ಮಹಿಳಾ ಬಾಕ್ಸಿಂಗ್‌ನಲ್ಲಿ 6 ಚಿನ್ನ ಗೆದ್ದು ಸಾಧನೆ: ಶಹಬ್ಟಾಸ್‌ ಮೇರಿ


Team Udayavani, Nov 27, 2018, 6:00 AM IST

x-16.jpg

ವಿಶ್ವ ಮಹಿಳಾ ಬಾಕ್ಸಿಂಗ್‌ ಕೂಟದಲ್ಲಿ ಅತಿ ಹೆಚ್ಚು 6 ಚಿನ್ನದ ಪದಕ ಗೆದ್ದ ಮೊದಲ ಬಾಕ್ಸರ್‌ ಎಂಬ ಕೀರ್ತಿಗೆ ಪಾತ್ರರಾಗಿರುವ ಮೇರಿ ಕೋಮ್‌ ಬದುಕು ಮತ್ತು ಸಾಧನೆ ಮಹಿಳೆಯರಿಗೆ ಮಾತ್ರವಲ್ಲದೆ, ಎಲ್ಲ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗುವಂಥದ್ದು. ದಿಲ್ಲಿಯಲ್ಲಿ ನಡೆಯುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೇರಿ ಕೋಮ್‌ ತನ್ನ ಎದುರಾಳಿ ಉಕ್ರೇನ್‌ನ ಹನ್ನಾ ಒಕ್‌ಹುಟಾ ಅವರನ್ನು 5-0 ಅಂತರದಿಂದ ಸೋಲಿಸಿ ಐತಿಹಾಸಿಕ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೇರಿ ಆಟ ಎಷ್ಟು ಪರಿಪೂರ್ಣವಾಗಿತ್ತೆಂದರೆ ಎಲ್ಲ ಐವರು ರೆಫ‌ರಿಗಳು ಅವರ ಪರವಾಗಿ ಅಂಕಗಳನ್ನು ನೀಡಿದ್ದರು. ಈ ಮೂಲಕ ಆಟಕ್ಕೆ ವಯಸ್ಸು ಅಡ್ಡಿಯಲ್ಲ ಎನ್ನುವುದನ್ನು ಮೇರಿ ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ. ಆರು ಚಿನ್ನದ ಪದಕದೊಂದಿಗೆ ಮೇರಿ ಕೋಮ್‌ ಕ್ಯೂಬಾದ ಪುರುಷರ ಬಾಕ್ಸಿಂಕ್‌ ವಿಭಾಗದ ದಿಗ್ಗಜ ಫೆಲಿಕ್ಸ್‌ ಸಾವೊನ್‌ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಓರ್ವ ಮಹಿಳೆಯಾಗಿ ಅದೂ ಈಶಾನ್ಯ ಭಾಗದ ರಾಜ್ಯದಿಂದ ಬಂದ ಮಹಿಳೆಯೊಬ್ಬರು ಮಾಡಿದ ಈ ಸಾಧನೆಯಿಂದ ಇಡೀ ದೇಶ ಹೆಮ್ಮೆ ಪಡುವಂತಾಗಿದೆ. 

ಮೇರಿಕೋಮ್‌ಗೀಗ 35ರ ಹರೆಯ. ಮೂರು ಮಕ್ಕಳ ತಾಯಿ ಅವರು. ಇತ್ತೀಚೆಗೆ ರಾಜ್ಯಸಭಾ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ. ಇಷ್ಟು ಮಾತ್ರವಲ್ಲ ಯುವ ಬಾಕ್ಸರ್‌ಗಳಿಗೆ ತರಬೇತಿ ಕೊಡುವ ಒಂದು ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ. ಇಷ್ಟೆಲ್ಲ ಕಾರ್ಯ ಬಾಹುಳ್ಯದ ಒತ್ತಡದ ನಡುವೆಯೂ ಮೇರಿ ತನ್ನ ಪ್ರೀತಿಯ ಕ್ರೀಡೆಯನ್ನು ಕಡೆಗಣಿಸಲಿಲ್ಲ. ಬೇರೆ ಯಾರೇ ಆಗಿದ್ದರೂ ಇಷ್ಟು ಪದಕಗಳನ್ನು ಗೆದ್ದ ಬಳಿಕ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದರು. ಆದರೆ ಮೇರಿ ಕೋಮ್‌ ಉತ್ಕಟ ಬಾಕ್ಸಿಂಗ್‌ ಪ್ರೀತಿ ಅವರನ್ನು ನಿವೃತ್ತಿ ಪಡೆಯಲು ಬಿಡಲಿಲ್ಲ. ದೃಢ ಸಂಕಲ್ಪ ಮತ್ತು ಸತತ ಸಾಧನೆ ಅವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. 

ಮೇರಿ ಕೋಮ್‌ ಬಾಕ್ಸಿಂಗ್‌ ಕಣಕ್ಕಿಳಿದು ಎರಡು ದಶಕವಾಗುತ್ತಾ ಬಂತು. ಅವರ ಕ್ರೀಡಾ ಬದುಕು ಹಲವು ಏರಿಳಿತಗಳನ್ನು ಕಂಡಿದೆ. ನಡುವೆ ಒಮ್ಮೆ ನಿರ್ವಹಣೆ ಕಳೆಗುಂದಿದಾಗ ನಿವೃತ್ತಿಯಾಗುವುದು ಒಳ್ಳೆಯದು ಎಂಬ ಸಲಹೆಗಳೂ ಬಂದಿದ್ದವು. ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿದ್ದಾಗ ಮೇರಿ ಬಾಕ್ಸಿಂಗ್‌ ಗ್ಲೌಸ್‌ಗಳನ್ನು ತೂಗು ಹಾಕುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅಷ್ಟು ಬೇಗ ಸೋಲೊಪ್ಪುವವರಾಗಿರಲಿಲ್ಲ ಮೇರಿ. ಬಾಕ್ಸಿಂಗ್‌ಗೆ ತನ್ನಲ್ಲಿನ್ನೂ ಸಾಕಷ್ಟು  ಸಾಮರ್ಥ್ಯ ಉಳಿದಿದೆ ಎಂದು ಅವರಿಗೆ ತಿಳಿದಿತ್ತು. ಹೀಗಾಗಿ ಅವರು ತವರಿನಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್‌ ಕೂಟಕ್ಕಾಗಿ ತಯಾರಿ ನಡೆಸತೊಡಗಿದರು. ಎರಡು ವರ್ಷದ ಸತತ ಸಾಧನೆ ಈಗ ಬಂಗಾರದ ಪದಕವಾಗಿ ಕೊರಳಲ್ಲಿ ಶೋಭಿಸುತ್ತಿದೆ. ಈ ಗೆಲುವನ್ನು ದೇಶಕ್ಕೆ ಅರ್ಪಿಸುವ ಮೂಲಕ ಮೇರಿ ಜನರು ತನ್ನ ಮೇಲಿಟ್ಟ ಅಭಿಮಾನ ಮತ್ತು ಪ್ರೀತಿಗೆ ತಕ್ಕ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. 

ಮೇರಿ ಕೋಮ್‌ ಬಾಕ್ಸಿಂಗ್‌ ಕಣದಲ್ಲಿರಲಿ, ಇಲ್ಲದಿರಲಿ ಅವರ ಬದುಕು ಸದಾ ಸ್ಫೂರ್ತಿದಾಯಕ. ಏನೇನೂ ಮೂಲಸೌಕರ್ಯಗಳಿಲ್ಲದ ಮಣಿಪುರದ ಹಳ್ಳಿಯಿಂದ ಬಂದ ಮಹಿಳೆಯೊಬ್ಬರು ಪ್ರಾದೇಶಿಕ, ವರ್ಣ, ಲಿಂಗ ಮತ್ತು ಭಾಷಾ ತಾರತಮ್ಯವನ್ನು ಮೆಟ್ಟಿ ನಿಂತು ಮಾಡಿದ ಈ ಸಾಧನೆ ಖಂಡಿತ ಅಧ್ಯಯನ ಯೋಗ್ಯ. ಈಗಾಗಲೇ ಅವರು ಒಂದು ಸಿನಿಮಾಕ್ಕೆ ಪ್ರೇರಣೆಯಾಗಿದ್ದಾರೆ. ಅವರು ಪ್ರಕೃತಿಯ ಮಡಿಲಲ್ಲಿ ಸಹಜವಾಗಿ ಅರಳಿದ ಕ್ರೀಡಾ ಪ್ರತಿಭೆ ಎನ್ನುವುದು ಇನ್ನೊಂದು ಹೆಗ್ಗಳಿಕೆ. 

ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದಕ್ಕೆ ಮೇರಿ ಕೋಮ್‌ ಅವರಂಥ ಉದಾಹರಣೆಗಳು ಧಾರಾಳ ಇವೆ. ಅದರಲ್ಲೂ ಇತ್ತೀಚೆಗಿನ ದಿನಗಳಲ್ಲಿ ಕ್ರೀಡಾ ಕೂಟಗಳಲ್ಲಿ ಗ್ರಾಮೀಣ ಭಾಗದಲ್ಲಿ ಬೆಳೆದ ಮಹಿಳೆಯರು ಮಾಡುತ್ತಿರುವ ಸಾಧನೆ ಗಮನಾರ್ಹವಾಗಿದೆ. ಆದರೆ, ಇಂಥ ಪ್ರತಿಭೆಗಳನ್ನು ಹುಡುಕಿ ತೆಗೆದು ತಯಾರುಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ನಾವಿನ್ನೂ ಪೂರ್ಣವಾಗಿ ಸಫ‌ಲರಾಗಿಲ್ಲ. ಗೆದ್ದ ಕ್ರೀಡಾಪಟುಗಳಿಗೆ ಒಂದಿಷ್ಟು ಬಹುಮಾನವನ್ನೋ ಅಥವಾ ಪ್ರಶಸ್ತಿಯನ್ನೋ ಕೊಡುವುದರಿಂದಷ್ಟೇ ನಾವು ಕ್ರೀಡೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ. ಇನ್ನೊಂದಿಷ್ಟು ಕ್ರೀಡಾಂ ಗಣ ಗಳನ್ನು ಅಥವಾ ಈಜುಕೊಳಗಳನ್ನು ನಿರ್ಮಿಸುವುದೇ ಕ್ರೀಡೆಯಲ್ಲಿ ಸರಕಾರ ಮಾಡುವ ಸಾಧನೆಯಲ್ಲ. ಯುವ ಜನಾಂಗವನ್ನು ಕ್ರೀಡೆಯತ್ತ ಆಕರ್ಷಿಸುವಂಥ ವಾತಾವರಣವೊಂದು ದೇಶದಲ್ಲಿ ನಿರ್ಮಾಣವಾಗಬೇಕು. ಇದು ಸಾಧ್ಯವಾಗಬೇಕಾದರೆ ಮೇರಿ ಕೋಮ್‌ರಂಥ ಸಾಧಕರನ್ನು ಕಾಳಜಿಯಿಂದ ನೋಡಿಕೊಳ್ಳುವ ವ್ಯವಸ್ಥೆಯೊಂದು ನಮ್ಮಲ್ಲಿರಬೇಕು. ಆಗ ಮಾತ್ರ ಇನ್ನೂ ಹಲವು ಮೇರಿ ಕೋಮ್‌ರನ್ನು ನಾವು ತಯಾರಿಸಬಹುದು. 

ಒಲಿಂಪಿಕ್‌ ಕೂಟದಲ್ಲಿ ಚಿನ್ನ ಗೆದ್ದಿಲ್ಲ ಎಂಬ ಕೊರಗೊಂದು ಮೇರಿ ಕೋಮ್‌ಗೆ ಇದೆ. 2016ರ ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಕಣದಿಂದ ಹೊರಬಿದ್ದು, ಒಲಿಂಪಿಕ್ಸ್‌ಗೆ ತೇರ್ಗಡೆಯಾಗದೇ ಹೋದದ್ದು ಇಡೀ ದೇಶಕ್ಕೆ ಬೇಸರವುಂಟು ಮಾಡಿದ ಘಟನೆ. ಈ ಕೊರತೆಯನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿವಾರಿಸಬೇಕೆಂಬ ಹಂಬಲವನ್ನು ಅವರು ಹೊಂದಿದ್ದಾರೆ. ಐಒಸಿ ಮೇರಿ ಸ್ಪರ್ಧಿಸುವ 48 ಕೆಜಿ ವಿಭಾಗವನ್ನು ಉಳಿಸಿಕೊಂಡರೆ ಮೇರಿ ಒಲಿಂಪಿಕ್ಸ್‌ ಚಿನ್ನ ಗೆದ್ದು ತರಲಿದ್ದಾರೆ ಎಂಬ ನಿರೀಕ್ಷೆ ದೇಶದ್ದು. 

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.