ಪ್ರತಿಷ್ಠೆಯ ಹೋರಾಟ ಗೆದ್ದ ಕಾಂಗ್ರೆಸ್‌: ಎರಡು ಪಕ್ಷಗಳಿಗೂ ಪಾಠ


Team Udayavani, Aug 10, 2017, 7:43 AM IST

10-ANKANA-4.jpg

ನಿಜವಾಗಿ ನೋಡಿದರೆ ರಾಜ್ಯಸಭೆಯ ಒಂದು ಸೀಟಿನಿಂದ ಬಿಜೆಪಿಗೆ ಆಗಬೇಕಾದದ್ದೇನೂ ಇರಲಿಲ್ಲ. ಈಗಾಗಲೇ ಅದು ರಾಜ್ಯಸಭೆಯಲ್ಲಿ ದೊಡ್ಡ ಪಕ್ಷ.

ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಮತ್ತು ಅಮಿತ್‌ ಶಾ ನಡುವಿನ ಪ್ರತಿಷ್ಠೆಯ ಹೋರಾಟವಾಗಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಕೊನೆಗೂ ಪಟೇಲ್‌ ಗೆಲುವಿನ ನಗೆ ಬೀರಿದ್ದಾರೆ. ರಾಜ್ಯಸಭಾ ಚುನಾವಣೆಯೊಂದು ಈ ಮಟ್ಟದ ಕುತೂಹಲ ಕೆರಳಿಸಿದ್ದು ಪ್ರಾಯಶಃ ಇದೇ ಮೊದಲು. ತಡರಾತ್ರಿ ತನಕ ಹತ್ತಾರು ತಿರುವುಗಳನ್ನು ಪಡೆದ ಟ್ವೆಂಟಿ-ಟ್ವೆಂಟಿ ಕ್ರಿಕೆಟ್‌ ಪಂದ್ಯಕ್ಕಿಂತಲೂ ರೋಚಕವಾಗಿದ್ದ ಹೈಡ್ರಾಮಾದಲ್ಲಿ ಕಾಂಗ್ರೆಸ್‌ ತಾಂತ್ರಿಕ ಕಾರಣದಿಂದಾಗಿ ಗೆದ್ದಿದೆ. ಸೋಲಿನ ಮೇಲೆ ಸೋಲುಗಳನ್ನು ಕಾಣುತ್ತಾ ಬಂದಿರುವ ಕಾಂಗ್ರೆಸ್‌ಗೆ ಈ ಗೆಲವು ಒಂದಕ್ಕಿಂತ ಹೆಚ್ಚು ಕಾರಣಕ್ಕೆ ಮುಖ್ಯವಾಗಿದೆ ಹಾಗೂ ಇನ್ನು ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಎದುರಿಸುವ ನೈತಿಕ ಸ್ಥೈರ್ಯವನ್ನು ಪಕ್ಷಕ್ಕೆ ನೀಡಿದೆ. ಒಂದು ವೇಳೆ ಪಟೇಲ್‌ ಸೋಲುತ್ತಿದ್ದರೆ ಪರೋಕ್ಷವಾಗಿ ಇದು ಸೋನಿಯಾ ಗಾಂಧಿಯ ಸೋಲು ಆಗುತ್ತಿತ್ತು. ಅಂತೆಯೇ ಪಕ್ಷದ ಜಂಘಾಬಲವನ್ನೇ ಉಡುಗಿಸುವ ಸಾಧ್ಯತೆಯಿತ್ತು. ಸದ್ಯಕ್ಕೆ ಈ ಅಪಾಯದಿಂದ ಕಾಂಗ್ರೆಸ್‌ ಪಾರಾಗಿರುವುದಲ್ಲದೆ ತನ್ನಲ್ಲಿನ್ನೂ ಹೋರಾಟದ ಕೆಚ್ಚು ಉಳಿದುಕೊಂಡಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಹೋರಾಟಕ್ಕಿಂತಲೂ ಶಾ ಮತ್ತು ಪಟೇಲ್‌ ನಡುವಿನ ವೈಯಕ್ತಿಕ ಜಿದ್ದಿನ ಹೋರಾಟ ಎಂದೇ ಅರಿಯಲ್ಪಟ್ಟಿತ್ತು.  

ಪಟೇಲರನ್ನು ಸೋಲಿಸಲು ಬಿಜೆಪಿ ಸಾಮ ದಾನ ದಂಡ ಬೇಧ ತಂತ್ರಗಳನ್ನೆಲ್ಲ ಪ್ರಯೋಗಿಸಿತ್ತು. ಇದನ್ನೆಲ್ಲ ಎದುರಿಸಿ ಪಟೇಲ್‌ ರಾಜ್ಯಸಭಾ ಸ್ಥಾನ ಉಳಿಸಿಕೊಂಡಿರುವುದು ಸಣ್ಣ ಸಂಗತಿಯಲ್ಲ. ಇದೇ ವೇಳೆ ಈ ಚುನಾವಣೆ ಒಂದು ಗೆಲುವಿಗಾಗಿ ರಾಜಕೀಯ ಪಕ್ಷಗಳು ಯಾವ ಕಸರತ್ತು ನಡೆಸಲು ಕೂಡ ಹಿಂಜರಿಯುವುದಿಲ್ಲ ಎಂಬ ನಗ್ನಸತ್ಯವನ್ನು ಜಗಜ್ಜಾಹೀರುಗೊಳಿಸಿದೆ. ನಿಜವಾಗಿ ನೋಡಿದರೆ ರಾಜ್ಯಸಭೆಯ ಒಂದು ಸೀಟಿನಿಂದ ಬಿಜೆಪಿಗೆ ಆಗಬೇಕಾದದ್ದೇನೂ ಇರಲಿಲ್ಲ. ಈಗಾಗಲೇ ಅದು ರಾಜ್ಯಸಭೆಯಲ್ಲಿ ದೊಡ್ಡ ಪಕ್ಷ. ಒಂದು ವೇಳೆ ಪಕ್ಷದ ಮೂರನೇ ಅಭ್ಯರ್ಥಿ ಗೆದ್ದಿದ್ದರೆ ಒಂದು ಸ್ಥಾನ ಹೆಚ್ಚುತ್ತಿತ್ತು ಅಷ್ಟೆ. ಆದರೆ ಇದೇ ಅಹ್ಮದ್‌ ಪಟೇಲ್‌ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಿಬಿಐಯನ್ನು ಬಳಸಿಕೊಂಡು ರೌಡಿಯೊಬ್ಬನ ಎನ್‌ಕೌಂಟರ್‌ ಪ್ರಕರಣದಲ್ಲಿ ಶಾ ಅವರನ್ನು ಮೂರು ತಿಂಗಳು ಜೈಲಲ್ಲಿರುವಂತೆ ಮಾಡಿದ್ದರು. ಈ ಹಗೆಯನ್ನು ತೀರಿಸಲು ಶಾಗೆ ರಾಜ್ಯಸಭೆ ಚುನಾವಣೆ ಒಂದು ಅವಕಾಶವನ್ನು ನೀಡಿತು. ಆದರೆ ಮತದಾನದ ವೇಳೆ ಆದ ಚಿಕ್ಕದೊಂದು ಎಡವಟ್ಟಿನಿಂದಾಗಿ ಶಾ ಲೆಕ್ಕಾಚಾರವೆಲ್ಲ ಬುಡಮೇಲಾಯಿತು. ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಕಾಂಗೆ‌Åಸ್‌ ಗಳಿಸಿದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಜು.26ರ ತನಕ ಗುಜರಾತಿನಲ್ಲಿ ಕಾಂಗ್ರೆಸ್‌ 57 ಶಾಸಕರನ್ನು ಹೊಂದಿತ್ತು. ಮುಂದಿನ ಆರು ದಿನಗಳಲ್ಲಿ ಆರು ಮಂದಿ  ರಾಜಿನಾಮೆ ನೀಡಿ ಕಾಂಗ್ರೆಸ್‌ ಬಲ 51ಕ್ಕಿಳಿಯಿತು. ಈ 51 ಮಂದಿಯಲ್ಲಿ ಪಟೇಲ್ಗೆ ಮತ ಹಾಕಿರುವುದು 42 ಮಂದಿ ಮಾತ್ರ. ಅಂದರೆ ಮತ್ತೆ ಒಂಬತ್ತು ಶಾಸಕರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಒಟ್ಟಾರೆಯಾಗಿ ಪಕ್ಷ 15 ಶಾಸಕರನ್ನು ಕಳೆದುಕೊಂಡಂತಾಗಿದೆ. ಈ ಪೈಕಿ ಹೆಚ್ಚಿನ ಶಾಸಕರು ತಮ್ಮದೇ ಆದ ಮತಬ್ಯಾಂಕ್‌ ಹೊಂದಿದವರು. ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಾಗ 15 ಶಾಸಕರನ್ನು ಕಳೆದುಕೊಂಡಿರುವುದು ಪಕ್ಷಕ್ಕಾಗಿರುವ ಭಾರೀ ಹಿನ್ನಡೆಯೇ ಸರಿ. ಮುಖ್ಯವಾಗಿ ಪ್ರಬಲ ನಾಯಕ ಶಂಕರ್‌ ಸಿನ್ಹ ವಘೇಲಾ ಅವರೇ ಪಕ್ಷದಿಂದ ಹೊರಬಂದಿದ್ದಾರೆ. ಕಾಂಗ್ರೆಸ್‌ನ ದುರಾದೃಷ್ಟಕ್ಕೆ ಶಾಸಕರು ರೆಸಾರ್ಟ್‌ನಲ್ಲಿರುವಾಗಲೇ ಗುಜರಾತ್‌  ಪ್ರವಾಹಕ್ಕೆ ತುತ್ತಾಯಿತು. ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾದಾಗ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ ಮೋಜು ಮಾಡುತ್ತಿದ್ದರು ಎಂಬ ಭಾವನೆ ಹುಟ್ಟುಹಾಕುವಲ್ಲಿ ಬಿಜೆಪಿ ಸಫ‌ಲವಾಗಿದ್ದು, ಕಾಂಗ್ರೆಸ್‌ಗಾಗಿರುವ ಭಾರೀ ಹಿನ್ನಡೆ. ಏನೇ ಆದರೂ ಈ ಫ‌ಲಿತಾಂಶದಲ್ಲಿ  ಎರಡೂ ಪಕ್ಷಗಳು ಯಾವುದನ್ನೂ ಟೇಕನ್‌ ಫಾರ್‌ ಗ್ರಾಂಟೆಡ್‌ ಎಂಬುದಾಗಿ ಪರಿಗಣಿಸಬಾರದು ಪಾಠ ಕಲಿತಿರುವುದಂತೂ ನಿಜ. ಇದು ಪ್ರಜಾತಂತ್ರಕ್ಕಾಗಿರುವ ನಿಜವಾದ ಲಾಭ.

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.