ವಾನಿಗೆ ಅಶೋಕ ಚಕ್ರ: ಕೇಂದ್ರದ ವಿವೇಚನಾಯುಕ್ತ ನಡೆ


Team Udayavani, Jan 26, 2019, 12:30 AM IST

w-41.jpg

ಜಮ್ಮು-ಕಾಶ್ಮೀರದ ಇನ್ನೋರ್ವ ವಾನಿಯ ಹೆಸರು ಈಗ ದೇಶದಾದ್ಯಂತ ಚರ್ಚೆಯಲ್ಲಿದೆ. ಅವರು ಈ ಬಾರಿಯ ಶಾಂತಿ ಕಾಲದ ಅಶೋಕ ಚಕ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಲ್ಯಾನ್ಸ್‌ ನಾೖಕ್‌ ನಜೀರ್‌ ಅಹ್ಮದ್‌ ವಾನಿ. ಅಶೋಕ ಚಕ್ರ ಯೋಧರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದರೂ ಅದರ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗುವುದು ಬಹಳ ಕಡಿಮೆ. ಏನಿದ್ದರೂ ಸೇನೆಯ ಮಟ್ಟದಲ್ಲಷ್ಟೆ ಅಶೋಕ ಚಕ್ರದಂಥ ಪ್ರಶಸ್ತಿಗಳ ಬಗ್ಗೆ ಕುತೂಹಲವಿರುತ್ತದೆ. ಹೀಗಾಗಿ ಅಶೋಕ ಚಕ್ರದ ಕುರಿತಾದ ಚರ್ಚೆಯನ್ನು ಸಾರ್ವಜನಿಕ ನೆಲೆಗೆ ತಂದ ಹಿರಿಮೆಯೂ ಈ ದಿವಂಗತ ವಾನಿಗೆ ಸಲ್ಲಬೇಕು.ವಾನಿಗೆ ಅಶೋಕ ಚಕ್ರ ಪ್ರಶಸ್ತಿ ಸಿಕ್ಕಿರುವುದರಲ್ಲಿ ಹಲವು ಮಹತ್ವದ ಅಂಶಗಳು ಅಡಗಿವೆ ಎನ್ನುವುದಕ್ಕೆ ಈ ಪ್ರಶಸ್ತಿ ಈ ಸಲ ಚರ್ಚೆಯ ಕೇಂದ್ರವಾಗಿದೆ. 

ಭಯೋತ್ಪಾದನೆಯ ಆಡುಂಬೋಲವಾಗಿರುವ ಕುಲ್ಗಾಂವ್‌ ಜಿಲ್ಲೆಯ ಅಶಿಮುಜಿ ಎಂಬ ಪ್ರದೇಶದವರು ನಜೀರ್‌ ಅಹ್ಮದ್‌ ವಾನಿ. ಒಂದು ಕಾಲದಲ್ಲಿ ಈ ವಾನಿಯೂ ಭಯೋತ್ಪಾದಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇಖ್ವಾನಿಸ್‌ ಎಂಬ ನುಸುಳುಕೋರರ ಪಡೆಯಲ್ಲಿದ್ದ ವಾನಿ ಆ ಬಳಿಕ ಮನಪರಿವರ್ತನೆಯಾಗಿ 2004ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದವರು. ಸೇನೆಯಲ್ಲಿ ಅವರು ತೋರಿಸಿದ ಶೌರ್ಯ ಮಾತ್ರ ಅಸಾಧಾರಣವಾದದ್ದು. ಉಗ್ರರ ಜತೆಗಿನ 17 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ವಾನಿ ಕೊನೆಯ ಹೋರಾಟದಲ್ಲಿ ತೋರಿಸಿದ ಕೆಚ್ಚೆದೆ ಅಭೂತಪೂರ್ವವಾದದ್ದು. 

ಕಳೆದ ವರ್ಷ ನ.25ರಂದು ಶೋಪಿಯಾನ್‌ ಜಿಲ್ಲೆಯ ಬಟಗುಂಡ್‌ ಎಂಬಲ್ಲಿ 6 ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ನಜೀರ್‌ ಅಹ್ಮದ್‌ ವಾನಿ ನೇತೃತ್ವದ ಪಡೆ ತೋರಿಸಿದ ಶೌರ್ಯದಿಂದಾಗಿ ಭಾರತೀಯ ಪಡೆಗೆ ಗೆಲುವಾಗಿತ್ತು. ಗುಂಡೇಟಿನಿಂದ ಶರೀರ ಜರ್ಜರಿತವಾಗಿದ್ದರೂ ಉಗ್ರರಿದ್ದ ಕಟ್ಟಡಕ್ಕೆ ನುಗ್ಗಿ ಒಬ್ಬನನ್ನು ಸಾಯಿಸಿಯೇ ವಾನಿ ಧರೆಗುಳಿದಿದ್ದರು. ಇಂಥ ಸಾಹಸಿಗೆ ಅರ್ಹವಾಗಿಯೇ ಅಶೋಕ ಚಕ್ರ ಸಂದಿದೆ. 

ಕಾಶ್ಮೀರದ ಸಂದರ್ಭದಲ್ಲಿ ಈ ಪ್ರಶಸ್ತಿಗೆ ಇನ್ನೂ ಕೆಲವು ಮಹತ್ವಗಳಿವೆ.ಬುರಾನ್‌ ವಾನಿಯಂಥ ಅಲ್ಲಿನ ವಿದ್ಯಾವಂತ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿ ಹಿಂಸೆಯ ದಾರಿ ತುಳಿದಿರುವಾಗ ನಜೀರ್‌ ವಾನಿ ಉಗ್ರ ಸಂಘಟನೆಯಿಂದ ವಿಮುಖರಾಗಿ ಸೇನೆಗೆ ಸೇರಿದ್ದೇ ಯುವಕರಿಗೆ ಒಂದು ಸಂದೇಶ ನೀಡುವ ನಡೆ. ಮುಖ್ಯವಾಹಿನಿಗೆ ಬಂದರೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎನ್ನುವ ಸಂದೇಶವನ್ನು ವಾನಿಯನ್ನು ಮರಣೋತ್ತರವಾಗಿ ಗೌರವಿಸುವ ಮೂಲಕ ಸರಕಾರ ನೀಡಿದ್ದು ಹಿಂಸಾತ್ರಸ್ತ ಕಾಶ್ಮೀರದ ಸಂದರ್ಭದಲ್ಲೊಂದು ಸಕಾರಾತ್ಮಕ ನಡೆಯೆಂದೇ ಹೇಳಬಹುದು. 

ಮಾಧ್ಯಮಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಕಾರಾತ್ಮಕವಾದ ಸುದ್ದಿಗಳೇ ಹೆಚ್ಚಿರುತ್ತವೆ. ಅಲ್ಲಿನ ಅನೇಕ ಯುವಕರು ಪೋಲೀಸ್‌ ಪಡೆಯಲ್ಲಿ, ಸೇನೆಯಲ್ಲಿ ಉಳಿದ ಸೈನಿಕರಂತೆಯೇ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಕುರಿತು ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಕಾಶ್ಮೀರದ ಯುವಕರೆಂದರೆ ಭಯೋತ್ಪಾದಕರು ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುವವರು ಎಂಬ ಸಾಮಾನ್ಯ ಭಾವನೆ ದೇಶದ ಉಳಿದೆಡೆಗಳಲ್ಲಿ ಇದೆ. 

ಈ ಅಭಿಪ್ರಾಯವನ್ನು ಬದಲಿಸುವಲ್ಲಿ ನಜೀರ್‌ ವಾನಿಯಂಥ ಯುವಕರನ್ನು ಗುರುತಿಸಿದ ಪ್ರಕ್ರಿಯೆ ನೆರವಾಗಬಹುದು. ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾಗಿರುವ ಪೊಲೀಸ್‌ ಇಲಾಖೆ ಮತ್ತು ಸೇನೆಯಲ್ಲಿದ್ದ ಕಾಶ್ಮೀರದ ಯುವಕರನ್ನೂ ಇದೇ ಮಾದರಿಯಲ್ಲಿ ಗುರುತಿಸಿ ಗೌರವಿಸುವ ಜತೆಗೆ ಅವರ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯೋನ್ಮುಖವಾದರೆ ಇನ್ನಷ್ಟು ವಾನಿಗಳು ಸೇನೆಗೆ ಸೇರಲು ಮುಂದೆ ಬಂದಾರು. 

ನಜೀರ್‌ ವಾನಿ ದೇಶಕ್ಕಾಗಿ ಮಾಡಿದ ತ್ಯಾಗ ಇಡೀ ಕಾಶ್ಮೀರದ ಜನತೆಯನ್ನು ದೇಶದ್ರೋಹಿಗಳು ಎಂದು ಭಾವಿಸುವವರ ಕಣ್ತೆರೆಸಬೇಕು. ಕಳೆದ ಮೂರು ವರ್ಷಗಳಲ್ಲಿ ಸೇನೆ, ಅರೆ ಸೇನೆ ಪಡೆ ಮತ್ತು ಪೊಲೀಸ್‌ ಪಡೆಯಲ್ಲಿದ್ದ ಹಲವು ಕಾಶ್ಮೀರಿ ಯುವಕರು ಕರ್ತವ್ಯದ ವೇಳೆಯಲ್ಲಿ ಉಗ್ರರಿಗೆ ಬಲಿಯಾಗಿದ್ದಾರೆ. ಇವರ ತ್ಯಾಗಗಳಿಗೂ ಸೂಕ್ತ ಗೌರವ ಸಿಗುವಂತಾದರೆ ದಿಲ್ಲಿ ಮತ್ತು ಶ್ರೀನಗರದ ನಡುವೆ ಇರುವ ಅಂತರ ಕಡಿಮೆಯಾಗಬಹುದು.ಯೋಧರು ಎಂದಲ್ಲ ದೇಶಕ್ಕಾಗಿ ಮಿಡಿಯುವ ಎಲ್ಲ ಕಾಶ್ಮೀರಿಗಳನ್ನು ಸೂಕ್ತವಾಗಿ ಗೌರವಿಸಿದರೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಹಳೇ ಆರೋಪವನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಬಹುದು. 

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.