ಅಮೆರಿಕ – ಚೀನಾ ಜಗಳ ಸತ್ಯ ಹೊರಬರುವುದಿಲ್ಲ


Team Udayavani, May 5, 2020, 5:14 AM IST

ಅಮೆರಿಕ – ಚೀನಾ ಜಗಳ ಸತ್ಯ ಹೊರಬರುವುದಿಲ್ಲ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೋವಿಡ್ 19 ವೈರಸ್‌ ಎಲ್ಲಿಂದ ಹರಡಿತು? ವುಹಾನ್‌ನ ಪ್ರಯೋಗಾಲಯದಿಂದಲೋ ಅಥವಾ ಚೀನಾದ ಮಾಂಸ ಮಾರುಕಟ್ಟೆಯಿಂದಲೋ ಎನ್ನುವ ಬಗ್ಗೆ ಇನ್ನೂ ಚರ್ಚೆಗಳು ನಡೆದೇ ಇವೆ. ಯಾವ ದೇಶಕ್ಕೂ ಕೂಡ ಇದುವರೆಗೂ ಸ್ಪಷ್ಟ ಪುರಾವೆ ದೊರೆತಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯೂ ಸಹ, ಈ ವೈರಸ್‌ ಪ್ರಯೋಗಾಲಯದಲ್ಲಿ ಹುಟ್ಟಿಲ್ಲ ಎಂದು ಚೀನಾದ ಮಾತನ್ನೇ ಪುನರುಚ್ಚರಿಸುತ್ತಿದೆ. ಆದರೆ, ಇದರ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತ್ರ ಕಳೆದೊಂದು ತಿಂಗಳಿಂದ ಚೀನಾದ ಮೇಲೆ ನಿರಂತರ ದಾಳಿ ಮಾಡುತ್ತಾ ಬರುತ್ತಿರುವುದನ್ನು ನೋಡಿದರೆ, ಅವರು ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಕೋವಿಡ್‌-19 ಅನ್ನು ವುಹಾನ್‌ನ ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿದೆ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ ಎಂದೇ ಹೇಳುತ್ತಿದ್ದಾರೆ ಟ್ರಂಪ್‌. ಆದಾಗ್ಯೂ ಅಮೆರಿಕ ಅಷ್ಟೇ ಅಲ್ಲದೇ, ವಿಶ್ವದ ಅನೇಕ ರಾಷ್ಟ್ರಗಳಿಗೂ ಈ ವಿಚಾರದಲ್ಲಿ ಚೀನಾದ ಬಗ್ಗೆ ಅನುಮಾನ – ಅಸಮಾಧಾನವಿದೆಯಾದರೂ, ಅವ್ಯಾವೂ ಕೂಡ ಅಮೆರಿಕದಂತೆ ನೇರಾನೇರ ಚೀನಾದ ಮೇಲೆ ದಾಳಿ ಮಾಡುತ್ತಿಲ್ಲ.

ಸತ್ಯವೇನೆಂದರೆ, ಚೀನಾವನ್ನು ಕಟಕಟೆಯಲ್ಲಿ ನಿಲ್ಲಿಸಲೇಬೇಕು ಎನ್ನುವ ಅಮೆರಿಕ ಅಧ್ಯಕ್ಷರ ಪ್ರಯತ್ನದ ಹಿಂದೆ, ಅನ್ಯ ಕಾರಣಗಳೂ ಇವೆ. ಮೊದಲನೆಯದಾಗಿ, ಕಳೆದೊಂದು ವರ್ಷದಿಂದ ಅಮೆರಿಕ – ಚೀನಾ ನಡುವೆ ನಡೆಯುತ್ತಾ ಬಂದಿರುವ ವ್ಯಾಪಾರ ಸಮರದ ಅಡ್ಡ ಪರಿಣಾಮವಿದು. ಮತ್ತು ಎರಡನೆಯದಾಗಿ ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳಿದ್ದು, ಕೋವಿಡ್ 19 ಹಾವಳಿಯು ಎಲ್ಲಿ ತಮ್ಮ ಕನಸಿಗೆ ತಣ್ಣೀರು ಎರಚುತ್ತದೋ ಎಂಬ ಭಯವಂತೂ ಟ್ರಂಪ್‌ಗೆ ಇದೆ.

ಈಗಾಗಲೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದ್ದು, ಮೃತಪಟ್ಟವರ ಸಂಖ್ಯೆ 68 ಸಾವಿರಕ್ಕೂ ಅಧಿಕವಿದೆ. ಈ ಅಪಾರ ಪ್ರಮಾಣದ ಹಾನಿಯನ್ನು ಟ್ರಂಪ್‌ ಆಡಳಿತದ ವೈಫ‌ಲ್ಯ ಎಂದೇ ಜನರು ನೋಡುತ್ತಿದ್ದಾರೆ, ಚೀನಾ ಕೂಡ ಪರೋಕ್ಷವಾಗಿ ರೋಗ ತಡೆಯುವಲ್ಲಿ ಅಮೆರಿಕದ ಅಸಾಮರ್ಥ್ಯವನ್ನು ಅಣಕಿಸುತ್ತಿದೆ.

ಹಾಗೆಂದು, ಟ್ರಂಪ್‌ ಆರೋಪಗಳು ಸುಳ್ಳಿರಬಹುದು ಎಂದೂ ಖಡಾಖಂಡಿತವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ. ಈಗಿನ ಸಮಯದಲ್ಲಿ ಮದ್ದು-ಬಾಂಬುಗಳ ಸಂಶೋಧನೆಗೆ ತೊಡಗಿಸುವಷ್ಟೇ ಸಂಪನ್ಮೂಲವನ್ನು ಹಲವು ದೇಶಗಳು ಗುಪ್ತವಾಗಿ ಜೈವಿಕ ಅಸ್ತ್ರಗಳ ಸಂಶೋಧನೆಗೂ ತೊಡಗಿಸಿವೆ.

ಆದರೆ, ಯಾವುದೇ ದೇಶವೂ ತಾನೂ ಜೈವಿಕ ಅಸ್ತ್ರದ ಉತ್ಪಾದನೆಯಲ್ಲಿ ತೊಡಗಿದ್ದೇನೆ ಎಂದು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ಕೋವಿಡ್ 19 ವೈರಸ್ ನಿಜಕ್ಕೂ ಪ್ರಯೋಗಾಲಯದ ಫ‌ಲವೇ ಅಥವಾ ಮಾಂಸ ಮಾರುಕಟ್ಟೆಯಿಂದ ಹರಡಿತೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಖಂಡಿತ ಸಿಗುವುದಿಲ್ಲ.

ಇನ್ನೊಂದೆಡೆ ಪುರಾವೆಯಿಲ್ಲದೇ ಚೀನಾದ ಮೇಲೆ ಆರೋಪ ಮಾಡುವುದೂ ಎಷ್ಟು ಸರಿ ಎನ್ನುವ ಪ್ರಶ್ನೆ ಏಳುತ್ತದೆ. ಈಗ ಟ್ರಂಪ್‌ ಚೀನಾದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸುವ ಧಮಕಿ ಹಾಕಿದ್ದಾರೆ. ಇದರಿಂದ ಖಂಡಿತ ಚೀನಾ ಕೆರಳಲಿದೆ.

ಒಂದಂತೂ ಸತ್ಯ, ಆರಂಭದ ದಿನಗಳಲ್ಲಿ ಚೀನಾ ಕೋವಿಡ್ ಅಪಾಯವನ್ನು ಮುಚ್ಚಿಡಲು ನಡೆಸಿದ ಪ್ರಯತ್ನ, ಹಾಗೂ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿಯದೆಯೇ ಚೀನಾದ ಮಾತನ್ನೇ ಪುನರುಚ್ಚರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ತಪ್ಪು ಹೆಜ್ಜೆಯಿಂದಾಗಿ ಇಂದು ಇಡೀ ಜಗತ್ತೇ ತತ್ತರಿಸಿದೆ.

ಇದೇನೇ ಇದ್ದರೂ, ವಿಶ್ವದ ದೊಡ್ಡಣ್ಣನಾಗಲು ಆ ದೇಶ ಈಗ ಎಷ್ಟೇ ಪ್ರಯತ್ನಿಸಿದರೂ, ಅದರೊಂದಿಗಿನ ಅನೇಕ ರಾಷ್ಟ್ರಗಳ ಸಂಬಂಧವಂತೂ ಹದಗೆಡಲಿದೆ. ತನಗಂಟಿದ ಈ ಕಪ್ಪುಚುಕ್ಕೆಯನ್ನು ತೊಲಗಿಸಲು ಚೀನಾಕ್ಕೆ ವರ್ಷಗಳೇ ಹಿಡಿಯಲಿವೆ.

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.