ಸಂಕಷ್ಟದ ಹಾದಿಯಲ್ಲಿ ಜಗತ್ತು ರೋಗ ನಿಯಂತ್ರಣಕ್ಕೆ ಏನು ದಾರಿ?


Team Udayavani, Jul 2, 2020, 6:04 AM IST

ಸಂಕಷ್ಟದ ಹಾದಿಯಲ್ಲಿ ಜಗತ್ತು ರೋಗ ನಿಯಂತ್ರಣಕ್ಕೆ ಏನು ದಾರಿ?

ಪ್ರಪಂಚದಲ್ಲಿ ಕೋವಿಡ್ 19 ಪ್ರಸರಣ ವೇಗ ಈಗ ಮೊದಲಿಗಿಂತಲೂ ಅಧಿಕವಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಚೀನದ ವುಹಾನ್‌ನಿಂದ ಆರಂಭವಾದ ಈ ರೋಗ ಈಗಲೂ ನಿಲ್ಲುವ ಸೂಚನೆಯನ್ನು ತೋರಿಸುತ್ತಿಲ್ಲ.

ಬೇಸಗೆಯ ವೇಳೆ ಇದರ ಪ್ರಸರಣ ತಗ್ಗಬಹುದು ಎನ್ನಲಾಯಿತು, ಮಳೆಗಾಲದಲ್ಲಿ ಮಂದವಾಗುತ್ತದೆ ಎಂದು ಹೇಳಲಾಯಿತು, ಅದಷ್ಟೇ ಅಲ್ಲದೇ ವೈರಸ್‌ ರೂಪಾಂತರ ಹೊಂದುತ್ತಿದ್ದು ಅದು ಶೀಘ್ರದಲ್ಲೇ ದುರ್ಬಲವಾಗಿ ತಾನಾಗಿಯೇ ಇಲ್ಲವಾಗುತ್ತದೆ ಎಂಬ ಭರವಸೆಯ ನುಡಿಗಳೆಲ್ಲ ಹುಸಿಯಾಗಿವೆ.

ಅತ್ತ ಅಮೆರಿಕದಲ್ಲಿ ರೋಗವು ಎಪ್ರಿಲ್‌ ತಿಂಗಳಲ್ಲೇ ಉತ್ತುಂಗಕ್ಕೇರಿದೆ ಎಂದು ಅನಿಸಿತಾದರೂ ಈಗ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಿದ್ದರೆ ದೇಶಗಳಲ್ಲಿ ರೋಗ ಉತ್ತುಂಗಕ್ಕೇರಿತೇ ಎನ್ನುವ ಪ್ರಶ್ನೆಗೂ ಸ್ಪಷ್ಟ ಉತ್ತರವಿಲ್ಲ.

ಆದರೆ ಇದರ ಅನಂತರ ಎರಡನೆಯ ಅಲೆಯೂ ಜಗತ್ತಿಗೆ ಬಂದಪ್ಪಳಿಸಲಿದೆ ಎಂದೂ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಂತೂ ಈಗ ಅಂಕಿಅಂಶಗಳನ್ನು ಎದುರಿಡುವುದಕ್ಕೆ ಸೀಮಿತವಾಗಿದೆಯೇನೋ ಎಂದೆನಿಸುತ್ತಿದೆ.

ಆದಾಗ್ಯೂ ಅನ್ಯ ರೋಗಗಳಷ್ಟು ಕೋವಿಡ್ 19 ಸೋಂಕು ಮಾರಕವಲ್ಲ ಎನ್ನುವುದೇನೋ ಸತ್ಯ. ಪ್ರತಿನಿತ್ಯ ಟಿ.ಬಿ., ಕ್ಯಾನ್ಸರ್‌, ಹೃದಯ ತೊಂದರೆಯಂಥ ಸಮಸ್ಯೆಯಿಂದುಂಟಾಗುವ ಮರಣ ದರವೇ ಅಧಿಕವಿದೆ. ಆದರೆ, ಈ ವೈರಸ್‌ನ ಪ್ರಸರಣ ವೇಗ, ಅದು ಬಹು ಆಯಾಮದಲ್ಲಿ ಮಾಡುತ್ತಿರುವ ಹಾನಿ ಅಧಿಕವಿದೆ.

ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ ದೇಶಗಳ ಆರ್ಥಿಕ ಆರೋಗ್ಯಕ್ಕೆ ಅದು ಹೆಚ್ಚು ಹಾನಿ ಮಾಡುತ್ತಿದೆ. ವಿತ್ತ ಸ್ಥಿತಿಯಲ್ಲಿ ಏನೇ ಚೇತರಿಕೆ ಕಂಡಂತೆ ಆದರೂ ಉದ್ಯೋಗ ವಲಯಗಳು ನೆಲಕಚ್ಚಿವೆ. ಜನರ ಖರೀದಿ ಸಾಮರ್ಥ್ಯವೇ ಕುಸಿದುಹೋಗಿರುವುದರ ಬಿಸಿಯು ಉದ್ಯಮಗಳ ಮೇಲೆ, ತನ್ಮೂಲಕ ದೇಶಗಳ ಆರ್ಥಿಕತೆಯ ಮೇಲೆಯೇ ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೆ ಮುಂದೇನು ಕಥೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಂದಿನ ವರ್ಷದ ವೇಳೆಗೆ ಈ ರೋಗಕ್ಕೆ ಲಸಿಕೆ ಸಿದ್ಧವಾಗಬಹುದು (ಅಥವಾ ಇಲ್ಲ). ಹೀಗಾಗಿ ಈ ಕ್ಲಿಷ್ಟಕರ ಸಮಯದಲ್ಲಿ  ಜನಸಾಮಾನ್ಯರ ಬಳಿ ಇರುವ ಮಾರ್ಗವಿಷ್ಟೆ- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವತ್ಛತೆಯನ್ನು ಪಾಲಿಸುವುದು.

ಹಾಗೆಂದು, ಇದು ನೆಪ ಮಾತ್ರದ ಕೆಲಸವಾಗಲೇಬಾರದು. ನಾವು ನಿರಾಶೆಯಿಂದ ಕೈಚೆಲ್ಲಬಾರದು. ಸದ್ಯಕ್ಕೆ ಔಷಧಗಳಿಗಿಂತ ಸಾಮಾಜಿಕ ಅಂತರ ಪಾಲನೆಯೇ ಪರಿಣಾಮಕಾರಿ ಎನ್ನುವುದು ಸಾಬೀತಾಗುತ್ತಿದೆ. ಈ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನೂ ಜಾಗೃತನಾದರೆ ಖಂಡಿತ ರೋಗದ ವಿರುದ್ಧ ಮೇಲುಗೈ ಸಾಧಿಸುವುದಕ್ಕೆ ಸಾಧ್ಯವಿದೆ.

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.