ಶೈಕ್ಷಣಿಕ ಸಂದಿಗ್ಧತೆ; ಸರಕಾರಗಳ ಕಾಳಜಿ ಶ್ಲಾಘನೀಯ


Team Udayavani, Aug 13, 2020, 6:36 AM IST

ಶೈಕ್ಷಣಿಕ ಸಂದಿಗ್ಧತೆ; ಸರಕಾರಗಳ ಕಾಳಜಿ ಶ್ಲಾಘನೀಯ

ಸಾಂದರ್ಭಿಕ ಚಿತ್ರ

ಸರಿಸುಮಾರು ಐದು ತಿಂಗಳ ಹಿಂದೆ, ಕೋವಿಡ್‌ ರೋಗದ ಅಪಾಯವನ್ನು ತಡೆಯಲು ಪೂರ್ಣ ಲಾಕ್‌ಡೌನ್‌ ಜಾರಿಯಾಗಿತ್ತು. ಆಗಿನಿಂದಲೂ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಿಯೇ ಇವೆ. ಆದಾಗ್ಯೂ, ಈಗ ಲಾಕ್‌ಡೌನ್‌ ನಿರ್ಬಂಧಗಳು ಸಡಿಲವಾಗುತ್ತಾ, ನಿಧಾನಕ್ಕೆ ವಿವಿಧ ಕ್ಷೇತ್ರಗಳ ಬಾಗಿಲುಗಳು ಮತ್ತೆ ತೆರೆದುಕೊಳ್ಳಲಾರಂಭಿಸಿವೆಯಾದರೂ, ಶಾಲೆ-ಕಾಲೇಜುಗಳು ಸೇರಿದಂತೆ, ಎಲ್ಲೆಲ್ಲಿ ಹೆಚ್ಚು ಜನರು ಸೇರಬಹುದೋ ಅಂಥ ಕ್ಷೇತ್ರಗಳ ಮೇಲಿನ ನಿರ್ಬಂಧ ಇನ್ನೂ ಮುಂದುವರಿದಿದೆ.

ಅದರಲ್ಲೂ ಶಾಲೆ-ಕಾಲೇಜುಗಳ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿರುವುದು ಶ್ಲಾಘನೀಯ ಸಂಗತಿಯೇ ಸರಿ. ಏಕೆಂದರೆ, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆಟೋಟಗಳು ಹೇಗಿರುತ್ತವೆ, ಅವರು ಹೇಗೆ ಬೆರೆಯುತ್ತಾರೆ ಎನ್ನುವುದನ್ನೆಲ್ಲ ಪರಿಗಣಿಸಿದಾಗ, ಅವರು ಈ ಸಾಂಕ್ರಾಮಿಕದಿಂದ ಸುರಕ್ಷಿತವಾಗಿರಬಲ್ಲರೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳ ವಿಚಾರದಲ್ಲಿ ಸರಕಾರಗಳ ಈ ಕಾಳಜಿ ಮುಂದುವರಿಯಲೇಬೇಕು. ಏಕೆಂದರೆ, ಶಾಲಾ ಮಕ್ಕಳು ಸುರಕ್ಷತ ಕ್ರಮಗಳನ್ನು ಅವಗಣಿಸುವ ಸಾಧ್ಯತೆ ಅಧಿಕವೇ ಇರುತ್ತದೆ.

ಇಷ್ಟು ದೀರ್ಘಾವಧಿಯವರೆಗೆ ದೇಶಾದ್ಯಂತ ಹೀಗೆ ಶಾಲೆಗಳು ಬಾಗಿಲು ಹಾಕಿದ ಉದಾಹರಣೆಗಳೇ ಇಲ್ಲ ಎನ್ನುವುದು ಸತ್ಯ. ಇನ್ನು ಕೆಲವು ರಾಜ್ಯಗಳಲ್ಲಿ ಸೀಮಿತ ಸ್ತರದಲ್ಲಿ ಆನ್‌ಲೈನ್‌ ಶಿಕ್ಷಣ ನಡೆಯುತ್ತಿದೆ, ಈ ರೀತಿಯ ನವ ಶಿಕ್ಷಣ ಮಾರ್ಗದ ವ್ಯಾಪಕ ಅನುಷ್ಠಾನಕ್ಕೆ ಎಲ್ಲೆಡೆಯೂ ಚಿಂತನೆ ಸಾಗಿದೆಯಾದರೂ, ಪೋಷಕರು ಮನದಲ್ಲಂತೂ ಇವೆಲ್ಲ ಯಾವಾಗ ನಿಲ್ಲಲಿದೆಯೋ ಎನ್ನುವ ಆತಂಕ ಕಾಡುತ್ತಿದೆ. ಸಹಜವಾಗಿಯೇ ಮಕ್ಕಳ ಭವಿಷ್ಯದ ಬಗ್ಗೆ ಅವರಲ್ಲಿ ಕಳವಳ ಮನೆ ಮಾಡಿರಲಿಕ್ಕೂ ಸಾಕು.

ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಸೋಮವಾರ ಒಂದು ಸಂಸದೀಯ ಸ್ಥಾಯಿ ಸಮಿತಿಗೆ ಹೇಳಿರುವುದೇನೆಂದರೆ, ಪ್ರಸಕ್ತ ಶೈಕ್ಷಣಿಕ ವರ್ಷವು ಶೂನ್ಯ ವರ್ಷ ಅಥವಾ ಝೀರೋ ಇಯರ್‌ ಆಗಿರುವುದಿಲ್ಲ ಎನ್ನುವುದು. ಅಂದರೆ, ಕೇಂದ್ರವು ಅನ್ಯ ವಿಕಲ್ಪಗಳತ್ತ ಗಮನ ಹರಿಸುತ್ತಿದೆ ಎಂದು ಇದರರ್ಥ. ಆದರೆ ಈ ಮಾತು ನಿಜಕ್ಕೂ ಎಷ್ಟು ಸತ್ಯವಾಗುತ್ತದೆ ಎನ್ನುವುದು ಕೋವಿಡ್‌ ಪ್ರಕರಣಗಳ ತಗ್ಗುವಿಕೆಯನ್ನೇ ಆಧರಿಸಿರಲಿದೆ. ಕೇಂದ್ರದ ವಿಚಾರ ಅತ್ತ ಇರಲಿ. ಇತ್ತ, ರಾಜ್ಯದ ವಿಷಯಕ್ಕೆ ಬಂದರೂ ನಮ್ಮಲ್ಲೇನೂ ಇದು ಶೂನ್ಯ ಶೈಕ್ಷಣಿಕ ವರ್ಷವಂತೂ ಆಗುವುದಿಲ್ಲ. ಶಿಕ್ಷಣ ಇಲಾಖೆಯು ಈಗಾಗಲೇ ಯಶಸ್ವಿಯಾಗಿ ಅಗತ್ಯ ಪರೀಕ್ಷೆಗಳನ್ನು ನಡೆಸಿಯಾಗಿದೆ.

ಹಾಗಿದ್ದರೆ, ಈ ವರ್ಷದ ಅಂತ್ಯದ ವೇಳೆಗಾದರೂ ಶೈಕ್ಷಣಿಕ ಸಂಸ್ಥೆಗಳು ಆರಂಭವಾಗುವವೇ ಎನ್ನುವ ಪ್ರಶ್ನೆ ತಟ್ಟನೆ ಎದುರಾಗುತ್ತದೆ. ಈ ಪ್ರಶ್ನೆಗೆ ಎಲ್ಲಾ ಸರಕಾರಗಳೂ ಹೇಳುತ್ತಿರುವುದು- ಅದನ್ನು ಹೇಳಲು ಬರುವುದಿಲ್ಲ ಎನ್ನುವುದೇ ಆಗಿದೆ! ಇದು ನಿಜ ಸಹ. ದೇಶಾದ್ಯಂತ ಕೋವಿಡ್‌ ಪ್ರಕರಣಗಳು ಅಧಿಕವಾಗುತ್ತಲೇ ಸಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 23 ಲಕ್ಷ ದಾಟಿದೆ. ನಿತ್ಯ ಸೋಂಕಿತರ ಸಂಖ್ಯೆ 60 ಸಾವಿರದ ಗಡಿ ದಾಟುತ್ತಿದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆಯಾದರೂ, ಯಾವ ರಾಜ್ಯವೂ ಈ ವೈರಸ್‌ನಿಂದ ಮುಕ್ತವಾಗಿಲ್ಲ. ಪತ್ತೆಯಾಗದ ಒಬ್ಬ ಸೋಂಕಿತನೂ ಎಷ್ಟೊಂದು ಜನರಿಗೆ ಸೋಂಕು ಹರಡಬಲ್ಲ ಎನ್ನುವುದು ನಮಗೀಗ ತಿಳಿದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯದಿರುವ ಸರಕಾರಗಳ ನಿರ್ಧಾರಗಳು ಸರಿಯಾಗಿಯೇ ಇವೆ ಎಂದು ಅರ್ಥವಾಗುತ್ತದೆ.

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

KARADI (2)

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.