ಒಂದು ರಾಷ್ಟ್ರ, ಒಂದೇ ವೇತನ ದಿನ ಸ್ವಾಗತಾರ್ಹ ಚಿಂತನೆ


Team Udayavani, Nov 19, 2019, 4:25 AM IST

cc-34

ಕೇಂದ್ರ ಸರ್ಕಾರವು ಔಪಚಾರಿಕ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ “ಒನ್‌ ನೇಷನ್‌, ಒನ್‌ ಪೇ ಡೇ'(ಒಂದು ರಾಷ್ಟ್ರ, ಒಂದೇ ವೇತನ ದಿನ) ಜಾರಿಗೆ ತರಲು ಯೋಚಿಸುತ್ತಿದೆ. ಈ ವ್ಯವಸ್ಥೆಯು ಲಾಗೂ ಆದರೆ ಎಲ್ಲಾ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ನೌಕರರು ಮತ್ತು ಕರ್ಮಚಾರಿಗಳಿಗೆ ಒಂದೇ ದಿನವೇ ವೇತನ ಸಿಗುತ್ತದೆ. ಕೇಂದ್ರ ಸಚಿವ ಸಂತೇಷ್‌ ಗಂಗವಾರ್‌ ಅವರು ಕಳೆದ ಶುಕ್ರವಾರ ಸೆಂಟ್ರಲ್‌ ಅಸೋಸಿಯೇಷನ್‌ ಆಫ್ ಪ್ರೈವೇಟ್‌ ಸೆಕ್ಯೂರಿಟಿ ಇಂಡಸ್ಟ್ರೀಗಳು ಆಯೋಜಿಸಿದ್ದ ಸೆಕ್ಯುರಿಟಿ ಲೀಡರ್‌ಶಿಪ್‌ ಶೃಂಗದಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಸಂಬಂಧಿಸಿದ ಕಾನೂನು ಬೇಗನೇ ಸಿದ್ಧವಾಗಬೇಕು ಎಂದು ಖುದ್ದು ಪ್ರಧಾನಿ ಮೋದಿಯವರೂ ಬಯಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ದೇಶಾದ್ಯಂತ ಔಪಚಾರಿಕ ವಲಯದ ನೌಕರರಿಗೆ ಏಕದಿನಕ್ಕೇ ವೇತನ ದೊರಕುವುದರಿಂದ ಅವರಿಗೆಲ್ಲ ನೆಮ್ಮದಿಯಂತೂ ಸಿಗಲಿದೆ.

ಈಗಲೂ ಅನೇಕ ಸ್ತರಗಳಲ್ಲಿ ವೇತನದ ವಿಷಯದಲ್ಲಿ ಅನಿಶ್ಚಿತತೆ ಇದೆ. ಇದರಿಂದಾಗಿ ಕೆಲಸಗಾರರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ದಿನನಿತ್ಯದ ಖರ್ಚುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು, ಬ್ಯಾಂಕ್‌ನಲ್ಲಿ ಆರ್‌ಡಿಯಂಥ ಸ್ಕೀಮುಗಳನ್ನು ತೆರೆಯಲು ಹಿಂದೇಟು ಹಾಕುವಂತಾಗಿದೆ. ಈ ಆರ್ಥಿಕ ಅಸುರಕ್ಷೆಯು ಅವರನ್ನು ಮಾನಸಿಕ ತೊಳಲಾಟಕ್ಕೂ ತಳ್ಳುತ್ತಿದೆ. ಒಂದೊಂದು ಕಡೆ ತಮ್ಮಂಥದ್ದೇ ವೃತ್ತಿಯಲ್ಲಿರುವವರಿಗೆ ತಿಂಗಳ ಆರಂಭದಲ್ಲೋ ಅಥವಾ ಇನ್ನಾéವುದೋ ಸಮಯಕ್ಕೋ ಸರಿಯಾಗಿ ಸಂಬಳ ಸಿಗುತ್ತದೆ ಆದರೆ ನಮಗೆ ನಿಶ್ಚಿತ ಸಮಯದಲ್ಲಿ ಸಂಬಳ ಬರುವುದಿಲ್ಲ ಎಂಬ ಅಸಮಧಾನ ಮೊದಲಿನಿಂದಲೂ ಇದೆ. ಇದರ ಪರಿಣಾಮ ಅವರ ಕೆಲಸದ ಮೇಲೂ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವೇತನ ಯಾವ ದಿನ ಬರುತ್ತದೆ ಎಂದು ನಿರ್ಧಾರವಾಗಿಬಿಟ್ಟರೆ ನೌಕರರಲ್ಲೂ ಒಂದು ರೀತಿಯ ಸುರಕ್ಷತಾ ಭಾವ ಬರುತ್ತದೆ. ಅನಿಶ್ಚಿತತೆಯೂ ದೂರವಾಗುತ್ತದೆ. ಆಗ ಅವರು ತಮ್ಮ ಖರ್ಚುಗಳ ವಿಚಾರದಲ್ಲಿ ತಾತ್ಕಾಲಿಕವಷ್ಟೇ ಅಲ್ಲದೆ, ದೂರಗಾಮಿ ಯೋಜನೆಗಳನ್ನೂ ರೂಪಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಉಳಿತಾಯ ಅಥವಾ ಹೂಡಿಕೆ ಬಗ್ಗೆಯೂ ಅವರು ಯೋಚಿಸಲಾರಂಭಿಸುತ್ತಾರೆ.

ಈ ವಿಚಾರದಲ್ಲಿ ಕಾನೂನು ರಚನೆಯಾದರೆ, ಕಂಪನಿಗಳೂ ವೇತನದ ವಿಚಾರದಲ್ಲಿ ವಿಳಂಬ ಮಾಡುವುದಕ್ಕೆ ಆಗುವುದಿಲ್ಲ. ಕಂಪನಿಯ ಆಡಳಿತ ಮಂಡಳಿಗಳ ಮೇಲೆ ಈ ನಿಟ್ಟಿನಲ್ಲಿ ಒಂದು ರೀತಿಯ ಒತ್ತಡವೂ ನಿರ್ಮಾಣವಾಗುತ್ತದೆ. ಈ ನಿಯಮವನ್ನು ಆದಷ್ಟು ಬೇಗನೇ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ, ಯಾವುದೇ ದೇಶದಲ್ಲೇ ಆಗಲಿ, ಅಲ್ಲಿ ನೌಕರರ ವೇತನಗಳ ನಡುವೆ ಭಾರೀ ಎನಿಸುವಂಥ ಅಸಮಾನತೆ ಇರಬಾರದು. ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಗೌರವದಿಂದ ಬದುಕುವಷ್ಟು ಸಂಬಳವಂತೂ ಅತ್ಯಗತ್ಯವಾದದ್ದು. ಅಲ್ಲದೇ, ಮೂಲಸೌಕರ್ಯಗಳೂ ಎಲ್ಲರಿಗೂ ಸಿಗುವಂತಾಗಬೇಕು. ಈ ವಿಚಾರದಲ್ಲೂ ಮೋದಿ ಸರ್ಕಾರ ಚಿಂತನೆ ನಡೆಸಿದೆ. ಸಂತೋಷ್‌ ಗಂಗವಾರ್‌ ಅವರ ಪ್ರಕಾರ ಸರ್ಕಾರವು ಏಕರೂಪದ ಕನಿಷ್ಠ ವೇತನ ಕಾರ್ಯಕ್ರಮವನ್ನೂ ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆಯಂತೆ. ಒಟ್ಟಲ್ಲಿ ಈ ಎಲ್ಲಾ ಆಶಾದಾಯಕ ಕ್ರಮಗಳು ಕಾನೂನಾಗಿ ಅನುಷ್ಠಾನಕ್ಕೆ ಬಂದದ್ದೇ ಆದರೆ, ಅದು ನಿಜಕ್ಕೂ ಮೋದಿ ಸರ್ಕಾರದ ಮಹತ್ತರ ಹೆಜ್ಜೆಯೆನಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ವಿಳಂಬ ಸಲ್ಲ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.