ಜೀವನ್ಮುಖಿಯ ನಿರ್ಗಮನ


Team Udayavani, Sep 26, 2020, 12:05 PM IST

ಜೀವನ್ಮುಖೀಯ ನಿರ್ಗಮನ

ಕನ್ನಡ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಸೀನರಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಅಗಲಿದ ಸುದ್ದಿಯು ಇಡೀ ಕರುನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದೆ. ರಾಜ್ಯವೆಂದಷ್ಟೇ ಅಲ್ಲ, ಭಾರತದ ಬಹುತೇಕ ಚಿತ್ರರಂಗಗಳಲ್ಲಿ ತಮ್ಮ ಹಾಡುಗಳ ಮೂಲಕ ಸಂಗೀತಪ್ರಿಯರಿಗೆ ಆಪ್ತರಾಗಿದ್ದವರು ಅವರು.

ಎಸ್‌ಪಿಬಿ ಕೇವಲ ಗಾಯಕರಾಗಿಯಷ್ಟೇ ಅಲ್ಲ, ಸಹೃದಯಿ ವ್ಯಕ್ತಿಯಾಗಿಯೂ ಗುರುತಿಸಿ ಕೊಂಡವರು. “ಅವರ ಹಾಡೂ ಮಧುರ, ಮಾತೂ ಮಧುರ, ಮನಸ್ಸೂ ಮಧುರ’ ಎನ್ನುವುದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಎಸ್‌ಪಿಬಿ ಅವರ ಬಗ್ಗೆ ಹೇಳಿದ್ದ ಮಾತು. ಈ ಮಾತನ್ನು ನಿಸ್ಸಂಶಯವಾಗಿ ಎಲ್ಲರೂ ಒಪ್ಪುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರಿಗೆ ಧ್ವನಿಯಾಗಿ, ಕನ್ನಡದ ಗಾನಲೋಕದ ಪ್ರತಿನಿಧಿಯಾಗಿದ್ದ ಅವರು, ಕಿರಿಯ ಸಂಗೀತಗಾರರನ್ನು, ಜನರನ್ನು ಅತ್ಯಾಪ್ತವಾಗಿ ಮಾತನಾಡಿಸುವ, ಮಾರ್ಗದರ್ಶನ ನೀಡುವ, ಹುರಿದುಂಬಿಸುವ ಮೂಲಕ ಮನೆಯ ಹಿರಿಯರಂತೆಯೇ ಆಗಿ ಹೋಗಿದ್ದರು. ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಅವರ ಮಗು ಸಮಾನ ಮನಸ್ಸು, ಮುಗ್ಧತೆ, ಮಂದಹಾಸವನ್ನು ಕನ್ನಡದ ಪ್ರೇಕ್ಷಕರು ವರ್ಷಗಳವರೆಗೆ ಕಣ್ತುಂಬಿಕೊಂಡಿದ್ದರು.

ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಕೇಳುವುದಕ್ಕೇ ಆಗುವುದಿಲ್ಲ, ಅಂಥದ್ದರಲ್ಲಿ ಎಸ್‌ಪಿಬಿ ಅಷ್ಟು ಹಾಡುಗಳನ್ನು ಹಾಡುತ್ತಾರೆಂದರೆ, ಸಂಗೀತವೇ ಅವರ ಶ್ವಾಸೋಚ್ಛಾಸವಾಗಿ ಬದಲಾಗಿತ್ತು ಎನ್ನುವುದಕ್ಕೆ ಸಾಕ್ಷಿ. ಸಂಗೀತದಲ್ಲಿ ಸಾಧನೆಗೆ ಶ್ರದ್ಧೆ, ಭಕ್ತಿ, ಪ್ರೀತಿ, ಸಂಯಮ ಎಂಬ ನಾಲ್ಕು ಸೂತ್ರಗಳು ಬಹಳ ಮುಖ್ಯ ಎನ್ನುತ್ತಿದ್ದ ಅವರು, ಇಳಿ ವಯಸ್ಸಿನಲ್ಲೂ ನಿರಂತರ ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್‌…ಹೀಗೆ ಯಾವ ಭಾಷೆಯಾದರೂ ಅದನ್ನು ಸುಲಲಿತವಾಗಿ ಮಾತನಾಡುತ್ತಿದ್ದದ್ದು, ಆ ಭಾಷೆಯಲ್ಲಿನ ಕವಿಗಳು, ಸಂಗೀತ ಗಾರರು, ಸಂಗೀತ ಪರಂಪರೆಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದದ್ದು ಅವರ ಗರಿಮೆ. ಇದು ಅವರ ದೊಡ್ಡ ಗುಣವೂ ಹೌದು.

ಅತ್ಯಂತ ಜೀವನ್ಮುಖೀಯಾಗಿದ್ದ ಎಸ್‌ಪಿಬಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಅಭಿಮಾನಿಗಳ ಜತೆ ನಿರಂತರ ಸಂಪರ್ಕ ದಲ್ಲಿರುತ್ತಿದ್ದರು, ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ತಮಗೆ ಕೋವಿಡ್‌ ಸೋಂಕು ತಗಲಿದೆ ಎನ್ನುವುದನ್ನು ತಿಳಿದಾಗ ಈ ಕುರಿತು ವೀಡಿಯೋ ಮಾಡಿ, ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ, ಬೇಗನೇ ಚೇತರಿಸಿಕೊಂಡು ಬರುತ್ತೇನೆ ಎಂದು ಭರವಸೆಯ ಧ್ವನಿಯಲ್ಲಿಯೇ ಹೇಳಿದ್ದರು. ಆ ಭರವಸೆ ಹುಸಿಯಾಗಿಬಿಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಹೋಗಿ ಬನ್ನಿ ಬಾಲಸುಬ್ರಹ್ಮಣ್ಯಂ ಅವರೇ… ನಿಮ್ಮ ಸಂಗೀತ, ನಿಮ್ಮ ನೆನಪು ಚಿರಸ್ಥಾಯಿಯಾಗಿ ಉಳಿಯಲಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.