ಲೋಪಗಳನ್ನು ಸರಿಪಡಿಸಿ; ಟೀಕೆ-ಅಪಹಾಸ್ಯಕ್ಕೆ ಒಳಗಾದ ನಿಯಮ


ಸಂಪಾದಕೀಯ, Sep 5, 2019, 5:18 AM IST

Motor-Vehicle-Act

ಸಾರಿಗೆ ನಿಯಮವನ್ನು ಉಲ್ಲಂಘಿ ಸಿದರೆ ಭಾರೀ ಮೊತ್ತದ ದಂಡ ತೆರಬೇಕಾದ ಹೊಸ ಮೋಟಾರು ವಾಹನ ಕಾಯಿದೆ ಸೆ.1ರಿಂದ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಕರ್ನಾಟಕವೂ ಬುಧವಾರದಿಂದ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ ಜಾರಿಯಾದ ನಾಲ್ಕೇ ದಿನಗಳಲ್ಲಿ ಹೊಸ ಕಾಯಿದೆಯ ಲೋಪ ದೋಷಗಳು ಬೆಳಕಿಗೆ ಬರಲಾರಂಭಿಸಿವೆ.

ಅದರಲ್ಲೂ ದಂಡದ ಮೊತ್ತಕ್ಕೆ ಸಂಬಂಧಪಟ್ಟಂತೆ ತೀವ್ರ ಟೀಕೆ ಎದು ರಾ ಗಿ ದೆ. ಗುರುಗ್ರಾಮದಲ್ಲಿ ಓರ್ವ ಸ್ಕೂಟರ್‌ ಸವಾರನಿಗೆ ಈ ನಿಯಮದ ಪ್ರಕಾರ ಪೊಲೀಸರು 23,000 ರೂ. ದಂಡ ವಿಧಿಸಿದ್ದಾರೆ. ಆತ ದಂಡ ಕಟ್ಟುವ ಬದಲು ತನ್ನ ವಾಹನವನ್ನು ಪೊಲೀಸರ ಬಳಿ ಬಿಟ್ಟು ಹೋಗಿದ್ದಾನೆ. ಅವನ ಸೆಕೆಂಡ್‌ಹ್ಯಾಂಡ್‌ ಸ್ಕೂಟರ್‌ಗಿರುವುದು ಹೆಚ್ಚೆಂದರೆ 15,000 ರೂ. ಬೆಲೆ. ಇದಕ್ಕೂ ಹೆಚ್ಚಿನ ದಂಡ ಮೊತ್ತ ಕಟ್ಟಲು ಅವನು ಸಿದ್ಧನಿಲ್ಲ. ಇದೇ ಗುರುಗ್ರಾಮದಲ್ಲಿ ಓರ್ವ ರಿಕ್ಷಾ ಚಾಲಕನಿಗೆ 32,500 ರೂ.,ಟ್ರ್ಯಾಕ್ಟರ್‌ಗೆ 59,000 ರೂ. ಮತ್ತು ಭುವನೇಶ್ವರದಲ್ಲಿ ರಿಕ್ಷಾ ಚಾಲಕನಿಗೆ 47,500 ರೂ. ದಂಡ ವಿಧಿಸಿರುವ ವರದಿಗಳು ಬಂದಿವೆ. ಈ ದುಬಾರಿ ದಂಡದ ಬಗ್ಗೆ ಸಾಮಾ ಜಿಕ ಮಾಧ್ಯಮಗಳಲ್ಲಿ ವ್ಯಂಗ್ಯದ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.

1988ರ ಮೋಟಾರು ವಾಹನ ಕಾಯಿದೆ ಅನೇಕ ಕುಂದು ಕೊರತೆಗಳಿಂದ ಕೂಡಿತ್ತು ನಿಜ. ಬೃಹತ್‌ ಗಾತ್ರಕ್ಕೆ ಬೆಳೆಯುತ್ತಿರುವ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಯಲ್ಲಾಗಿರುವ ಪರಿವರ್ತನೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಇತ್ಯಾದಿ ಆಯಾಮಗಳಿಂದ ನೋಡುವುದಾದರೆ ಹಳೆ ಕಾಯಿದೆ ಪ್ರಸ್ತುತ ಪರಿಸ್ಥಿತಿಗೆ ಸರಿ ಹೊಂದುತ್ತಿರಲಿಲ್ಲ. ಅದರಲ್ಲೂ ಹೆಚ್ಚುತ್ತಿರುವ ಅಪಘಾತಗ‌ಳಿಗೆ ಹಳೆ ನಿಯಮಗಳಲ್ಲಿರುವ ಲೋಪದೋಷಗಳೇ ಬಹುತೇಕ ಕಾರಣವಾಗಿತ್ತು. ಹೆಚ್ಚಿನ ಅಪಘಾತಗಳಿಗೆ ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸುವಲ್ಲಿ ತೋರಿಸು ತ್ತಿರುವ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದೂ ನಿಜವೇ. ಹಳೆ ಕಾಯಿದೆಯಲ್ಲಿ ಇಂಥ ಚಾಲಕರನ್ನು ದಂಡಿಸಲು ಅಗತ್ಯವಿರುವ ಕಠಿನ ಅಂಶಗಳು ಇರಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರ ಹಿಂದಿನ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ.

ಎಲ್ಲಾ ಪ್ರಕಾರದ ಸಾರಿಗೆ ನಿಯಮಗಳ ದಂಡದ ಮೊತ್ತವನ್ನು ಅತಿ ಎನ್ನುವಷ್ಟು ಹೆಚ್ಚಿಸಲಾಗಿದೆ. ಸಾಮಾನ್ಯ ನಿಯಮ ಉಲ್ಲಂಘನೆಯ ಮೊತ್ತವೂ ಹತ್ತು ಪಟ್ಟು ಹೆಚ್ಚಾಗಿದೆ. ಹೀಗಾಗಿ ಸೀಟ್‌ಬೆಲ್ಟ್ ಧರಿಸದಂತಿರುವ ತಪ್ಪುಗಳಿಗೂ ಈಗ ರೂ. 100ರ ಬದಲು 1000 ರೂ. ಪಾವತಿಸಬೇಕು. ವಿಪರೀತ ದಂಡ ಬೀಳುತ್ತದೆ ಎಂಬ ಹೆದರಿಕೆಯಿಂದಲಾದರೂ ಜನರು ರಸ್ತೆ ನಿಯಮಗಳನ್ನು ಪಾಲಿಸಿ ಯಾರು. ಈ ಮೂಲಕ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಬಹುದು ಎಂಬ ಎಣಿಕೆ ಸರಕಾರದ್ದಾಗಿತ್ತು. ಆದರೆ ವಿಪರೀತ ದಂಡದ ಮೊತ್ತದಿಂದ ಸೃಷ್ಟಿಯಾ ಗಬಹುದಾದ ಇನ್ನೊಂದು ಪರಿಸ್ಥಿತಿಯನ್ನು ಊಹಿಸುವಲ್ಲಿ ನಿಯಮಗಳ ಸೃಷ್ಟಿಕರ್ತರು ವಿಫ‌ಲರಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಅಥವಾ ದ್ವಿಚಕ್ರ ವಾಹನ ಸವಾರ ಸದಾ ತನ್ನ ಜೇಬಿನಲ್ಲಿ ಸಾವಿರಾರು ರೂಪಾಯಿ ಇಟ್ಟುಕೊಂಡು ಓಡಾಡುತ್ತಾನೆ ಎಂಬ ಕಲ್ಪನೆಯೇ ಅಸಂಗತ.

ಈಗಾಗಲೇ ಪಶ್ಚಿಮ ಬಂಗಾಳ,ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಹೊಸ ನಿಯಮವನ್ನು “ಅಪ್ರಾಯೋ ಗಿಕ’ಎಂದು ಕರೆದು ಅದನ್ನು ಪ್ರಸಕ್ತ ರೂಪದಲ್ಲಿ ಅನುಷ್ಠಾನಕ್ಕೆ ತರಲು ನಿರಾಕರಿಸಿವೆ. ವಿಪರೀತ ಮೊತ್ತದ ದಂಡ ವಿಧಿ ಸು ವುದನ್ನು ಈ ಸರ್ಕಾರಗಳು ವಿರೋಧಿಸಿವೆ. ಉತ್ತಮ ಉದ್ದೇಶ ಇರುವ ನೀತಿ ನಿಯಮಗಳು ದೇಶದಲ್ಲಿ ಏಕೆ ಮತ್ತು ಹೇಗೆ ಗುರಿ ತಲುಪುವಲ್ಲಿ ವಿಫ‌ಲಗೊಳ್ಳುತ್ತವೆ ಎನ್ನುವುದಕ್ಕೆ ಹೊಸ ಮೋಟಾರು ವಾಹನ ಕಾಯಿದೆಯೇ ಉತ್ತಮ ಉದಾಹರಣೆಯಾಗಬಲ್ಲದು. ಜಾಗತೀಕರ ಣದ ಪರಿಣಾಮವಾಗಿ ದೇಶದ ವಾಹನ ಮಾರುಕಟ್ಟೆ ಭಾರೀ ಸ್ಥಿತ್ಯಂತರಗಳನ್ನು ಕಂಡಿದ್ದು ಈಗ ಕೆಳ ಮಧ್ಯಮ ವರ್ಗದವರೂ ಕನಿಷ್ಠ ಒಂದು ದ್ವಿಚಕ್ರವನ್ನಾದರೂ ಇಟ್ಟು ಕೊಳ್ಳುವಷ್ಟು ಸ್ಥಿತಿವಂತರಾಗಿದ್ದಾರೆ. ಹೀಗಾಗಿಯೇ ದೇಶದ ರಸ್ತೆಗಳು ವಾಹನ ಗಳಿಂದ ತುಂಬಿ ತುಳುಕುತ್ತಿವೆ. ನಿತ್ಯ ಎಂಬಂತೆ ಹೊಸ ಹೊಸ ವಾಹನ ಗಳು ಮಾರು ಕಟ್ಟೆಗೆ ಪ್ರವೇಶಿಸುತ್ತವೆ. ಈ ಭರಾಟೆಯಲ್ಲಿ ಹಳೆ ವಾಹನಗಳ ಮೌಲ್ಯ ಭಾರೀ ಇಳಿಕೆಯಾಗುತ್ತದೆ. ಮೂರ್‍ನಾಲ್ಕು ವರ್ಷ ಓಡಿಸಿದ ದ್ವಿಚಕ್ರ ವಾಹನಕ್ಕೆ ಈಗ ಅರ್ಧ ದಷ್ಟು ಬೆಲೆಯೂ ಸಿಗುವುದಿಲ್ಲ. ಹೀಗಿರುವಾಗ ಯಾರಾ ದರೂ ಹಳೆ ವಾಹನಕ್ಕೆ ಅದರ ಬೆಲೆಗಿಂತಲೂ ಹೆಚ್ಚಿನ ದಂಡ ಪಾವತಿಸಲು ತಯಾರಿರುತ್ತಾರೆಯೇ?

ಹೀಗೆ ಮುಂದಾಲೋಚನೆಯಿಲ್ಲದೆ ರೂಪಿಸಿದ ನೀತಿ ನಿಯಮಗಳ ಅಡ್ಡ ಪರಿಣಾಮಗಳು ಹಲವು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲು ಅಗತ್ಯವಿರುವ ಅಂಶಗಳೂ ಇದರಲ್ಲೇ ಇವೆ. ಇದಕ್ಕೂ ಮಿಗಿಲಾಗಿ ಹೊಸ ಕಾಯಿದೆಯ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನವಾಗಿಲ್ಲ. ಉತ್ತಮ ಆಶಯ ಹೊಂದಿರುವ ಈ ನಿಯಮ ಅನುಷ್ಠಾನದ ಲೋಪದಿಂದಾಗಿ ಜನವಿರೋಧಿ ಯಾಗಿ ಬದಲಾಗುವ ಮೊದಲು ಲೋಪಗಳನ್ನು ಸರಿಪಡಿಸಬೇಕು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.