ಇಂದಿನಿಂದ ನುಡಿ ಹಬ್ಬ


Team Udayavani, Jan 4, 2019, 12:30 AM IST

x-93.jpg

ಧಾರವಾಡದಲ್ಲಿ  ಶುಕ್ರವಾರದಿಂದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಳ್ಳಲಿದೆ. ಇದು ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಆರನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾದಾರೂ ನಗರದಲ್ಲಿ  ನಡೆ ಯು ತ್ತಿರುವ ನಾಲ್ಕನೇ ಸಾಹಿತ್ಯ ಸಮ್ಮೇಳನ. ಉಳಿದೆರಡು ಸಮ್ಮೇಳನಗಳು ಪಕ್ಕದ ಹುಬ್ಬಳ್ಳಿಯಲ್ಲಿ  ನಡೆದಿದ್ದವು. ಕನ್ನಡ ಸಾಹಿತ್ಯ ಪರಿಷತ್‌ ರಚನೆಯಾದ ಮೂರು ವರ್ಷಗಳ ಬಳಿಕ 1918ರಲ್ಲಿ  ಮೊದಲ ಬಾರಿಗೆ ಧಾರವಾಡದಲ್ಲಿ  ಸಮ್ಮೇಳನ ನಡೆದಿತ್ತು. ಇದನ್ನು ಪರಿಗಣಿಸಿದಲ್ಲಿ  ಈ ಬಾರಿಯ ಸಮ್ಮೇಳನಕ್ಕೆ  ಶತಮಾನದ ಸಂಭ್ರಮ. ಧಾರವಾಡದಲ್ಲಿ  61 ವರ್ಷಗಳ ಬಳಿಕ ಈ ಸಾಹಿತ್ಯ ಉತ್ಸವ ನಡೆಯುತ್ತಿದೆ ಎನ್ನುವುದೂ ಉಲ್ಲೇಖನೀಯ. ವರಕವಿ ಡಾ. ದ. ರಾ. ಬೇಂದ್ರೆ, ಡಾ. ಎಂ. ಎಂ. ಕಲಬುರ್ಗಿ, ಶಂ. ಭಾ. ಜೋಶಿ, ಕೀರ್ತಿನಾಥ ಕುರ್ತಕೋಟಿ ಅವರಂಥ ಸಾಹಿತ್ಯದ ದಿಗ್ಗಜರ ತವರಿನಲ್ಲಿ  ಕನ್ನಡದ ಕಹಳೆ ಮತ್ತೆ ಮೊಳಗುತ್ತಿದೆ.

ಕಳೆದ 83 ಸಾಹಿತ್ಯ ಸಮ್ಮೇಳನಗಳತ್ತ ಒಮ್ಮೆ  ದೃಷ್ಟಿ ಹಾಯಿಸಿದಲ್ಲಿ  ಪ್ರತಿ ಯೊಂದೂ  ಒಂದಲ್ಲಾ ಒಂದು ವಿಶೇಷತೆ  ಹೊಂದಿತ್ತು. ಆದರೆ ಮೇಲ್ನೋಟಕ್ಕೆ  ಸಮ್ಮೇಳನಗಳು  ವಾರ್ಷಿಕ ಜಾತ್ರೆ ಅಥವಾ ಸಮುದಾಯಗಳ ಹಬ್ಬಗಳಂತೆ ಕಂಡುಬಂದರೂ ಮಹತ್ತರ ಧ್ಯೇಯೋದ್ದೇಶಗಳನ್ನು ಹೊಂದಿವೆೆ. ಆರಂಭದಲ್ಲಿ  ಕನ್ನಡಿಗರನ್ನು  ಒಗ್ಗೂಡಿಸುವ ನಿಟ್ಟಿನಲ್ಲಿ  ಇದು ಯಶಸ್ವಿಯಾಯಿತು. ಬಳಿಕ ಆಯಾಯ ಕಾಲಕ್ಕೆ  ಸಂಬಂಧಿಸಿದಂತೆ ನುಡಿ, ನೆಲ, ಜಲ, ಗಡಿ ವಿಚಾರದಲ್ಲಿ  ಜನರಲ್ಲಿ  ಜಾಗೃತಿ ಮೂಡಿಸುವ ಜತೆ ನಮ್ಮನ್ನಾಳುವವರನ್ನೂ ಬಡಿದೆಬ್ಬಿಸುತ್ತಾ ಬಂದಿವೆ. ಸಮ್ಮೇಳನಗಳು ಆಂಶಿಕವಾಗಿಯಾದರೂ ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಗಳನ್ನೂ ನೀಡುತ್ತಿವೆ ಎಂಬುದು ಸ್ಪಷ್ಟ.

ಈ ಬಾರಿಯ ಸಮ್ಮೇಳನದಲ್ಲಿ  ಸರಕಾರಿ ಕನ್ನಡ ಶಾಲೆಗಳಲ್ಲಿ  ಆಂಗ್ಲ ಮಾಧ್ಯಮ ಆರಂಭ, ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಮಹಾದಾಯಿ ನದಿ ವಿವಾದ ಸೇರಿದಂತೆ ಹಲವು ವಿಷಯಗಳು ಚರ್ಚೆಗೀಡಾಗಬಹುದು. ಉತ್ತರ ಕರ್ನಾಟಕದವರೇ ಆಗಿರುವ ಡಾ|ಚಂದ್ರಶೇಖರ ಕಂಬಾರ ಅವರು ಸಮ್ಮೇಳನಾಧ್ಯಕ್ಷರಾಗಿರುವ ಕಾರಣ ಆ ಪ್ರದೇಶದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ಅಭಿಪ್ರಾಯವಿತ್ತು. ಆದರೆ ಗೋಷ್ಠಿಗಳಲ್ಲಿ  ಇವುಗಳಿಗೆ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ ಅವರಿಂದಲೇ ವ್ಯಕ್ತವಾಗಿದೆ.

ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ  ಸಮ್ಮೇಳನಗಳು  ತಮ್ಮ  ಮೂಲೋದ್ದೇಶ ದಿಂದ ದೂರ ಸರಿಯುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಪ್ರತೀ ವರ್ಷ ಯಾವುದಾದರೊಂದು ವಿವಾದಕ್ಕೆ ತಳಕು ಹಾಕಿಕೊಂಡು ಸುದ್ದಿಯಾಗುತ್ತಿದೆಯೇ ಹೊರತು “ಸ್ಮರಣೀಯ’ ಎನ್ನುವಂತೆ ನಡೆಯುತ್ತಿಲ್ಲ. ಸಮ್ಮೇಳನದ ಸಿದ್ಧತೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಕೆಲವು ಗೋಷ್ಠಿಗಳು, ಪುಸ್ತಕ ಮಳಿಗೆಗಳು, ಮತ್ತೂಂದಿಷ್ಟು  ಸಾಹಿತ್ಯಕ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೊನೆಯ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿ ಸಮಾಪನಗೊಳ್ಳುತ್ತದೆ. ಅಂದರೆ ಈ ನಿರ್ಣಯಗಳು ಒಂದು ಲೆಕ್ಕದಲ್ಲಿ ಮೂರು ದಿನಗಳ ಫ‌ಲಿತ. ವಿಪರ್ಯಾಸವೆಂದರೆ, ಈ ನಿರ್ಣಯಗಳ ಜಾರಿಗೆ ಕನ್ನಡ ಸಾಹಿತ್ಯ ಪರಿಷತ್‌ ಆಗಲಿ, ರಾಜ್ಯ ಸರಕಾರವಾಗಲೀ ಅಷ್ಟೊಂದು ಗಮನಹರಿಸುತ್ತಿಲ್ಲ. ಹಿಂದೊಮ್ಮೆ ನಿರ್ಣಯ ಅನುಷ್ಠಾನ ಸಮಿತಿಯೂ ಜಾರಿಯಲ್ಲಿತ್ತಾದರೂ ಹೆಚ್ಚಿನ ಪ್ರಯೋಜನವಾಗಿಲ್ಲ. 

ಸರಕಾರವೂ ಸಮ್ಮೇಳನ ಆಯೋಜನೆಗೆ ಹಣ ಬಿಡುಗಡೆ ಮಾಡುವುದಷ್ಟೇ ತನ್ನ ಕರ್ತವ್ಯವೆಂದು ತಿಳಿದಿದೆ. ವಾಸ್ತವವಾಗಿ ಹಾಗಲ್ಲ. ಸರಕಾರ ಸಮ್ಮೇಳನದಲ್ಲಿ ಕೈಗೊಳ್ಳುವ ಈ ನೆಲ, ಜಲ, ಭಾಷೆ ಮತ್ತು ಭಾಷಿಗರ ಪರ ಕೈಗೊಳ್ಳುವ ನಿರ್ಣಯಗಳನ್ನು ಆದ್ಯತೆವಾರು ಅನುಷ್ಠಾನಕ್ಕೆ ಮುಂದಾಗಬೇಕು. ಒಂದುವೇಳೆ ಜಾರಿಗೆ ಅಡ್ಡ ಪಡಿಸುವ, ವಿಳಂಬ ನಿಲುವು ತಾಳುವ ಅಧಿಕಾರಿಗಳಿಗೆ ಬುದ್ಧಿ ಹೇಳಬೇಕು. ಈ ಸಂಬಂಧ ನಾಡಜನರ ಆಗ್ರಹಗಳು ಕೇಳಿಬಂದರೂ ಇದ ಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕನ್ನಡ ಭಾಷೆಗೆ ಕುತ್ತು ಬಂದಾಗಲೆಲ್ಲ ಸಾಹಿತಿ ಗಳು ಮತ್ತು ಭಾಷಾಭಿಮಾನಿಗಳು ಧ್ವನಿ ಎತ್ತುತ್ತಾ ಬಂದರೂ ನಿರ್ಣಯಗಳ ಜಾರಿಗೆ ಸರಕಾರದ ಮೇಲೆ ಒತ್ತಡ ಹೇರದಿರುವುದು ಖೇದಕರವೇ. 

ಸಮ್ಮೇಳನ ಯಾವುದೋ ಒಂದು ಹರಟೆಯ ವೇದಿಕೆಯಲ್ಲ. ಸಾಹಿತಿಗಳು, ವಿದ್ವಾಂಸರು, ಭಾಷಾಭಿಮಾನಿಗಳು ಹಾಗೂ ಕನ್ನಡಿಗರು ಸೇರಿ ಸರಕಾರಕ್ಕೆ ನಾಡಿನ ಬೇಡಿಕೆಗಳನ್ನು ಮನದಟ್ಟು ಮಾಡಿಕೊಡುವ ವೇದಿಕೆ. ಅಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿಗೆ ಮುಂದಾಗುವುದೇ ಸರಕಾರ ನೀಡುವ ಮಾನ್ಯತೆ. ಕನ್ನಡ ಸಾಹಿತ್ಯ ಪರಿಷತ್‌ ಸಹ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕು. ಸರಕಾರದೊಂದಿಗೆ ಪ್ರತಿ ಹಂತದಲ್ಲೂ ಸಹಕರಿಸಿ ನಿರ್ಣಯಗಳ ಜಾರಿಗೆ ಮುಂದಾಗಬೇಕು. ಇಲ್ಲವಾದರೆ ಸಮ್ಮೇಳನದ ಉದ್ದೇಶವೇ ನಿರರ್ಥಕ ವಾಗುವುದರಲ್ಲಿ ಸಂಶಯವಿಲ್ಲ. 

ಕನ್ನಡಿಗರು ಸಮ್ಮೇಳನದ ಕುರಿತು ಇಟ್ಟುಕೊಳ್ಳುವ ನಿರೀಕ್ಷೆ ಸುಳ್ಳಾಗದಂತೆ ಎಚ್ಚರವಹಿಸಿ ಕಾರ್ಯೋನ್ಮುಖವಾಗುವುದು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ರಾಜ್ಯ ಸರಕಾರದ ಆದ್ಯ ಕರ್ತವ್ಯ ಹಾಗೂ ಪ್ರಾಥಮಿಕ ಹೊಣೆಗಾರಿಕೆ. ಇದನ್ನು ಅರಿತು ಕ್ರಿಯಾಶೀಲವಾಗುವತ್ತ ಎರಡೂ ಸಂಸ್ಥೆಗಳು ಗಮನಹರಿಸಬೇಕು.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.