ಹಿಂಸೆಗೆ ತಿರುಗಿದ ರೈತರ ಪ್ರತಿಭಟನೆ, ಮುಂದೇನು ದಾರಿ?


Team Udayavani, Jan 27, 2021, 7:10 AM IST

ಹಿಂಸೆಗೆ ತಿರುಗಿದ ರೈತರ ಪ್ರತಿಭಟನೆ, ಮುಂದೇನು ದಾರಿ?

ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಾ ಬಂದಿದ್ದ ರೈತರ ಪ್ರತಿಭಟನೆಗಳು ಈಗ ಭಿನ್ನ ಆಯಾಮ ಪಡೆದುಬಿಟ್ಟಿವೆ. ಗಣರಾಜ್ಯೋತ್ಸವ ದಿನದಂದೇ ದಿಲ್ಲಿಯಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಹೋರಾಟದ ಉದ್ದೇಶವೇ ಹಾಳಾಗುವ ಹಂತಕ್ಕೆ ಬಂದು ನಿಂತಿದೆ. ಪ್ರತಿಭಟನಕಾರರು ಬಸ್‌ಗಳ ಮೇಲೆ ದಾಳಿ ಮಾಡಿದ್ದು, ಕೆಲವರು ಖಡ್ಗ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದದ್ದು, ಬ್ಯಾರಿಕೇಡ್‌ಗಳ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಲು ಮುಂದಾದದ್ದು, ಪರಿಣಾಮವಾಗಿ ಟ್ರ್ಯಾಕ್ಟರ್‌ ಮಗುಚಿ ಒಬ್ಬ ವ್ಯಕ್ತಿ ಸತ್ತಿದ್ದು ಒಂದೆಡೆಯಾದರೆ, ಕೆಂಪುಕೋಟೆಯ ಮುಂದೆ ಸಿಕ್ಖ್ ಧ್ವಜವನ್ನು ಸ್ಥಾಪಿಸಿದ್ದು ಅತೀದೊಡ್ಡ ತಪ್ಪು. ಧ್ವಜ ಏರಿಸಿದ ಪುಂಡ ಯಾರೋ ಹಿಡಿದಿದ್ದ ರಾಷ್ಟ್ರ ಧ್ವಜವನ್ನು ಕಿತ್ತು ದೂರದಲ್ಲಿ ಎಸೆದ ಕೃತ್ಯವಂತೂ ಅಕ್ಷಮ್ಯ.

ಖಂಡಿತ ಇಂಥ ಹಿಂಸಾತ್ಮಕ ಘಟನೆಗಳು ಹೋರಾಟದ ಹಾದಿಯನ್ನು, ಅದರೆಡೆಗಿನ ಅನುಕಂಪವನ್ನು ಧ್ವಂಸಗೊಳಿಸುತ್ತವೆ. ಗಣರಾಜ್ಯೋತ್ಸವದಂದೂ ಸರಕಾರ ಮತ್ತು ಪೊಲೀಸರು ರೈತರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರು. ಎನ್‌ಒಸಿ ಪಾಸ್‌ ಮಾಡಿದ್ದರು. ಆದರೆ ನಿರ್ದಿಷ್ಟ ಮಾರ್ಗದಲ್ಲೇ ಪ್ರತಿಭಟನೆಗಳು ಆಗಬೇಕೆಂದಿದ್ದರೂ, ಪ್ರತಿಭಟನಕಾರರು ಇದನ್ನು ಉಲ್ಲಂ ಸಿದ್ದಾರೆ. “ಸಮಾಜ ವಿರೋಧಿ ಶಕ್ತಿಗಳು ಈ ಪ್ರತಿಭಟನೆಯಲ್ಲಿ ಒಳನುಸುಳಿದ್ದಾರೆ. ಶಾಂತಿಯೇ ನಮ್ಮ ದೊಡ್ಡ ಶಕ್ತಿಯಾಗಿದೆ. ಹಿಂಸೆಯು ನಮ್ಮ ಆಂದೋಲನಕ್ಕೆ ಘಾಸಿ ಮಾಡುತ್ತಿದೆ’ ಎಂದು ಸಂಯುಕ್ತ ಕಿಸಾನ್‌ ಮುಕ್ತಿ ಮೋರ್ಚಾ ಹೇಳುತ್ತಿದೆ. ಆದರೆ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕಿರುವುದು ಅದರ ಜವಾಬ್ದಾರಿ. ಯಾರೋ ತೂರಿಕೊಂಡಿದ್ದಾರೆ ಎಂದು ಕೈ ತೊಳೆದುಕೊಳ್ಳಬಾರದು. ಹೋರಾಟಗಾರರಿಗೆ, ಅದು ಪ್ರಬಲ ಸಂದೇಶ ಕಳುಹಿಸಲೇಬೇಕಿದೆ.

ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಇದುವರೆಗೂ 11 ಬಾರಿ ಸಭೆ ನಡೆದಿದ್ದರೂ ಯಾವುದೂ ಫ‌ಲಪ್ರದವಾಗಿಲ್ಲ. ಕಾಯ್ದೆಗಳನ್ನು ಒಂದೂವರೆ ವರ್ಷದವರೆಗೆ ಮುಂದೂಡುವ ಪ್ರಸ್ತಾವವನ್ನೂ ಸಂಘಟನೆಗಳು ಒಪ್ಪಿಕೊಂಡಿಲ್ಲ. 3 ಕಾಯ್ದೆಗಳು ರದ್ದಾಗಲೇಬೇಕು, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಾನೂನಿನ ರೂಪದಲ್ಲಿ ಖಾತ್ರಿ ಪಡಿಸಬೇಕು ಎನ್ನುವುದು ಅದರ ವಾದ. ಕೇಂದ್ರ ಈ ಕಾಯ್ದೆಗಳು ರೈತಪರವಾಗಿವೆ ಎಂದೇ ಹೇಳುತ್ತಿದೆ. ಆದರೆ ಯಾವುದೇ ಕಾಯ್ದೆಯಿರಲಿ ಅದರಲ್ಲಿ ಲೋಪಗಳಿರುವುದು ಸಹಜವೇ, ಹೀಗಾಗಿ ಆ ಲೋಪಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಮಾತುಕತೆಗಳು ನಡೆಯಲೇಬೇಕು. ಕಾಯ್ದೆಗಳು ಬದಲಾವಣೆಯೊಂದಿಗೆ ಅನುಷ್ಠಾನಕ್ಕೆ ಬರುತ್ತವೋ, ರದ್ದಾಗುತ್ತವೋ ಎನ್ನುವುದೂ ಸಹ ಮಾತುಕತೆಯಿಂದಲೇ ಹೊರಬರಬೇಕಾದ ಫ‌ಲಿತಾಂಶ. ಆದರೆ ಆರೋಪ-ಪ್ರತ್ಯಾರೋಪ, ಹಿಂಸಾಚಾರಗಳಿಂದ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುತ್ತಲೇ ಹೋಗುತ್ತದೆ. ರೈತ ಸಂಘಟನೆಗಳು ಪರಿಸ್ಥಿತಿ ಕೈಜಾರದಂತೆ ಎಚ್ಚರಿಕೆ ವಹಿಸಲೇಬೇಕಿದೆ. ಅನ್ನದಾತರಿಗೆ ಒಳ್ಳೆಯದಾಗಬೇಕೆಂಬುದು ಎಲ್ಲರ ಬಯಕೆ. ಆದರೆ ಯಾವಾಗ ಇಂಥ ಹೋರಾಟಗಳಲ್ಲಿ ಸಮಾಜ ವಿರೋಧಿ ಕೃತ್ಯಗಳು, ರಾಜಕೀಯದ ಮಿಶ್ರಣವಾಗುತ್ತದೋ ಪ್ರಯತ್ನಗಳೆಲ್ಲ ದಾರಿ ತಪ್ಪುತ್ತವೆ. ಈ ಕಾರಣಕ್ಕಾಗಿಯೇ ಆಂದೋಲನದ ಕಿಡಿಯಲ್ಲಿ ಗಳ ಹಿರಿಯಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳನ್ನು, ಸಿದ್ಧಾಂತವಾದಿಗಳನ್ನು ಗುರುತಿಸಿ ದೂರವಿಡುವುದೂ ಅತ್ಯಗತ್ಯ ಎನ್ನುವುದನ್ನು ಅರಿಯಬೇಕಿದೆ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.