ಸಂಕಷ್ಟದಲ್ಲೂ ಭಾರತಕ್ಕೆ ಹೊಸ ಅವಕಾಶ : ಭಾರತದತ್ತ ಜಾಗತಿಕ ಕಂಪೆನಿಗಳು


Team Udayavani, May 1, 2020, 10:04 PM IST

ಸಂಕಷ್ಟದಲ್ಲೂ ಭಾರತಕ್ಕೆ ಹೊಸ ಅವಕಾಶ : ಭಾರತದತ್ತ ಜಾಗತಿಕ ಕಂಪೆನಿಗಳು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರಪಂಚದ ಪ್ರಮುಖ ಉತ್ಪಾದನಾ ಕೇಂದ್ರವಾಗಿರುವ ಚೀನದಿಂದ ನಿಧಾನಕ್ಕೆ ವಿಶ್ವದ ಅನೇಕ ಕಂಪೆನಿಗಳು ಕಾಲು ಕೀಳಲಾರಂಭಿಸಿವೆ, ಇಲ್ಲವೇ ಆ ನಿಟ್ಟಿನಲ್ಲಿ ಚಿಂತನೆಯನ್ನಂತೂ ನಡೆಸಿವೆ.  ಹೀಗೆಂದಾಕ್ಷಣ, ಚೀನದಿಂದ ಎಲ್ಲಾ ವಿದೇಶಿ ಕಂಪೆನಿಗಳೂ ಮಾಯವಾಗಿಬಿಡುತ್ತವೆ ಎಂದೇನೂ ಅಲ್ಲ.

ಆದರೂ, ಚೀನಕ್ಕೆ ಪರ್ಯಾಯ ಸ್ಥಳ ಹುಡುಕುವ ಕೆಲಸವಂತೂ ಮುಂದಿನ ದಿನಗಳಲ್ಲಿ ವೇಗಪಡೆಯುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಚೀನ ಅಲ್ಲದಿದ್ದರೆ, ಇನ್ನೆಲ್ಲಿ ಎನ್ನುವ ಪ್ರಶ್ನೆಗೆ ‘ಭಾರತ’ ಎನ್ನುವ ಉತ್ತರವೇ ಮೊದಲು ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ, ವಿದೇಶದ 1000ಕ್ಕೂ ಅಧಿಕ ಕಂಪೆನಿಗಳೀಗ ಭಾರತದತ್ತ ಚಿತ್ತ ಹರಿಸಿವೆ ಎನ್ನುವ ಸುದ್ದಿ ಇತ್ತೀಚೆಗಷ್ಟೇ ಸದ್ದು ಮಾಡಿತ್ತು. ಈಗ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ಈ ಕಂಪೆನಿಗಳ ನಡುವೆ ಮಾತುಕತೆ ವೇಗ ಪಡೆದಿದೆ.

ಈ ಸಾವಿರ ಕಂಪೆನಿಗಳಲ್ಲಿ ಕನಿಷ್ಠ 300 ಕಂಪೆನಿಗಳು ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ವೈದ್ಯಕೀಯ ಉತ್ಪನ್ನಗಳು, ಟೆಕ್ಸ್‌ಟೈಲ್ಸ್‌ ಮತ್ತು ಸಿಂಥೆಟಿಕ್‌ ಫ್ಯಾಬ್ರಿಕ್ಸ್‌ ವಲಯದ ಕಾರ್ಖಾನೆಗಳನ್ನು ಸ್ಥಾಪಿಸಲು ಸರಕಾರದೊಂದಿಗೆ ಸಕ್ರಿಯ ಸಂವಾದ ನಡೆಸುತ್ತಿವೆ. ಒಂದು ವೇಳೆ ಈ ಮಾತುಕತೆಗಳೆಲ್ಲ ಸಫ‌ಲವಾದರೆ, ಕೋವಿಡ್ ಸಂಕಷ್ಟದಿಂದಾಗಿ ತತ್ತರಿಸಿರುವ ನಮ್ಮ ಅರ್ಥವ್ಯವಸ್ಥೆಗೆ ಹೊಸ ಶಕ್ತಿ ಬರುವುದರಲ್ಲಿ ಸಂಶಯವಿಲ್ಲ.

ಈಗಿನ ಸಮಯದಲ್ಲಿ ಜಪಾನ್‌, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದ ಅನೇಕ ಕಂಪೆನಿಗಳು ಭಾರತವನ್ನು ನವ ಉತ್ಪಾದನಾ ಹಬ್‌ ಎಂಬಂತೆ ನೋಡುತ್ತಿವೆ. ಇವುಗಳಲ್ಲಿ ಮೊದಲ ಎರಡು ರಾಷ್ಟ್ರಗಳಲ್ಲಿ ಜಮೀನು ಹಾಗೂ ಮೂರನೇ ರಾಷ್ಟ್ರದಲ್ಲಿ ಮಾನವ ಸಂಪನ್ಮೂಲದ ಕೊರತೆಯಿದೆ.

ಭಾರತವು ಈಗಾಗಲೇ ಈ ರಾಷ್ಟ್ರಗಳ ಕಂಪೆನಿಗಳಿಗೆ ನೆಲೆ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಪರ್ಯಾಯ ಸ್ಥಳ, ಕೌಶಲಯುತ ಮಾನವಸಂಪನ್ಮೂಲ ಮತ್ತು ಅತ್ಯುತ್ತಮ ಮಾರುಕಟ್ಟೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ವಿದೇಶಗಳ ಮನದಿಚ್ಛೆ ಅರಿತು ಭಾರತ ಸರಕಾರ, ಈಗಿನಿಂದಲೇ ಸಕ್ರಿಯತೆ ತೋರುತ್ತಿರುವುದು ಶುಭ ಸೂಚಕವಾಗಿದೆ. ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಉದ್ಯೋಗ ಮತ್ತು ವಿತ್ತ ಸಚಿವಾಲಯದ ಜತೆ ಜತೆಗೆ ಆಯಾ ದೇಶಗಳಲ್ಲಿ ಇರುವ ಭಾರತೀಯ ದೂತವಾಸಗಳೂ ಗಂಭೀರ ಪ್ರಯತ್ನ ನಡೆಸಿವೆ.

ದೇಶದಲ್ಲಿ ಉತ್ಪಾದನೆಗೆ ಶಕ್ತಿ ತುಂಬಲು ಕೇಂದ್ರ ಸರಕಾರ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಕಾರ್ಪೊರೇಟ್‌ ಟ್ಯಾಕ್ಸ್‌ ತಗ್ಗಿಸಿತ್ತು. ಅಲ್ಲದೇ, ಹೊಸ ಫ್ಯಾಕ್ಟ್ರಿ ಸ್ಥಾಪಿಸುವವರಿಗೂ ಟ್ಯಾಕ್ಸ್‌ ಪ್ರಮಾಣವನ್ನು ಕಡಿಮೆಗಳಿಸಿದೆ. ಈ ಪ್ರಮಾಣವು ದಕ್ಷಿಣ-ಪೂರ್ವ ಏಷ್ಯನ್‌ ರಾಷ್ಟ್ರಗಳಿಗಿಂತ ಕಡಿಮೆಯಿದೆ. ಇದರ ಹೊರತಾಗಿ, ನಮ್ಮಲ್ಲಿರುವ ಮಾನವಸಂಪನ್ಮೂಲವು ಬಹುದೊಡ್ಡ ಪ್ಲಸ್‌ಪಾಯಿಂಟ್‌ ಎನ್ನುವುದನ್ನು ನಾವು ಮರೆಯುವಂತಿಲ್ಲ.

ನಮ್ಮ ದೇಶದಲ್ಲಿ 35ಕ್ಕೂ ಕಡಿಮೆ ವಯೋಮಾನದವರ ಸಂಖ್ಯೆ ಅಧಿಕವಿದೆ. ಅಷ್ಟೇ ಅಲ್ಲದೇ, ವಿಜ್ಞಾನ – ಇಂಜಿನಿಯರಿಂಗ್‌ ಪದವೀಧರರ ಸಂಖ್ಯೆಯೂ ಗಮನಾರ್ಹವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಭಾರತ ಇತರ  ರಾಷ್ಟ್ರಗಳಿಗಿಂತಲೂ ಉತ್ತಮವಾಗಿ ಪೂರೈಸಬಲ್ಲದು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಎಲ್ಲ ದೇಶಗಳಿಗೂ ಸಹಯೋಗ ನೀಡುತ್ತಾ, ಪ್ರಪಂಚದ ಭರವಸೆಯನ್ನು ಗೆದ್ದಿದೆ. ಇದೇ ವೇಳೆಯಲ್ಲೇ ಚೀನದ ವರ್ಚಸ್ಸಿಗಂತೂ ದೊಡ್ಡ ಪೆಟ್ಟು ಬಿದ್ದಿದೆ. ಕೋವಿಡ್ ಅನಂತರದ ದಿನಗಳಲ್ಲಿ ಭಾರತಕ್ಕೆ ಈ ಗುಣವು ಸಹಾಯಕ್ಕೆ ಬರಲಿದೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.