ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!


Team Udayavani, Jul 18, 2021, 7:58 PM IST

18-11

ಮನಸ್ಸು ಎಂದರೆ ಗ್ರಹಿಕೆ, ಯೋಚನೆ, ವಿವೇಚನೆ  ಶಕ್ತಿಗಳ ಸಮೂಹ. ನಮಗೆ ಅರಿವಾಗದಂತೆಯೇ ನಮ್ಮ ಮನಸ್ಸು ಒಮ್ಮೊಮ್ಮೆ ಹತೋಟಿ ತಪ್ಪುತ್ತಿರುತ್ತದೆ. ನಮ್ಮ ಆಲೋಚನೆಗಳನ್ನು ಎಲ್ಲೋ ಸೆಳೆದೊಯ್ಯೊತ್ತದೆ. ಕೆಲವು ಸಂದರ್ಭಗಳಲ್ಲಿ ಈ ಆಲೋಚನೆಗಳೂ ಸ್ಥಿರವಾಗಿ ಇರುವುದಿಲ್ಲ. ಮನಸ್ಸು ಚಂಚಲ.  ಎಲ್ಲವೂ ಸಂಶಯಮಯವೆನಿಸುತ್ತದೆ. ಒಮ್ಮೊಮ್ಮೆ ಮನಸ್ಸು ಗೊಂದಲ ಹಾಗೂ ಚಂಚಲಗಳಿಂದಲೇ ಕೂಡಿ ಇರುತ್ತದೆ ಅನ್ನಿಸುತ್ತದೆ.  ನಮ್ಮಲ್ಲೊಂದು ಅಂತರ್ಗತ ಪ್ರಪಂಚವಿದೆ. ಕಾಲ, ಸ್ಥಿತಿ, ಸಂಬಂದಗಳನ್ನು ಆಧರಿಸಿ ಮನಸ್ಸಿನ ಅಂತರಂಗ ಸಹಜವಾಗಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತಿರುತ್ತದೆ.

ಕೋಪ, ಪ್ರೇಮ, ದ್ವೇಷ, ಭಯ, ದುಃಖ, ಕಳವಳ, ಅಭದ್ರತಾಭಾವನೆ ಇವೆಲ್ಲವೂ ಹುಟ್ಟಿಕೊಳ್ಳಲು ನಮ್ಮ ಮನಸ್ಸಿನ ಅಂತರಂಗದಲ್ಲಿ ಆಗುವ ಬದಲಾವಣೆಗಳೇ ಕಾರಣ. ಅದರಿಂದಾಗಿ ನಮ್ಮ ಅಂತರಂಗವು ಒಮ್ಮೊಮ್ಮೆ ಕಳವಳಕಾರಿಯ ರೀತಿಯಲ್ಲಿರುತ್ತದೆ. ಈ ಭಾವನೆ ಮತ್ತು ವಿಪರೀತವೆನಿಸುವ ಲಕ್ಷಣಗಳನ್ನು ಸಹಜ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ ನೈಪುಣ್ಯತೆ ವರ್ತಮಾನ ಪ್ರಪಂಚಕ್ಕೆ ತುಂಬಾ ಅವಶ್ಯಕ. ನಾವು ಸದಾ ಅಂತರಂಗದತ್ತ ದೃಷ್ಟಿ ಹಾಯಿಸಬೇಕು. ನಮಗೆ ನಾವೇ ಮಥಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಧೋರಣೆಯಲ್ಲಿ ನಮ್ಮ ಆಲೋಚನೆಗಳು ಸಾಗಬೇಕು. ಜೀವನದ ಬಗೆಗಿನ ಅಭದ್ರತಾ ಭಾವನೆಯನ್ನು ದೂರಮಾಡುವ ಕುರಿತಾದ ಮಾರ್ಗಗಳನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

ಜೀವನದ ಕೆಲವು ಘಟ್ಟಗಳಲ್ಲಿ ನಾವು ನಮ್ಮ ಶಿಕ್ಷಣ, ನಮ್ಮ ಕೆರಿಯರ್, ಉದ್ಯೋಗ, ಸಂಬಂಧ, ಅನುಬಂಧ, ಇಂತಹ ವಿಷಯಗಳ ಕುರಿತಾಗಿ ಅಭದ್ರತೆಗೆ ಒಳಗಾಗುದುಂಟು. ನಿರೀಕ್ಷಿಸಿದ್ದು ಕೈ ಸೇರಲಿಲ್ಲ, ಸಂಬಂಧಗಳು ಕಡಿದು ಹೋಗುತ್ತಿವೆಯೇನೋ…. ಇಂತಹ  ಭೀತಿ ಭ್ರಾಂತಿಗೊಳಗಾಗುತ್ತೇವೆ.

ಇದೊಂದು ಸಹಜ ಪ್ರಕ್ರಿಯೆ ಎಂಬುದು ನಿಪುಣರ ಅನಿಸಿಕೆಯಾಗಿದೆ. ಆದರೆ ವಿಚಿತ್ರವೆಂದರೆ ಯಾವುದೇ ಭಯ, ಕಳವಳ ಇಲ್ಲದೆ ಸಹಜವಾಗಿ ಸಾಗುತ್ತಿರುವ ಸಂದರ್ಭಗಳಲ್ಲೇ ನಾವು ಅಭದ್ರತೆಯ ಭಾವದಿಂದ ವ್ಯಾಕುಲರಾಗಿರುತ್ತೇವೆ. ಏನೇನನ್ನೋ ಊಹಿಸಿಕೊಳ್ಳುತ್ತೇವೆ.

ನಿಜವಾಗಿಯೂ ಅಭದ್ರತೆಗೆ ಕಾರಣವಾಗುವ ವಿಷಯಗಳ ಬಗ್ಗೆ ಸ್ಪಂದಿಸುವುದಿಲ್ಲ. ಅಭದ್ರತೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಅನಗತ್ಯವಾಗಿ ಕಾಡುವ ಅನುಮಾನಗಳು, ಹಲವು ಸಂದರ್ಭಗಳಲ್ಲಿ ಮಿತಿ ಮೀರುತ್ತವೆ. ನಿಮಗಿಷ್ಟವಾದವರು ನಿಮ್ಮಿಂದ ದೂರವಾಗಿ ಮತ್ಯಾರನ್ನೋ ಪ್ರೇಮಿಸುತ್ತಿದ್ದಾರೆಂದು, ಅವರ ಬೆನ್ನಹಿಂದೆ ಸುತ್ತುತ್ತಿದ್ದಾರೆಂದು, ನಿಮಗಿಂತಲೂ ಸಮರ್ಥನಾದ ವ್ಯಕ್ತಿಯಹುಡುಕಾಟದಲ್ಲಿದ್ದಾರೆಂದು, ನಿಮ್ಮ ಸ್ಥಾನದಲ್ಲಿ ಇನ್ನೋಬ್ಬರಿಗೆ ಅವಕಾಶ ಕೊಡುತ್ತಾರೇನೋ ಎಂಬಂತಹ ಸಂಗತಿಗಳು ನಿಮ್ಮಲ್ಲಿನ ಅಭದ್ರತೆಯ ಭಾವವನ್ನು ಪುಟಿದೆಬ್ಬಿಸುತ್ತದೆ.

ಅಭದ್ರತೆ ಎಂಬುದು ಒಂದು ಭಾವೋದ್ವೇಗದ ಅಲಾರಂ. ಗಡಿಯಾರದಂತೆ. ಸ್ನೇಹಿತರು ಅತಿ ಕಡಿಮೆ ಸಮಯವನ್ನು ನಿಮ್ಮೊಂದಿಗೆ ಕಳೆದಾಗ, ಅಕ್ಕ ಪಕ್ಕದ ಸಹೋದ್ಯೋಗಿಗಳು ನಿಮಗಿಂತಲೂ ಎಲ್ಲ ವಿಧದಲ್ಲೂ ಚೆನ್ನಾಗಿದ್ದರೂ ನಿಮ್ಮಲ್ಲಿನ ಈ ಗಡಿಯಾರವು ಅತ್ತಿಂದಿತ್ತ ಚಲಿಸಲು ಪ್ರಾರಂಭಿಸುತ್ತದೆ.

ಇತಂಹ ಅಭದ್ರತಾ ಭಾವವು ಮನೆ ಮಾಡಿಕೊಳ್ಳಲಿಕ್ಕೆ, ಅದು ಇನ್ನಷ್ಟು ವೃದ್ಧಿಯಾಗಲು ಆತ್ಮವಿಶ್ವಾಸದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಜೀವನವೆಂದರೆ ಅಭದ್ರತೆಯಿಂದ ಬದುಕುವುದಲ್ಲ. ಸದಾ ನಮ್ಮ ಅಂತರಂಗದ ಮಥನ ಮಾಡಿ ಕೊಳ್ಳಬೇಕು. ನಾವು ಆಳವಾಗಿ ದೃಷ್ಟಿಹಾಯಿಸಿದರೆ ಪ್ರತಿಯೊಂದು ಆನಂದದ ಹಿಂದೆ ಒಂದು ವಿಷಾದ, ಪ್ರತಿಯೊಂದು ವಿಷಾದದ ಪಕ್ಕದಲ್ಲೇ ಒಂದು ಆನಂದ ಇರುತ್ತದೆ. ಇದು ನಿಜವಾದ ಜೀವನ ಎಂಬುದರ ಅರಿವು ಇರಲಿ.

                                                                       ಪ್ರಥ್ವಿನಿ ಡಿಸೋಜ, ಅಲಂಗಾರ್

ಆಳ್ವಾಸ್ ಕಾಲೇಜು, ಮೂಡುಬಿದಿರೆ

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

ಟಾಪ್ ನ್ಯೂಸ್

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

College Campus

ಕರಾವಳಿಯ ಪ್ರಮುಖ ವಾಣಿಜ್ಯ ಕೃಷಿ – ಮಲ್ಲಿಗೆ ಕೃಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.