿಲಾದ ರಸಗವಳದ ರುಚಿಯನ್ನು ಈ ಪುಟ್ಟ ಪೂರಿಯಲ್ಲಿ ಕಾಣುವುದೇ ಇದರ ಶ್ರೇಷ್ಠತೆ.

ಬೀದಿಬದಿಯ ಮಹಾರಾಜ ಎಂದೇ ಕರೆಯಿಸಿಕೊಳ್ಳುವ ಪಾನಿಪುರಿ ತನ್ನ ಅನೂಹ್ಯವಾದ ರುಚಿಗೆ ಹೆಸರುವಾಸಿ. ಪೂರ್ತಿಯಾಗಿ ಉಬ್ಬಿದ್ದ ಪುಟ್ಟ ಪೂರಿಯನ್ನು ಮಸಾಲೆ ಮತ್ತು ಪಾನಿಯೊಡನೆ ಇಡಿಯಾಗಿ ಬಾಯಿಯೊಳಗಿಟ್ಟು ಜಗಿದಾಗ ಕುರುಕುರು ಸ್ವರದಲ್ಲಿ ಪುಡಿಯಾಗುವ ಪೂರಿ, ಅದರೊಂದಿಗೆ ಒಸರುವ ರಸ ಒಂದು ಧಾರೆಯಾಗಿ ನಿಮ್ಮ ನಾಲಿಗೆಯ ಅಷ್ಟೂ ರುಚಿ ಸಂವೇದಕಗಳನ್ನು ಆವರಿಸಿ ಬಿಡುತ್ತದೆ.

ಚೂರ್ ಚೂರು ಖಾರ, ಸಿಹಿಯೊಂದಿಗೆ ಬಿಸಿ ಬಿಸಯಾಗಿ ತಿನ್ನುವುದೇ ಒಂದು ರೀತಿಯಲ್ಲ ಮಜ. ಖಾರದ ಸುಳಿವಿನೊಂದಿಗೆ ಸಿಹಿ ಮತ್ತು ಮಸಾಲೆಯುಕ್ತವಾಗಿ ಇರುವ ಪೂರಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಆದರೆ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಅಭಿರುಚಿಯನ್ನು ಹೊಂದಿರುತ್ತಾನೆ.

ಖಾರ ಬೇಕೇ, ಬೇಡವೇ ಕೊಂಚ ಸಿಹಿಯಾಗಿದ್ದರೆ ಒಳಿತೇ, ಹುಳಿ ಹೆಚ್ಚು ಬೇಕೇ, ಬೇಡವೇ ಪಾನಿಪೂರಿ ತಯಾರಾಗುವ ಮುನ್ನ ಅಂಗಡಿಯಾತನಿಗೆ ಹೇಳಿದರೆ ಸಾಕು, ಅದೇ ಕ್ಷಣದಲ್ಲಿ ನಿಮ್ಮೆದುರಗಿಗೆ ರುಚಿ ರುಚಿಯಾಗಿ, ಸಿಹಿ ಖಾರವಾಗಿ ಪುರಿಯೊಳಗಿಂದ ಸಣ್ಣ ಹಬೆಯಾಡುತ್ತಾ, ಅಲಂಕಾರಗೊಂಡು ಸವಿಯಲು ಸಿದ್ಧವಾಗಿರುತ್ತದೆ. ಸಂಜೆ ಹೊತ್ತಿಗೆ, ತಂಗಾಳಿ ಬೀಸವಾಗ ಒಂದು ಪ್ಲೇಟ್ ಪಾನಿಪುರಿ ತಿಂದರೇ, ಆಗುವ ಸಂತೋಷಕ್ಕೆ ಏನು ಹೆಸರಿಡಬೇಕೆನ್ನುವುದೇ ತಿಳಿಯದು..!

ಮಳೆಗಾಲದ ಸಂಜೆಗೆ ಹನಿ ಹನಿ ಸಂಜೆ ಮಳೆ ಬೀಳುವ ಹೊತ್ತ್ತಿಎಗ ಪಾನಿಪುರಿ ಇಲ್ಲದೇ ಇದ್ದರೇ ಆ ದಿನ ಒಂದು ರೀತಿಯಲ್ಲಿ ನಿರಸವೆನ್ನಿಸುತ್ತದೆ. ಮಳೆಯ ಚಳಿಗೆ ಬಿಸಿ ಬಿಸಿ ಪಾನಿಪುರಿಯೋ ಅಥವಾ ಮಸಾಲಪುರಿ ತಿನ್ನುವ ಭರದಲ್ಲಿ ಸಣ್ಣಕ್ಕೆ ನಾಲಿಗೆ ಸುಟ್ಟು ಹೋಗುವುದು, ನಂತರ ಬಿಸಿಯನ್ನು ತಣಿಸಿ ತಿನ್ನುವುದೇ ಕಲ್ಪನೆ ಮಾಡಿಕೊಂಡರೇ ಸಾಕು ತಿಂದಷ್ಟೇ ಹಿತವೆನ್ನಿಸುತ್ತದೆ. ವಾವ್ಹ್.. ಪಾನಿಪುರಿ ಅದೆಷ್ಟು ರುಚಿ. ಕಾಲೇಜು ದಿನಗಳಲ್ಲಿ ಪಾನಿಪರಿಗೆ ಎಡಿಕ್ಟ್ ಆಗದೇ ಇರುವವರು ಬಹಳ ಕಡಿಮೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಒಂದು ಸುತ್ತಿನ ಪಾನಿಪುರಿ ಹೊಟ್ಟೆ ಪೂಜೆ ಆದರೇ ಮಾತ್ರ ಎನೋ ಮನಸ್ಸಿಗೆ ಸಮಾಧಾನ .

ಬೀದಿ ಬೀದಿಯ ಮೂಲೆಯಲ್ಲೂ ಒಂದು ಮಸಾಲಾಪುರಿ ಗಾಡಿ ಕಾಣಲಿಲ್ಲವೆಂದರೆ ಆ ರಸ್ತೆ ಇದ್ದೂ ವ್ಯರ್ಥವೆಂದೇ ಅರ್ಥ. ಸಂಜೆ ಹೊತ್ತಲ್ಲಿ ಇಂಪಾದ ಗಾಳಿ ಹಾಗೂ ಹನಿ ಮಳೆ ಒಂದು ಪ್ಲೇಟ್ ಪಾನಿಪುರಿ… ಸ್ವರ್ಗಕ್ಕೆ ಮೂರೇ ಗೇಣು. ಅದೇನೋ ಗೊತ್ತಿಲ್ಲ ಬೇಡ ಬೇಡ ಅಂದರು ಸೆಳೆಯುವ ಶಕ್ತಿ ಪಾನಿಪುರಿಯಲ್ಲಿದೆ.

ಆಕರ್ಷ ಆರಿಗ

ಎಸ್ ಡಿ ಎಮ್ ಕಾಲೇಜು, ಉಜಿರೆ.

ಇದನ್ನೂ ಓದಿ : ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.