ಇವಿಎಂ ಚರ್ಚೆ ಮುನ್ನೆಲೆಗೆ ಸಮಸ್ಯೆ ಬಗೆಹರಿಯಲಿ


Team Udayavani, May 30, 2018, 6:00 AM IST

v-13.jpg

“ತಾಂತ್ರಿಕ ಸಮಸ್ಯೆಗಳು’ ಎಂದಾಕ್ಷಣ ಮತ ತಿರುಚುವುದು ಅಥವಾ ಒಂದೇ ಪಕ್ಷಕ್ಕೆ ಮತ ಹೋಗುವುದು ಎಂದಷ್ಟೇ ಅಲ್ಲವಲ್ಲ? ಈಗ ಎದುರಾಗಿರುವ ಸಮಸ್ಯೆಯೂ ಗಂಭೀರವಾದದ್ದೇ.

ಯಾವುದೇ ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನವೆಂಬ ಜನಾಧಿಕಾರವೇ ಪ್ರಜಾಪ್ರಭುತ್ವದ ಆಧಾರಸ್ತಂಭ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ಬಹುದೊಡ್ಡ ಸವಾಲು/ಜವಾಬ್ದಾರಿಯೆಂದರೆ ಚುನಾವಣೆಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತಿ ಪ್ರಕ್ರಿಯೆಯಾಗಿಸುವುದು. ಇದನ್ನು ಒಪ್ಪಿಕೊಂಡಾಗ ಸಹಜವಾಗಿಯೇ ಚುನಾವಣಾ ಪ್ರಕ್ರಿಯೆ ಅಥವಾ ಮತದಾನದ ವಿಷಯದಲ್ಲಿ ಸಂದೇಹಗಳು ಉದ್ಭವವಾದಾಗ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸೋಮವಾರ ವಿವಿಧ ರಾಜ್ಯಗಳಲ್ಲಿ ನಾಲ್ಕು ಲೋಕಸಭಾ ಸ್ಥಾನಕ್ಕೆ ಮತ್ತು ಹತ್ತು ವಿಧಾನಸಭಾ ಸೀಟುಗಳಿಗಾಗಿ ಉಪಚುನಾವಣೆಗಳು ನಡೆದವು. ಮತದಾನದ ಸಮಯದಲ್ಲಿ ಕೆಲವೆಡೆ ಇವಿಎಂ ಮಷಿನ್‌ಗಳು ಕೈಕೊಟ್ಟವೆಂಬ ವಿಚಾರವಾಗಿ ಈಗ ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಆರಂಭದಲ್ಲಿ ಚುನಾವಣಾ ಆಯೋಗ, “ಇವಿಎಂ ಹಾಳಾಗಿವೆಯೆಂದು ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತಿದೆ’ ಎಂಬ ಧಾಟಿಯಲ್ಲಿ ವಾದಿಸಿತಾದರೂ, ನಂತರ “ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿನ ಬಿಸಿ ವಾತಾವರಣದಿಂದಾಗಿ ಕೆಲವೆಡೆ ಇವಿಎಂ’ಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೂ ರಾಜಕೀಯ ಪಕ್ಷಗಳು- ಅದರಲ್ಲೂ ಕೆಲವು ವರ್ಷಗಳಿಂದ ಇವಿಎಂ ಅನ್ನು ವಿರೋಧಿಸುತ್ತಾ ಬರುತ್ತಿರುವ, ಆದರೆ ಅದರಲ್ಲಿ ದೋಷಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಪಕ್ಷಗಳು- ಪ್ರಸಕ್ತ ಘಟನೆಯ ಹಿಂದೆಯೂ ಕುತಂತ್ರವನ್ನು ಹುಡುಕುತ್ತಿವೆ. ವಿಪಕ್ಷಗಳ ಆರೋಪವೆಂದರೆ ಮುಸ್ಲಿಂ ಮತ್ತು ದಲಿತ ಬಾಹುಳ್ಯದ ಪ್ರದೇಶಗಳಲ್ಲೇ ಇವಿಎಂಗಳು ಹೆಚ್ಚು ಕೈಕೊಡುತ್ತಿವೆ ಎನ್ನುವುದು. ಏನೇ ಇದ್ದರೂ, ಇದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲೇಬೇಕಿದೆ. 

ಚುನಾವಣಾ ಆಯೋಗ ಇವಿಎಂಗಳು ತಾಂತ್ರಿಕ ರೂಪದಲ್ಲಿ ಫ‌ುಲ್‌ಪ್ರೂವ್‌ ಇವೆ, ಇವುಗಳನ್ನು ತಿರುಚಲು ಸಾಧ್ಯವೇ ಇಲ್ಲ ಎಂದು ಪದೇ ಪದೆ ಹೇಳುತ್ತಿದೆ. ಅದರ ಮಾತು ನಿಜವೆಂದು ಸಾಬೀತೂ ಆಗಿದೆ. ಆದರೂ ಅನೇಕ ರಾಜಕೀಯ ಪಕ್ಷಗಳ ಅನುಮಾನಗಳು ಅಥವಾ ಆರೋಪಗಳನ್ನು ಗಮನಿಸಿ ದೆಹಲಿ ಹೈಕೋರ್ಟ್‌ ಮತ್ತು ಸರ್ವೋಚ್ಚ ನ್ಯಾಯಾಲಯ ಇವಿಎಂಗಳಿಗೆ ವಿವಿಪ್ಯಾಟ್‌ ಸಂಪರ್ಕ ಕಲ್ಪಿಸುವುದನ್ನು ಕಡ್ಡಾಯ ಮಾಡಿವೆ. ಆದರೆ “ತಾಂತ್ರಿಕ ಸಮಸ್ಯೆಗಳು’ ಎಂದಾಕ್ಷಣ ಮತ ತಿರುಚುವುದು ಅಥವಾ ಒಂದೇ ಪಕ್ಷಕ್ಕೆ ಮತ ಹೋಗುವುದು ಎಂದಷ್ಟೇ ಅಲ್ಲವಲ್ಲ? ಈಗ ಎದುರಾಗಿರುವ ಸಮಸ್ಯೆಯೂ ಗಂಭೀರವಾದದ್ದೇ. ಬಿಸಿ ವಾತಾವರಣದಿಂದ ಮತಯಂತ್ರಗಳು ಕೈಕೊಟ್ಟರೆ ಚುನಾವಣಾ ಪ್ರಕ್ರಿಯೆಗಂತೂ ತುಸು ತಡೆ ಉಂಟಾಗುತ್ತದಲ್ಲವೇ? ಈಗಿನ ಆರೋಪಗಳನ್ನು ಗಮನದಲ್ಲಿಟ್ಟುಕೊಂಡ ಆಯೋಗ “ಪ್ರತಿಯೊಬ್ಬ ವ್ಯಕ್ತಿಯ ಮತ ನಮೂದಾಗುವವರೆಗೂ ಮತದಾನ ಚಾಲ್ತಿಯಲ್ಲಿರುತ್ತದೆ, ರಾತ್ರಿಯಾದರೂ ಪರವಾಗಿಲ್ಲ’ ಎಂದು ಭರವಸೆ ನೀಡಿತು. 

ಇದರ ಜೊತೆಗೆ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂಗಳಲ್ಲಿನ ದೋಷವನ್ನು ಪತ್ತೆಹಚ್ಚುವ ಮತ್ತು ತಾತ್ಕಾಲಿಕ ಸಮಸ್ಯೆಗಳನ್ನು ಪರಿಹರಿಸುವ ಕ್ಷಮತೆಯೂ ಇರಬೇಕು. ಈ ನಿಟ್ಟಿನಲ್ಲೂ ಚುನಾವಣಾ ಆಯೋಗ ಯೋಚಿಸಬೇಕಿದೆ. ಏಕೆಂದರೆ ಮತಯಂತ್ರ ನಿರ್ವಹಣೆಯಲ್ಲಿ ಗೊಂದಲ ಎದುರಾಗಿದ್ದರಿಂದಾಗಿ ವಿವಿಧೆಡೆ ಮತದಾನ ಪ್ರಕ್ರಿಯೆಗೆ ಸಮಸ್ಯೆಯಾಗಿರುವುದನ್ನು ನಾವು ನೋಡಿದ್ದೇವೆ. ನಾಲ್ಕು ಲೋಕಸಭಾ ಸ್ಥಾನಗಳು ಮತ್ತು ಹತ್ತು ವಿಧಾನಸಭಾ ಸ್ಥಾನಗಳಿಗಾಗಿ ನಡೆದ ಉಪಚುನಾವಣೆಯಲ್ಲೇ ಇಷ್ಟು ತೊಂದರೆಯಾಗುತ್ತದೆ ಎಂದರೆ, ಇಡೀ ದೇಶದಲ್ಲಿ ಏಕ ಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಈಗಲೇ ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. 

ಇನ್ನು ರಾಜಕೀಯ ಪಕ್ಷಗಳೂ ಇವಿಎಂಗಳಲ್ಲಿನ ಚಿಕ್ಕ ಪುಟ್ಟ ತಾಂತ್ರಿಕ ತೊಂದರೆಯನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂಥ ಅತಿರೇಕದ ವರ್ತನೆಗಳನ್ನು ಕೈಬಿಟ್ಟು ತಮ್ಮ ಸೋಲುಗಳಿಗೆ, ಹಿನ್ನಡೆಗೆ ನೈಜ ಕಾರಣಗಳನ್ನು ಹುಡುಕುವ ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಲಿ. 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.