ಶಸ್ತ್ರಾಸ್ತ್ರ ಖರೀದಿ ಶ್ಲಾಘನೀಯ ಸುಧಾರಣಾ ಕ್ರಮ


Team Udayavani, Oct 31, 2017, 6:15 AM IST

modern-weapon-indian-army.jpg

ಸೇನಾ ಪಡೆಗಳನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಗೆ ಕಡೆಗೂ ಚಾಲನೆ ಸಿಕ್ಕಿದೆ.ಸೈನಿಕರ ಕೈಯಲ್ಲಿರುವ ಹಳೆ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಿ ಅವರಿಗೆ ಹೊಸ ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲು ಸರಕಾರ ನಿರ್ಧರಿಸಿದ್ದು, ಭಾರೀ ಪ್ರಮಾಣದ ಖರೀದಿಗೆ ಮುಂದಾಗಿದೆ. 

7 ಲಕ್ಷ ರೈಫ‌ಲ್‌ಗ‌ಳು, 44 ಸಾವಿರ ಲಘು ಮೆಶಿನ್‌ ಗನ್‌ಗಳು, 44,600 ಕಾರ್ಬೈನ್‌ಗಳು ಸೇರಿದಂತೆ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸುವ ನಿರ್ಧಾರ ಅಂತಿಮಗೊಂಡಿದ್ದು, ಇದಕ್ಕಾಗಿ 44,000 ಕೋ. ರೂ. ಅಂದಾಜಿಸಲಾಗಿದೆ. ಭಾರತೀಯ ಸೇನಾ ಇತಿಹಾಸ ದಲ್ಲೇ ಈ ಪ್ರಮಾಣದ ಶಸ್ತ್ರಾಸ್ತ್ರಗಳು ಖರೀದಿಯಾಗುತ್ತಿರುವುದು ಇದೇ ಮೊದಲು. 

ಪಕ್ಕದಲ್ಲೇ ಎರಡು ಪ್ರಬಲ ಶತ್ರು ರಾಷ್ಟ್ರಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸದಾ ಯುದ್ಧಸನ್ನದ್ಧ ಸ್ಥಿತಿಯಲ್ಲಿರುವಾಗ ನಮ್ಮ ಸೈನಿಕರು ಈಗಲೂ ಓಬೀರಾಯನ ಕಾಲದ ಬಂದೂಕುಗಳನ್ನು ಹಿಡಿದು ಕೊಂಡು ಇರುವುದು ನಾಚಿಕೆಗೇಡಿನ ಸಂಗತಿ. ಆಗಾಗ ಸೇನೆಯ ಕುಂದುಕೊರತೆಗಳು ಬಹಿರಂಗವಾಗುತ್ತಿದ್ದು, ಇದರಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕೊರತೆಯ ಕುರಿತು ಬೆಳಕು ಚೆಲ್ಲಲಾಗುತ್ತಿತ್ತು. ಇಂತಹ ವರದಿಗಳು ಬಂದಾಗಲೆಲ್ಲ ಯೋಧರಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಕೂಡ ಆತಂಕವಾಗುತ್ತಿದ್ದುದು ಸುಳ್ಳಲ್ಲ. ಕನಿಷ್ಠ ಸಮರ್ಪಕ ಬಂದೂಕುಗಳೇ ಇಲ್ಲದೆ ಯುದ್ಧ ಮಾಡುವುದಾದರೂ ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಇದೀಗ ಈ ಚಿಂತೆಯನ್ನು ದೂರಮಾಡುವ ನಿಟ್ಟಿನಲ್ಲಿ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರತವಾಗಿದೆ. 

ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ಸೇನೆಯನ್ನು ಸುಸಜ್ಜಿತಗೊಳಿಸಲು ನಡೆಸುತ್ತಿರುವ ಪ್ರಯತ್ನಗಳು ಸಕಾಲಿಕವಾಗಿವೆ. ಕೆಲ ಸಮಯದ ಹಿಂದೆಯಷ್ಟೆ ಸೇನೆಗೆ 40,000 ಕೋ. ರೂ.ಗಳಷ್ಟು ಮೊತ್ತದ ಖರೀದಿಯನ್ನು ನೇರವಾಗಿ ಮಾಡಲು ಅನುಮತಿ ನೀಡಲಾಗಿತ್ತು. ಕಿರು ಮತ್ತು ತೀವ್ರವಾದ ಯುದ್ಧಕ್ಕೆ ಸೇನೆಯನ್ನು ಸಜ್ಜಾಗಿಡುವ ನಿಟ್ಟಿನಲ್ಲಿ ಸರಕಾರದ ಈ ನಿರ್ಧಾರ ಕೈಗೊಂಡಿದೆ. ಶಸ್ತ್ರಾಸ್ತ್ರ ಖರೀದಿಯಲ್ಲಿ ದಲ್ಲಾಳಿಗಳ ಮತ್ತು ಕೆಂಪುಪಟ್ಟಿಯ ಹಾವಳಿಯನ್ನು ನಿವಾರಿಸಲು ಈ ಕ್ರಮ ಸಹಕಾರಿ. ಸೇನಾ ಮುಖ್ಯಸ್ಥರೇ ಈ ಖರೀದಿಗಳನ್ನು ಮಾಡ ಬಹುದು ಎನ್ನುವುದು ಗಮನಾರ್ಹ ಅಂಶ. ಸದ್ಯದಲ್ಲೇ ನೌಕಾಪಡೆ ಮತ್ತು ವಾಯುಪಡೆಗೆ ಈ ಅಧಿಕಾರವನ್ನು ನೀಡಲು ಸರಕಾರ ಚಿಂತನೆ ನಡೆಸಿದೆ. ಇನ್ನು ಸೇನೆ ಶಸ್ತ್ರಾಸ್ತ್ರ ಖರೀದಿಗೆ ಸೇನೆ ರಕ್ಷಣಾ ಖರೀದಿ ಮಂಡಳಿ ಅಥವ ಸಂಪುಟ ಸಮಿತಿಯ ಮರ್ಜಿಗೆ ಕಾಯುವ ಸುತ್ತುಬಳಸಿನ ದಾರಿಯನ್ನು ಅನುಸರಿಸುವ ಅಗತ್ಯವಿಲ್ಲ. ತಕ್ಷಣಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಇನ್ನಿತರ ರಕ್ಷಣಾ ಸಾಮಾಗ್ರಿಗಳನ್ನು ದಂಡನಾಯಕರೇ ಖರೀದಿಸುವ ನಿರ್ಧಾರ ಕೈಗೊಳ್ಳಬಹುದು. 

ಸೇನೆಯಲ್ಲಿ ಪ್ರಸ್ತುತ 46 ತರಹದ ಮದ್ದುಗುಂಡುಗಳು, ಕೆಲವು ಬಿಡಿಭಾಗಗಳು ಮತ್ತು 10 ತರಹದ ಶಸ್ತ್ರಾಸ್ತ್ರಗಳ ತೀವ್ರ ಕೊರತೆಯಿದೆ ಎಂದು ಗುರುತಿಸಲಾಗಿದ್ದು, ನೇರ ಖರೀದಿಯಿಂದ ಕ್ಷಿಪ್ರವಾಗಿ ಈ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಉರಿ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಸೇನೆಯ ಶಸ್ತ್ರ ಭಂಡಾರವನ್ನು ಪರಿಶೋಧನೆಗೊಳಪಡಿಸಿದಾಗ ಆಘಾತಕಾರಿಯಾದ ಮಾಹಿತಿಗಳು ಬಹಿರಂಗವಾಗಿದ್ದವು. 

ಸೇನೆಯ ಬಳಿಯಿರುವುದು ಬರೀ 15 ದಿನಗಳ ಯುದ್ಧಕ್ಕಾಗುವಷ್ಟು ಶಸ್ತ್ರ ಸಾಮಗ್ರಿ ಎಂಬ ಅಂಶ ಬಹಿರಂಗವಾದ ಬಳಿಕ ವ್ಯಾಪಕ ಕಳವಳ ವ್ಯಕ್ತವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸ್ಥಿತಿ ಇಲ್ಲ. ಭವಿಷ್ಯದ ಯುದ್ಧಗಳೇನಿದ್ದರೂ ಕೆಲವೇ ದಿನಗಳಲ್ಲಿ ಮುಗಿಯುವ ಕಿರು ಹೋರಾಟಗಳು. ಆದರೆ ಭಾರೀ ಸಾಮರ್ಥ್ಯದ ಆಧುನಿಕ ಶಸ್ತ್ರಾಸ್ತ್ರಗಳ ಆವಿಷ್ಕಾರವಾಗಿರುವುದರಿಂದ ಕಿರು ಯುದ್ಧಗಳ ತೀವ್ರತೆ ಕಡಿಮೆಯಿರಬಹುದು ಎಂದು ಭಾವಿಸುವಂತಿಲ್ಲ. ಆದರೆ ಇಂತಹ ಯುದ್ಧಗಳನ್ನು ಎದುರಿಸುವಷ್ಟು ಶಸ್ತ್ರಾಸ್ತ್ರಗಳು ನಮ್ಮ ಸಂಗ್ರಹದಲ್ಲಿ ಇಲ್ಲ ಎನ್ನುವುದು ಚಿಂತೆಗೀಡುಮಾಡುವ ವಿಚಾರ. ಈಗಲೂ ದೇಶ ಆಧುನಿಕ ಶಸ್ತ್ರಾಸ್ತ್ರ ಮತ್ತು ಯುದೊœàಪಕರಣಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದೆ. ಜಗತ್ತಿನ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. 

ರಶ್ಯಾ ನಮಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತಿರುವ ಪ್ರಮುಖ ದೇಶ. ಆದರೆ ಕಳೆದ ಕೆಲವು ದಶಕಗಳಿಂದ ಯಾವ ಶಸ್ತ್ರಾಸ್ತ್ರ ಖರೀದಿಯೂ ವಿವಾದಗಳಿಂದ ಹೊರತಾಗಿಲ್ಲ. ಬೋಫೋರ್ನಿಂದ ಹಿಡಿದು ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ತನಕ ಎಲ್ಲವೂ ವಿವಾದಕ್ಕೊಳಗಾಗಿದೆ. ಶಸ್ತ್ರಾಸ್ತ್ರ ಖರೀದಿ ಎನ್ನುವುದು ಅತ್ಯಂತ ಜಟಿಲವಾದ ಪ್ರಕ್ರಿಯೆ. 

ಹೀಗಾಗಿಯೇ ಇದರಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ಹೆಚ್ಚು ಇರುತ್ತದೆ. ದಲ್ಲಾಳಿಗಳ ಇದ್ದೆಡೆ ಅಕ್ರಮಗಳು ಇದ್ದೇ ಇರುತ್ತವೆ. ಸಹಸ್ರಾರು ಕೋಟಿ ವ್ಯವಹಾರದಲ್ಲಿ ತಿನ್ನುವವರಿಗೇನೂ ಕೊರತೆಯಿರುವುದಿಲ್ಲ. ಇದರಿಂದಾಗಿಯೇ ನಮ್ಮ ಶಸ್ತ್ರ ಭಂಡಾರ ಇನ್ನೂ ಪರಿಪೂರ್ಣವಾಗಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಸರಕಾರ ಸೇನಾ ಖರೀದಿಯಲ್ಲಿ ಪಾರದರ್ಶಕತೆಯನ್ನು ತರಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ ನಡೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.