ರಾವತ್‌ ಹೇಳಿಕೆ ; ರಾಜಕೀಯ ಮಸೂರದಿಂದಾಚೆಗೆ ಇರುವ ವಾಸ್ತವಗಳು


Team Udayavani, Feb 24, 2018, 1:24 PM IST

Rawat.jpeg

ಈಶಾನ್ಯ ಭಾಗದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸೆ ಹಾಗೂ ಅಶಾಂತಿಯ ವಾತಾವರಣದ ಕುರಿತು ಭೂಸೇನೆಯ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ನೀಡಿರುವ ಹೇಳಿಕೆಯೊಂದು ಈಗ ಪೂರ್ಣ ಪ್ರಮಾಣದ ರಾಜಕೀಯ ತಿರುವು ಪಡೆದುಕೊಂಡು ಕೆಸರೆರಚಾಟಕ್ಕೆ ಕಾರಣವಾಗಿದೆ.
ಬುಧವಾರ ದಿಲ್ಲಿಯಲ್ಲಿ ನಡೆದ ಈಶಾನ್ಯ ಭಾರತದ ಭದ್ರತೆಯ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದ ಸಂದರ್ಭದಲ್ಲಿ ಅಸ್ಸಾಂ ರಾಜ್ಯಕ್ಕೆ ಬಾಂಗ್ಲಾದೇಶಿಗರು ಅಕ್ರಮವಾಗಿ ವಲಸೆ ಬಂದಿರುವ ಪರಿಣಾಮವಾಗಿ ಅಲ್ಲಿನ ಜನಸಂಖ್ಯೆ ಹಂಚಿಕೆಯಲ್ಲಿ ವ್ಯತ್ಯಾಸವುಂಟಾಗಿರುವ ಕುರಿತು ಗಮನ ಸೆಳೆದಿದ್ದರು. ಅಕ್ರಮ ಬಾಂಗ್ಲಾ ವಲಸಿಗರಿಂದಾಗಿ ಬದ್ರುದ್ದೀನ್‌ ಅಜ್ಮಲ್‌ ನೇತೃತ್ವದ ಆಲ್‌ ಇಂಡಿಯಾ ಯುನೈಟೆಡ್‌ ಡೆಮಕ್ರಾಟಿಕ್‌ ಫ್ರಂಟ್‌ ಪಕ್ಷ ತ್ವರಿತವಾಗಿ ಪ್ರವರ್ಧಮಾನಕ್ಕೆ ಬಂದಿದೆ ಎಂದಿರುವ ರಾವತ್‌ ಈ ಪಕ್ಷದ ಬೆಳವಣಿಗೆಯನ್ನು ಮನವರಿಕೆ ಮಾಡಲು ಬಿಜೆಪಿಯ ಬೆಳವಣಿಗೆಯ ಹೋಲಿಕೆ ನೀಡಿದ್ದರು. ಈಶಾನ್ಯ ರಾಜ್ಯಗಳಲ್ಲಿ ಪಿಡುಗಾಗಿ ಪರಿಣಮಿಸಿರುವ ಅಕ್ರಮ ವಲಸೆಗೆ ಚೀನದ ನೆರವಿನಿಂದ ಪಾಕಿಸ್ಥಾನ ಕುಮ್ಮಕ್ಕು ನೀಡುತ್ತಿದೆ.

ಇದೊಂದು ರೀತಿಯಲ್ಲಿ ನೆರೆಯ ದೇಶಗಳು ನಮ್ಮ ವಿರುದ್ಧ ನಡೆಸುತ್ತಿರುವ ಛಾಯಾ ಸಮರ. ಇದೇ ಭಾಷಣದಲ್ಲಿ ಅವರು ಈಶಾನ್ಯ ರಾಜ್ಯಗಳ ಭದ್ರತೆ, ಅಭಿವೃದ್ಧಿ ಮತ್ತಿತರ ವಿಚಾರಗಳ ಕುರಿತು ಮಾತನಾಡಿದ್ದರೂ ಮಾಧ್ಯಮಗಳು ಬರೀ ಎಐಯುಡಿಎಫ್ ಕುರಿತು ಹೇಳಿರುವ ಮಾತುಗಳನ್ನು ಮಾತ್ರ ಹೆಕ್ಕಿ ತೆಗೆದಿರುವುದರಿಂದ ಸಹಜವಾಗಿಯೇ ವಿವಾದ ಸೃಷ್ಟಿಯಾಗಿದೆ ಹಾಗೂ ಇಂತಹ ಅವಕಾಶಕ್ಕಾಗಿ ಕಾದು ಕುಳಿತಿರುವ ಓವೈಸಿಯಂತಹ ನಾಯಕರು ರಾವತ್‌ ಮತ್ತು ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಸೇವೆಯಲ್ಲಿರುವ ಸೇನಾ ದಂಡನಾಯಕರಾಗಿ ರಾವತ್‌ ಒಂದು ನಿರ್ದಿಷ್ಟ ಕೋಮು ಮತ್ತು ಪಕ್ಷವನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡಿರುವುದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಸೇನಾ ಮುಖ್ಯಸ್ಥರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡುವುದು ಸರ್ವಥಾ ಸರಿಯಲ್ಲ. ಇದರಿಂದ ಸೇನೆಯ ನಿಷ್ಪಕ್ಷಪಾತ ಮತ್ತು ದೇಶ ಹಾಗೂ ರಾಷ್ಟ್ರೀಯತೆಗೆ ಮಾತ್ರ ಬದ್ಧವಾಗಿರುವ ನಿಲುವಿಗೆ ಚ್ಯುತಿ ಬರುವ
ಸಾಧ್ಯತೆಯಿದೆ.

ಸೇನಾ ಮುಖ್ಯಸ್ಥ ರಾಜಕೀಯ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಅದನ್ನು ನೋಡಿಕೊಳ್ಳಲು ಸರಕಾರ, ವಿಪಕ್ಷ, ಸಂವಿಧಾನ, ನ್ಯಾಯಾಲಯ ಇದೆ. ಸೇನೆಯ ಕೆಲಸವೇನಿದ್ದರೂ ದೇಶದ ಮತ್ತು ಪ್ರಜೆಗಳ ರಕ್ಷಣೆ. ಇದರಲ್ಲಿ ಜಾತಿ, ಧರ್ಮ, ಪಕ್ಷದ ಬೇಧ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಎಐಯುಡಿಎಫ್ ಕುರಿತು ನೀಡಿದ ಹೇಳಿಕೆಯನ್ನು ಬದಿಗಿರಿಸಿ ಉಳಿದ ವಿಚಾರಗಳತ್ತ ಗಮನಹರಿಸಿದರೆ ರಾವತ್‌ ಹೇಳಿರುವುದರಲ್ಲಿ ನಿಜವಿದೆ ಎಂದು ಅನ್ನಿಸುವುದಿಲ್ಲವೆ? ದೇಶದಲ್ಲಿ ಈಗ ಸುಮಾರು 2 ಕೋಟಿ ಅಕ್ರಮ ಬಾಂಗ್ಲಾ ಪ್ರಜೆಗಳು ಇದ್ದಾರೆ ಎಂದು ಕೆಲ ಸಮಯದ ಹಿಂದೆ ಸ್ವತಹ ಗೃಹ ಸಚಿವಾಲಯವೇ ಸಂಸತ್ತಿಗೆ ಮಾಹಿತಿ ನೀಡಿತ್ತು.ಚಿಕ್ಕ ನಗರಗಳು ಮತ್ತು ಹಳ್ಳಿಗಳಲ್ಲೂ ಬಾಂಗ್ಲಾ ವಲಸೆಗಾರರಿದ್ದಾರೆ.

ಅವರಿಗೆ ಮತದಾರರ ಗುರುತಿನ ಕಾರ್ಡು, ಆಧಾರ್‌, ಪಡಿತರ ಕಾರ್ಡು ಮಾಡಿಕೊಟ್ಟು ಸಕ್ರಮ ಮಾಡಲಾ ಗುತ್ತಿದೆ ಎಂಬ ಆರೋಪವಿದೆ. ಉತ್ತರ ಭಾರತದಿಂದ ಕಾರ್ಮಿಕರಾಗಿ ಬರುವವರಲ್ಲಿ ಬಾಂಗ್ಲಾದೇಶೀಯರೂ ಇರುತ್ತಾರೆ. ಕೇಳಿದರೆ ತಾವು ಬಿಹಾರದವರು, ಪಶ್ಚಿಮ ಬಂಗಾಳದವರು ಅಥವಾ ಜಾರ್ಖಂಡ್‌ನ‌ವರು ಎಂದು ಹೇಳುತ್ತಾರೆ. ಬೆಂಗಳೂರು ನಗರವೊಂದರಲ್ಲೇ 2 ಲಕ್ಷಕ್ಕೂ ಅಕ್ರಮ ಬಾಂಗ್ಲಾದೇಶೀಯರಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಬಾಂಗ್ಲಾ ಗಡಿಗೆ ಒತ್ತಿಕೊಂಡಿರುವ ಈಶಾನ್ಯ ರಾಜ್ಯಗಳಲ್ಲಿ ಅವರು ಇಲ್ಲ ಎನ್ನಲು ಸಾಧ್ಯವೇ? ಮುಖ್ಯವಾಗಿ ಈ ಅಕ್ರಮ  ವಲಸೆಕೋರರು ಭಾರತೀಯರ ಅಸಂಘಟಿತ ವಲಯದ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ. ಕೂಲಿ, ಮೇಸ್ತ್ರಿಯಂತಹ ಕೆಲಸಗಳನ್ನು ಇವರು ಕಡಿಮೆ ಸಂಬಳಕ್ಕೆ ಮಾಡುವುದರಿಂದ ಗುತ್ತಿಗೆದಾರರು ಅವರನ್ನೇ ಕರೆತರುತ್ತಿದ್ದಾರೆ. ಇದು ಒಂದು ವಿಚಾರವಾದರೆ ಇನ್ನು ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂಬ ರಾವತ್‌ ಕಳವಳ ನೈಜ ವಾದದ್ದು. ಪಾಕಿಸ್ಥಾನದ ಐಎಸ್‌ಐ ಮತ್ತು ಕೆಲವು ಭಯೋತ್ಪಾದಕ ಸಂಘಟನೆಗಳು ಅಕ್ರಮ ವಲಸಿಗರ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದ ಕೆಲವು ಸಂಚುಗಳನ್ನು ಪೊಲೀಸರು ಮತ್ತು ಬೇಹುಪಡೆ ಬಯಲಿಗೆಳೆದದ್ದುಂಟು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಅಕ್ರಮ ವಲಸಿಗರ ಕುರಿತಾದ ದೂರುಗಳು ಇವೆ. ಹೀಗಿರುವಾಗ ಸೇನೆಯ ಮುಖ್ಯಸ್ಥ ನೀಡಿದ ಹೇಳಿಕೆಗೆ ಮಹತ್ವವಿದೆ ಎಂದು ಅನ್ನಿಸುವುದಿಲ್ಲವೇ? ಈ ಹೇಳಿಕೆ ಯನ್ನು ರಾಜಕೀಯದ ಮಸೂರದಿಂದ ಹೊರಗಿಟ್ಟು ನೋಡಬಹುದಲ್ಲ.

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.