ಅರ್ಥಪೂರ್ಣ ಚರ್ಚೆಗಳಿಲ್ಲದೇ ಹಾದಿತಪ್ಪಿದ ಅಧಿವೇಶನ


Team Udayavani, Mar 26, 2021, 6:40 AM IST

ಅರ್ಥಪೂರ್ಣ ಚರ್ಚೆಗಳಿಲ್ಲದೇ ಹಾದಿತಪ್ಪಿದ ಅಧಿವೇಶನ

ಮಾರ್ಚ್‌ 4ರಿಂದ ಆರಂಭವಾಗಿ ಮಾರ್ಚ್‌ 31ರ ವರೆಗೆ ನಡೆಯ ಬೇಕಿದ್ದ ಬಜೆಟ್‌ ಮೇಲಿನ ಅಧಿವೇಶನ ಬುಧವಾರಕ್ಕೇ ಮುಕ್ತಾಯ ಗೊಂಡಿದೆ.  ಬಜೆಟ್‌ ಮೇಲಿನ ಚರ್ಚೆಗಿಂತ ಹೆಚ್ಚಾಗಿ ಕಲಾಪದಲ್ಲಿ ಸಿಡಿ ಪ್ರಕರಣ, ಆರು ಸಚಿವರು ಕೋರ್ಟ್‌ನಿಂದ ತಡೆಯಾಜ್ಞೆ ತೆಗೆದುಕೊಂಡ ವಿಚಾರ, ಸಚಿವ ಡಾ| ಸುಧಾಕರ್‌ ನೀಡಿದ ಏಕಪತ್ನಿ ವ್ರತಸ್ಥ ಹೇಳಿಕೆಗಳೇ ಚರ್ಚೆಯಲ್ಲಿ ಮುನ್ನೆಲೆ ಪಡೆದವು.

ವಿಪಕ್ಷಕ್ಕೆ ಅದು ಪ್ರಮುಖ ವಿಚಾರವಾದರೂ ಕೋವಿಡ್‌ನ‌ ಈ ಸಂಕಷ್ಟಕರ ಕಾಲಘಟ್ಟದಲ್ಲಿ  ಬಜೆಟ್‌ ಅಧಿವೇಶನದಲ್ಲಿ ಅರ್ಥ ಪೂರ್ಣವಾದ ಚರ್ಚೆಗಳು ನಡೆಯಬೇಕಿತ್ತು. ಈಗೆಂದಷ್ಟೇ ಅಲ್ಲ, ಪ್ರತೀ ಬಾರಿಯೂ ಕಲಾಪಗಳು ಮುಖ್ಯ ಚರ್ಚೆಯ ವಿಷಯದಿಂದ ಹಾದಿ ತಪ್ಪಿ, ವಾಕ್‌ಸಮರ, ವಾಕೌಟ್‌,  ಗದ್ದಲ, ಧಿಕ್ಕಾರಗಳ ಕೂಗಿನ ನಡುವೆಯೇ ಕಳೆದು ಹೋಗುತ್ತಿರುವುದು ದುರಂತ.  ಅಧಿವೇಶನದ ಮೊದಲನೆಯ ದಿನವೇ ವಿಪಕ್ಷಗಳ ವಿರೋಧದ ನಡುವೆ “ಒಂದು ರಾಷ್ಟ್ರ-ಒಂದು ಚುನಾವಣೆ’ ಕುರಿತ ವಿಶೇಷ ಚರ್ಚೆ ಕೈಗೊಳ್ಳಲು ಸರಕಾರ ಮುಂದಾದದ್ದು, ಇದರಿಂದಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲವೇರ್ಪಟ್ಟು ಇಡೀ ದಿನದ ಕಲಾಪ ಬಲಿ ಆದಾಗ, ರಾಜ್ಯದ ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ಬಗ್ಗೆ ಜನಸಾಮಾನ್ಯರು ಭರವಸೆಯನ್ನೇ ಕಳೆದುಕೊಂಡರು.

ಅಂದುಕೊಂಡಂತೆಯೇ ಬಜೆಟ್‌ ಮೇಲಿನ ಅಧಿವೇಶನ, ರಾಜ್ಯದ ಹಿತಚಿಂತನೆಯ ದೃಷ್ಟಿಯಿಂದ ಅಷ್ಟಾಗಿ ಫ‌ಲಕಾರಿಯಾಗದೇ ಮುಂದೂ ಡಿಕೆಯಾಗಿದೆ. ರಾಜ್ಯದಲ್ಲಷ್ಟೇ ಅಲ್ಲ, ಕೇಂದ್ರದ ಮಟ್ಟದಲ್ಲೂ ಅನ್ಯ ಕಾರಣಗಳಿಗಾಗಿ ಇಂಥ ವಿದ್ಯಮಾನವನ್ನೇ ನಾವು ನೋಡುತ್ತಿದ್ದೇವೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾದರೆ, ಅದಕ್ಕೂ ಮುನ್ನ ಲೋಕಸಭೆಯನ್ನು ಅನಿರ್ದಿಷ್ಟಾ ವಧಿಗೆ ಮುಂದೂಡಲಾಗಿತ್ತು.

ರಾಜ್ಯದ ವಿಚಾರಕ್ಕೆ ಬಂದರೆ, ಆಡಳಿತಾರೂಢ ಪಕ್ಷ ಮತ್ತು ವಿಪಕ್ಷಗಳು ತಮ್ಮನ್ನು ಜನರು ಗಮನಿಸುತ್ತಿದ್ದಾರೆ, ರಾಜ್ಯದ ಆರ್ಥಿಕ ಸ್ಥಿತಿಗೆ ಮರುವೇಗ ನೀಡುವ ತುರ್ತು ಎಷ್ಟಿದೆ ಎನ್ನುವ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲವೇನೋ ಎಂಬಂತಿವೆ ಅವುಗಳ ವರ್ತನೆ.  ಆದರೆ ಅಧಿಕಾರದ ವಿಚಾರಕ್ಕೆ ಬಂದಾಗ ಮಾತ್ರ ಇವು ಸಕ್ರಿಯವಾಗಿಬಿಡುತ್ತವೆ. ಬಜೆಟ್‌ ಅಧಿವೇಶನ ಮುಕ್ತಾಯಗೊಂಡದ್ದೇ ಮೂರೂ ರಾಜಕೀಯ ಪಕ್ಷಗಳು ಮುಂಬರುವ ಉಪ ಚುನಾವಣೆಯತ್ತ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ಎಲ್ಲಿಲ್ಲದ ಗಮನ ಹರಿಸುವುದು ನಿಶ್ಚಿತ.

ಆದಾಗ್ಯೂ ವಿಧಾನ ಮಂಡಲ ಅಧಿವೇಶನವನ್ನು ಮುಂದೂಡುವ ಮೊದಲು ಬಜೆಟ್‌ಗೆ ಅಂಗೀಕಾರ ನೀಡಲಾಗಿದೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮುಖ್ಯ ವಿಚಾರಗಳ ಚರ್ಚೆಗಳು ಆಗದಿರುವುದು ಬೇಸರದ ಸಂಗತಿ. ಪದೇ ಪದೆ ಈ ರೀತಿ ಅಧಿವೇಶನಗಳು ತಮ್ಮ ಮುಖ್ಯ ಉದ್ದೇಶದಿಂದ ವಿಮುಖವಾಗುವ ಪರಿಪಾಠ ನಿಲ್ಲಲೇಬೇಕಿದೆ. ಆಡಳಿತ ಹಾಗೂ ವಿಪಕ್ಷ ಎರಡರ ಮೇಲೂ ಈ ಜವಾಬ್ದಾರಿ ಇದೆ. ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನ ಮೊಟಕುಗೊಂಡ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವುದು ಗಮನಾರ್ಹ.

ಟಾಪ್ ನ್ಯೂಸ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.