ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ


Team Udayavani, Sep 22, 2020, 6:11 AM IST

ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ

ಸಾಂದರ್ಭಿಕ ಚಿತ್ರ

ಅಲ್‌ಕಾಯಿದಾ ಉಗ್ರ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ 9 ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಬಂಧಿಸಿದ್ದು, ಬಹುದೊಡ್ಡ ಅಪಾಯದಿಂದ ದೇಶ ಪಾರಾದಂತಾಗಿದೆ. ಇವರೆಲ್ಲ ರಾಷ್ಟ್ರ ರಾಜಧಾನಿ ದಿಲ್ಲಿ, ಬಿಹಾರದಲ್ಲಿನ ಭದ್ರತಾ ಘಟಕಗಳು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ, ಪ್ರಬಲ ಸಾಕ್ಷ್ಯಾಧಾರಗಳ ಬಲದ ಮೇಲೆ ಎಷ್ಟು ತ್ವರಿತವಾಗಿ ಎನ್‌ಐಎ ಕಾರ್ಯಾಚರಣೆ ನಡೆಸಿದೆಎಂದರೆ, ಆರೋಪಿಗಳ ಸಂಚು ವಿಫ‌ಲವಾಗಿದೆ.

ಈ ರೀತಿ ಆಗುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಅಲ್‌ಕಾಯಿದಾ, ಇಸ್ಲಾಮಿಕ್‌ ಸ್ಟೇಟ್‌, ಹಿಜ್ಬುಲ್‌ ಸೇರಿದಂತೆ ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ಸಿಕ್ಕಿ ಬೀಳುತ್ತಲೇ ಇದ್ದಾರೆ. ಸ್ವಾತಂತ್ರೊéàತ್ಸವ, ಗಣರಾಜ್ಯೋತ್ಸವ ಮತ್ತು ಹಬ್ಬಗಳಂದು ಭಯೋತ್ಪಾದನಾ ಕೃತ್ಯಗಳ ಅಪಾಯ ಹೆಚ್ಚಿಬಿಟ್ಟಿರುತ್ತದೆ. ಒಟ್ಟಲ್ಲಿ ಈಗಿನ ಬಂಧನಗಳಿಂದ ಸ್ಪಷ್ಟವಾಗುತ್ತಿರುವ ಅಂಶವೆಂದರೆ, ಈ ಉಗ್ರರ ನೆಟ್ ವರ್ಕ್ ದೇಶಾದ್ಯಂತ ಹರಡಿದೆ ಹಾಗೂ ತಮ್ಮ ದುರುದ್ದೇಶ ಸಾಧನೆಗಾಗಿ ಈ ಜಾಲ ಪ್ರಬಲ ಪ್ರಯತ್ನದಲ್ಲಿ ತೊಡಗಿದೆ ಎನ್ನುವುದು. ಪಶ್ಚಿಮ ಬಂಗಾಲ, ಕೇರಳ, ಝಾರ್ಖಂಡ್‌, ಉತ್ತರಪ್ರದೇಶ, ಕಾಶ್ಮೀರದಲ್ಲಿ ಉಗ್ರರ ಜಾಲ ಸಕ್ರಿಯವಾಗಿದೆ ಎಂದು ತನಿಖಾ ಸಂಸ್ಥೆಗಳು ಆಗಾಗ ಹೇಳುತ್ತಲೇ ಇರುತ್ತವೆ.

ಭಾರತದಲ್ಲಿ ಸಕ್ರಿಯವಾಗಿರುವ ಇಂಥ ಉಗ್ರ ಜಾಲಗಳ ಹಿಂದೆ ಪಾಕಿಸ್ಥಾನದ ಸರಕಾರ ಹಾಗೂ ಐಎಸ್‌ಐನ ಕೈವಾಡವಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎನ್‌ಐಎ ಕೈಗೆ ಈಗ ಸಿಕ್ಕಿಬಿದ್ದಿರುವ ಪಾತಕಿಗಳೂ ಸಹ, ಪಾಕಿಸ್ಥಾನದಲ್ಲಿ ಕುಳಿತ ಮಾಸ್ಟರ್‌ಮೈಂಡ್‌ಗಳ ಆದೇಶದಂತೆ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್‌ಕಾಯಿದಾ ಮತ್ತು ಐಸಿಸ್‌ ಉಗ್ರರ ಬಹುದೊಡ್ಡ ನೆಲೆಯಾಗಿ ಬದಲಾಗಿರುವ ಪಾಕಿಸ್ಥಾನವೀಗ, ಡಿಜಿಟಲ್‌ ಮಾಧ್ಯಮದ ಮೂಲಕ(ಅದರಲ್ಲೂ ಡಾರ್ಕ್‌ ವೆಬ್‌ ಮೂಲಕ) ವಿದೇಶಗಳಲ್ಲಿರುವ ಯುವಕರ ಬ್ರೈನ್‌ವಾಶ್‌ ಮಾಡುವ ಕುಕೃತ್ಯಕ್ಕೆ ವೇಗ ನೀಡಿಬಿಟ್ಟಿದೆ. ಮೂಲಭೂತವಾದದ ಮದವೇರಿಸಿಕೊಂಡ ಯುವಕರು ಪಾಕ್‌ನ ಕೈಗೊಂಬೆಯಾಗಿ ತಾವು ಹುಟ್ಟಿದ ನೆಲದಲ್ಲೇ ವಿಧ್ವಂಸ ಎಸಗಲು ಸಜ್ಜಾಗಿಬಿಡುತ್ತಾರೆ.

ಕಳೆದ ವರ್ಷ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಈಸ್ಟರ್‌ ಹಬ್ಬದ ವೇಳೆ ಚರ್ಚ್‌ ಮತ್ತು ಪಂಚತಾರಾ ಹೊಟೇಲ್‌ನ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 250ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಆ ದಾಳಿಯ ಹಿಂದೆಯೂ ಐಸಿಸ್‌ ಹಾಗೂ ಅಲ್‌ಕಾಯಿದಾ ಕೈವಾಡವಿತ್ತು. ಪಾಕಿಸ್ಥಾನವೀಗ ಇವೆರಡೂ ಉಗ್ರ ಸಂಘಟನೆಗಳಿಂದ ಭಾರತದ ಮೇಲೆ ಇಂಥದ್ದೇ ಕೃತ್ಯ ಎಸಗಿಸಲು ಪ್ರಯತ್ನಿಸುತ್ತಿದೆ.

ಗುಪ್ತಚರ ದಳದ ಅಧಿಕಾರಿಗಳ ಪ್ರಕಾರ ಅಲ್‌ಕಾಯಿದಾ ಈಗ ಪಶ್ಚಿಮ ಬಂಗಾಲ ದಲ್ಲಿ ತನ್ನ ಬೇರುಗಳನ್ನು ಭದ್ರವಾಗಿಸಿಕೊಂಡಿದೆ. ಬಾಂಗ್ಲಾದೇಶದ ನುಸುಳುಕೋರರಿಗೆಲ್ಲ ಮಮತಾ ಬ್ಯಾನರ್ಜಿ ರತ್ನಗಂಬಳಿ ಹಾಸುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಇದು ನಿಜವೇ ಆಗಿದ್ದರೆ, ರಾಷ್ಟ್ರೀಯ ಭದ್ರತೆಗೆ ಮುಂದಿನ ದಿನಗಳಲ್ಲಿ ಬಹಳ ಅಪಾಯ ಎದುರಾಗಲಿದೆ. ದುರಂತವೆಂದರೆ, ಇಂಥ ವಿಚಾರಗಳಲ್ಲಿ ರಾಜಕೀಯ ಪಕ್ಷಗಳ ಧೋರಣೆಯೇ ಭಿನ್ನವಾಗಿದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ನಡೆದು, ಮುಖ್ಯ ವಿಚಾರ ಚರ್ಚೆಯಾಗುವುದೇ ಇಲ್ಲ. ಕಾನೂನು ಸುವ್ಯವಸ್ಥೆಯ ಪಾಲನೆಯಲ್ಲಿ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿ, ಅಧಿಕಾರ ಇರುತ್ತದೆ. ರಾಜ್ಯ ಸರಕಾರಗಳು ಇಂಥ ಉಗ್ರ ಜಾಲಗಳನ್ನು ಪುಡಿಯಾಗಿಸಲು ಮುಂದಾಗಬೇಕು. ನಿರಾಕರಣೆಯಿಂದ ತಾತ್ಕಾಲಿಕ ರಾಜಕೀಯ ಲಾಭವಾಗಬಹುದಷ್ಟೇ ಹೊರತು, ರಾಷ್ಟ್ರಕ್ಕೆ ಅಪಾಯ ಹೆಚ್ಚುತ್ತದೆ.

ಟಾಪ್ ನ್ಯೂಸ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.