ಕೋವಿಡ್ 19 ವೈರಸ್ : ಹಲವು ಸವಾಲು ಉಗ್ರ ದಮನವೂ ಅಗತ್ಯ


Team Udayavani, Apr 16, 2020, 12:13 AM IST

ಕೋವಿಡ್ 19 ವೈರಸ್ : ಹಲವು ಸವಾಲು ಉಗ್ರ ದಮನವೂ ಅಗತ್ಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸಂಕಷ್ಟವೊಂದು ತನ್ನ ಜತೆಗೆ ಅನೇಕ ಸಮಸ್ಯೆಗಳನ್ನೂ ಹೊತ್ತು ತಂದುಬಿಡುತ್ತದೆ. ಸಾಮಾನ್ಯವಾಗಿ ನಮ್ಮ ಗಮನವೆಲ್ಲ, ಮೂಲ ಆಪತ್ತಿನ ಮೇಲೆಯೇ ಇರುತ್ತದೆ. ಆದರೆ ಅದರ ಜತೆಗೆ ಬೆಸೆದುಕೊಂಡ ಇತರೆ ಅಪಾಯಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿಶ್ವಸಂಸ್ಥೆಯು, ಕೋವಿಡ್ 19 ವೈರಸ್ ಎದುರಾಗಬಹುದಾದ ಈ ರೀತಿಯ ಸಂಭಾವ್ಯ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯಾ ಗುಟೆರೆಸ್‌ ಅವರು, ಕೊರೊನಾ ಖಂಡಿತ ಸ್ವಾಸ್ಥ್ಯ ಸಂಕಷ್ಟವಾಗಿರಬಹುದು, ಆದರೆ ಈ ಮಹಾಮಾರಿಯಿಂದಾಗಿ ಅನೇಕ ದೂರಗಾಮಿ ಪರಿಣಾಮ ಉಂಟಾಗಬಹುದು ಎಂದು ಹೇಳಿದ್ದಾರೆ. ಇಂದು ಎಲ್ಲಾ ದೇಶಗಳೂ ಈ ಆಪತ್ತಿನೊಂದಿಗೆ ಹೋರಾಡಲು ವ್ಯಸ್ತವಾಗಿದ್ದರೆ ಇನ್ನೊಂದೆಡೆ ಉಗ್ರ ಸಂಘಟನೆಗಳು ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ.

ಅದರಲ್ಲೂ ಮುಖ್ಯವಾಗಿ, ಉಗ್ರರು ಪ್ರಸಕ್ತ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹಿಂಸಾತ್ಮಕ ಕೃತ್ಯಗಳಿಗೆ ಮುಂದಾಗಬಹುದು. ಇದರಿಂದಾಗಿ ಕೊರೊನಾ ಮಹಾಮಾರಿಯ ವಿರುದ್ಧದಲ್ಲಿನ ನಮ್ಮ ಪ್ರಯತ್ನಗಳಿಗೆ ಅಡ್ಡಿಗಳು ಎದುರಾಗಬಹುದು ಎಂದು ಗುಟೆರೆಸ್‌ ಎಚ್ಚರಿಸಿದ್ದಾರೆ.

ಇಂದು ಬಹುತೇಕ ದೇಶಗಳ ಸಂಪೂರ್ಣ ಆಡಳಿತ ಯಂತ್ರಗಳು ಕೋವಿಡ್ 19 ವೈರಸ್ ಜತೆಗೆ ಹೋರಾಡಲು ವ್ಯಸ್ತವಾಗಿವೆ. ಭದ್ರತಾ ಸಿಬಂದಿ, ಪೊಲೀಸ್‌ ವ್ಯವಸ್ಥೆಯೂ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಇಂಥ ಸಮಯದಲ್ಲಿ ಉಗ್ರವಾದಿಗಳು ತಮ್ಮ ಉಪಟಳ ಅಧಿಕ ಮಾಡಿದರೆ ಭಾರೀ ಸಮಸ್ಯೆ ಎದುರಾಗಬಹುದು. ಇತ್ತೀಚೆಗಷ್ಟೇ ಕಾಶ್ಮೀರದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸಿ ಹತರಾದ ಪಾಕಿಸ್ಥಾನಿ ಉಗ್ರರು ಇದಕ್ಕೊಂದು ಉದಾಹರಣೆ. ಉಗ್ರದಮನದ ಈ ಹೋರಾಟದಲ್ಲಿ ಭಾರತದ 5 ಸೈನಿಕರು ವೀರಮರಣವಪ್ಪಿದ್ದಾರೆ.

ಸತ್ಯವೇನೆಂದರೆ, ಪಾಕಿಸ್ಥಾನ ಇಂಥ ಸಂಕಷ್ಟದ ಸಮಯದಲ್ಲೂ ತನ್ನ ದುಷ್ಟಬುದ್ಧಿ ಬಿಡುವುದಿಲ್ಲ ಎನ್ನುವುದು ಭಾರತಕ್ಕೆ ಅರಿವಿದೆ. ಈ ಕಾರಣಕ್ಕಾಗಿಯೇ, ನಮ್ಮ ಸೇನೆ, ಗುಪ್ತಚರ ವಿಭಾಗಗಳು ತುಂಬಾ ಎಚ್ಚರಿಕೆ ವಹಿಸುತ್ತಿವೆ. ಅತ್ತ ಮಧ್ಯಪ್ರಾಚ್ಯದಲ್ಲಿ ಅವಸಾನದಂಚು ತಲುಪಿರುವ ಐಸಿಸ್‌ ಕೂಡ, ಜೆಹಾದ್‌ ನಡೆಸಲು ಉಗ್ರರಿಗೆ ಪ್ರಚೋದಿಸುತ್ತಿದೆ.

ಇಂಥ ಸಂದರ್ಭದಲ್ಲಿ ಕೋವಿಡ್ 19 ವೈರಸ್ ಜತೆಜತೆಗೆ ಉಗ್ರರೆಂಬ ವೈರಸ್‌ಗಳ ವಿರುದ್ಧವೂ ಹೋರಾಡುವ ಸವಾಲು ಎಲ್ಲಾ ದೇಶಗಳಿಗೂ ಇದೆ. ಕೋವಿಡ್ 19 ವೈರಾಣು, ಉಗ್ರರಿಗೆ ‘ಜೈವಿಕ ಅಸ್ತ್ರ’ವಾಗಬಹುದು, ಹೀಗಾಗಿ, ಈ ಹೋರಾಟದಲ್ಲೂ ಜಗತ್ತಿನ ರಾಷ್ಟ್ರಗಳೆಲ್ಲ ಒಂದಾಗಬೇಕು. ಗುಪ್ತಚರ ಮಾಹಿತಿಗಳನ್ನು ನಿಯಮಿತವಾಗಿ ಹಂಚಿಕೊಂಡು ಪರಸ್ಪರರನ್ನು ರಕ್ಷಿಸಬೇಕು.

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.