ಹಾಂಗ್‌ಕಾಂಗ್‌ನಲ್ಲಿ ಚೀನಿ ದರ್ಪ ಧ್ವನಿಯೆತ್ತಲಿ ಜಗತ್ತು


Team Udayavani, Jul 4, 2020, 5:55 AM IST

ಹಾಂಗ್‌ಕಾಂಗ್‌ನಲ್ಲಿ ಚೀನಿ ದರ್ಪ ಧ್ವನಿಯೆತ್ತಲಿ ಜಗತ್ತು

ಇಡೀ ಪ್ರಪಂಚದ ವಿರೋಧದ ನಡುವೆಯೂ ಚೀನ ಹಾಂಗ್‌ಕಾಂಗ್‌ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕುತಂತ್ರವನ್ನು ಕೈಬಿಡುತ್ತಲೇ ಇಲ್ಲ.

ವರ್ಷದಿಂದ ಹಾಂಗ್‌ಕಾಂಗ್‌ನ ಜನರು ಚೀನದ ದಬ್ಟಾಳಿಕೆಯ ವಿರುದ್ಧ ಹೋರಾಡುತ್ತಲೇ ಇದ್ದಾರೆ.

ಕೋವಿಡ್ 19 ಸಮಯದಲ್ಲೂ ಜೀವ ಭಯ ತೊರೆದು ರಸ್ತೆಗಿಳಿದು ಜಿನ್‌ಪಿಂಗ್‌ ಸರ್ವಾಧಿಕಾರತ್ವದ ವಿರುದ್ಧ ಧ್ವನಿಯೆತ್ತುತ್ತಲೇ ಇದ್ದಾರೆ. ಆದರೆ, ಈಗ ಚೀನ ಅನುಷ್ಠಾನಕ್ಕೆ ತಂದಿರುವ ವಿವಾದಾಸ್ಪದ ರಾಷ್ಟ್ರೀಯ ಭದ್ರತೆ ಕಾನೂನು, ಎಲ್ಲಿ ಹಾಂಗ್‌ಕಾಂಗ್‌ ಜನರ ಧ್ವನಿಯನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೋ ಎನ್ನುವ ಆತಂಕ ಎದುರಾಗಿದೆ.   ಚೀನದ ಸಂಸತ್ತಿನಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಈ ಕಾನೂನಿಗೆ ಅನುಮೋದನೆ ದೊರೆತಿತ್ತು.

ಪ್ರಪಂಚವು ಕೋವಿಡ್‌-19 ಬಿಕ್ಕಟ್ಟಿಗೆ ಸಿಲುಕಿರುವ ವೇಳೆಯಲ್ಲೇ ಹಾಂಗ್‌ಕಾಂಗ್‌ನ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಮಾಡಿಬಿಟ್ಟಿದೆ ಚೀನ. ಈಗ ಚೀನದ ವಿರುದ್ಧ ಒಂದೇ ಪದವನ್ನು ಉಸುರುವುದನ್ನೂ ರಾಷ್ಟ್ರದ್ರೋಹವೆಂದು ಪರಿಗಣಿಸಲಾಗುತ್ತದೆ.

ಈ ಕಾನೂನಿನಿಂದಾಗಿ ಇನ್ಮುಂದೆ ಹಾಂಗ್‌ಕಾಂಗ್‌ನ ಜನರನ್ನು ರಾಷ್ಟ್ರವಿರೋಧದ ಆರೋಪದಲ್ಲಿ ಚೀನದ ಜೈಲುಗಳಲ್ಲಿ ನೂಕುವುದಕ್ಕೆ ಸರ್ವಾಧಿಕಾರಿ ಜಿನ್‌ಪಿಂಗ್‌ ಆಡಳಿತಕ್ಕೆ ಸುಲಭವಾಗಲಿದೆ.

ಅಂದರೆ, ಇನ್ಮುಂದೆ ಚೀನ ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಹಾಂಗ್‌ಕಾಂಗ್‌ ನಿವಾಸಿಗಳಿಗೆ ಹಾಗೂ ರಾಜಕಾರಣಿಗಳಿಗೆ ಅಪರಾಧಿ ಪಟ್ಟ ಕಟ್ಟಿ, ಅವರನ್ನು ಹತ್ತಿಕ್ಕಲಿದೆ. ಆದಾಗ್ಯೂ ಹೊಸ ಕಾನೂನಿನಲ್ಲಿ ಮರಣದಂಡನೆಯ ಪ್ರಾವಧಾನ ಇಲ್ಲವಾದರೂ, ಇದು ಬಹಳ ದಮನಕಾರಿಯಂತೂ ಹೌದು. ಏಕೆಂದರೆ, ಕಳೆದ ವರ್ಷ ಚೀನ ವಿರೋಧಿ ಪ್ರತಿಭಟನೆಗಳಲ್ಲಿ  ಪಾಲ್ಗೊಂಡವರನ್ನೆಲ್ಲ ರಾಷ್ಟ್ರದೋಹಿಗಳೆಂದು ಚೀನ ಪರಿಗಣಿಸಬಹುದು!

ಈ ಕಾನೂನು ಲಾಗೂ ಆಗುತ್ತಿರುವಂತೆಯೇ ಹಾಂಗ್‌ಕಾಂಗ್‌ನಲ್ಲಿ ಯಾವ ಮಟ್ಟದಲ್ಲಿ ಪ್ರತಿಭಟನೆಗಳು ಆರಂಭವಾಗಿದೆ ಎಂದರೆ, ಜನರ ಹೋರಾಟ ಇನ್ನೂ ದೊಡ್ಡ ಮಟ್ಟ ತಲುಪಲಿರುವ ಸೂಚನೆ ಸಿಗುತ್ತಿದೆ.

ಈ ವಿಷಯದಲ್ಲಿ ಹಾಂಗ್‌ಕಾಂಗ್‌ ಜನರ ಕೆಚ್ಚೆದೆಯನ್ನು ಗೌರವಿಸಲೇಬೇಕು. ಚೀನದ ದುಷ್ಟಬುದ್ಧಿಯ ಬಗ್ಗೆ ಅರಿವಿದ್ದರೂ ಸಹ, ಜೀವದ ಹಂಗುತೊರೆದು ಅವರು ಹೋರಾಡುತ್ತಿದ್ದಾರೆ. ಇದೇ ವೇಳೆಯಲ್ಲೇ ಭಾರತವು, ಹಾಂಗ್‌ಕಾಂಗ್‌ ವಿಚಾರವನ್ನು ವಿಶ್ವಸಂಸ್ಥೆಯಲ್ಲೂ ಪ್ರಸ್ತಾಪಿಸಿರುವುದು ಶ್ಲಾಘನೆಗೆ ಪಾತ್ರವಾಗುತ್ತಿದೆ.

ಅತ್ತ ಬ್ರಿಟನ್‌, ಅಗತ್ಯ ಎದುರಾದರೆ ಹಾಂಗ್‌ಕಾಂಗ್‌ ಜನರಿಗೆ ಆಶ್ರಯ ಕೊಡುವುದಾಗಿ ಹೇಳಿದೆ. ಅಮೆರಿಕ ಸಹ ಚೀನದ ದಮನಕಾರಿ ನೀತಿಯನ್ನು ಪ್ರಶ್ನಿಸುತ್ತಲೇ ಇದೆ. ಆದರೆ, ಜಾಗತಿಕ ರಾಷ್ಟ್ರಗಳೆಲ್ಲ ಒಟ್ಟಾಗಿ ಡ್ರ್ಯಾಗನ್‌ ಮೇಲೆ ಅತೀವ ಒತ್ತಡ ತರದೇ ಹೋದರೆ, ಜಿನ್‌ಪಿಂಗ್‌ ಸರಕಾರ ಹಾಂಗ್‌ ಕಾಂಗ್‌ ಅನ್ನು ಸಂಪೂರ್ಣ ಕೈವಶ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.