ಕೊಳವೆ ಬಾವಿ ಮುಚ್ಚದಿದ್ದರೆ ಕಠಿನ ಕ್ರಮವಿರಲಿ, ಅಧಿಕಾರಿಗಳೂ ಹೊಣೆ


Team Udayavani, Apr 25, 2017, 1:00 PM IST

well.jpg

ಕೊಳವೆ ಬಾವಿ ಕೊರೆಯಲು ಪರವಾನಗಿ ಕಡ್ಡಾಯ. ಹೀಗಾಗಿ ಪ್ರತೀ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಕೊರೆಯಲಾದ ಕೊಳವೆ ಬಾವಿಗಳ ಸ್ಥಿತಿಗತಿ ಯನ್ನು ತಿಳಿಯುವುದು ಕಷ್ಟವೇನಲ್ಲ. ಇದಕ್ಕೆ ಪೂರಕವಾಗಿ ಕಠಿನ ನಿಯಮ, ಕಾನೂನುಗಳೂ ಇವೆ. ಆಗಬೇಕಾದದ್ದು ಸಮರ್ಪಕ ಅನುಷ್ಠಾನ. ಅದು ಕಟ್ಟುನಿಟ್ಟಾಗಿ ನಡೆಯಬೇಕು.

ತೀವ್ರ ಬರಗಾಲದ ಈ ದಿನಗಳಲ್ಲಿ ಕೊಳವೆ ಬಾವಿಗಳು ನೀರಿಲ್ಲದೆ ಪರೋಕ್ಷವಾಗಿ ಜನರ ಸಂಕಷ್ಟಕ್ಕೆ ಕಾರಣವಾಗುತ್ತಿವೆ, ಅಂತಹ ಕೊಳವೆ ಬಾವಿಗಳು ಎಳೆಯ ಮಕ್ಕಳನ್ನು ನೇರವಾಗಿ ನುಂಗಿ ನೊಣೆಯುವ ವಿದ್ಯಮಾನ ಈಚೆಗಿನ ದಶಕಗಳದ್ದು. ವಿಫ‌ಲ ಕೊಳವೆ ಬಾವಿಗಳನ್ನು ತೆರೆದೇ ಇರಿಸುವ ಬೇಜವಾಬ್ದಾರಿ ನಡವಳಿಕೆ ಸರ್ವತ್ರ ಕಂಡುಬರುತ್ತಿರುವುದರಿಂದ ಆಟವಾಡಲು, ಹೊಲದಲ್ಲಿ ಸಣ್ಣಪುಟ್ಟ ಕೆಲಸ ಮಾಡಲು ಹೋದ ಎಳೆಯರು ಹಠಾತ್ತನೆ ಭೂಗರ್ಭಕ್ಕೆ ಜಾರಿ ಪ್ರಾಣಕ್ಕೆರವಾಗುತ್ತಿದ್ದಾರೆ. ಕೊಳವೆ ಬಾವಿಗಳನ್ನು ಮುಚ್ಚದೆ ಇರಿಸುವುದರ ವಿರುದ್ಧ ಕಠಿನ ಕಾನೂನು, ಸುಪ್ರೀಂ ಕೋರ್ಟ್‌ ಆದೇಶ ಎಲ್ಲವೂ ಇದ್ದರೂ ಪ್ರತೀ ವರ್ಷ ರಾಜ್ಯದಲ್ಲಿ ಮಕ್ಕಳು ಕೊಳವೆ ಬಾವಿಗಳಿಗೆ ಬಿದ್ದು ಸಾಯುತ್ತಿದ್ದಾರೆ. 

2014ರಲ್ಲಿ ರಾಜ್ಯದ ಇಬ್ಬರು ಪುಟಾಣಿಗಳು ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ದುರ್ಘ‌ಟನೆ ನಡೆದ ಬಳಿಕ ಈ ಬಗ್ಗೆ ಭಾರೀ ಸಂಚಲನ ಉಂಟಾಗಿತ್ತು. ಬಾದಾಮಿ, ಸೂಳಿಕೆರೆಯ ಆರು ವರ್ಷದ ಬಾಲಕ ತಿಮ್ಮಣ್ಣ ಮತ್ತು ವಿಜಯಪುರದ ಐದು ವರ್ಷ ವಯಸ್ಸಿನ ಅಕ್ಷತಾ ಪಾಟೀಲ್‌ ಕೆಲವೇ ತಿಂಗಳುಗಳ ಅಂತರದಲ್ಲಿ ಇಂತಹ ಕೊಳವೆ ಬಾವಿಗಳಿಂದ ಜೀವಕ್ಕೆರವಾಗಿದ್ದರು. ಅವರನ್ನು ಸುರಕ್ಷಿತವಾಗಿ ಮೇಲೆತ್ತಲು ಹಲವು ತಾಸುಗಳ ಕಾರ್ಯಾಚರಣೆ ನಡೆಸಿದ್ದರೂ ಈ ಪುಟ್ಟ ಮಕ್ಕಳ ಶವಗಳನ್ನಷ್ಟೇ ಮೇಲೆತ್ತಲು ಸಾಧ್ಯವಾಗಿತ್ತು. 2014ರ ಒಂದೇ ವರ್ಷದಲ್ಲಿ ದೇಶಾದ್ಯಂತ ಇಂತಹ ದುರ್ಘ‌ಟನೆಗಳಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ, ಇವರಲ್ಲಿ ಪುಟ್ಟ ಮಕ್ಕಳೇ ಅತಿಹೆಚ್ಚು. 

2014ರಲ್ಲಿ ರಾಜ್ಯದಲ್ಲಿ ಇಂತಹ ಎರಡು ದುರದೃಷ್ಟಕರ ಮೃತ್ಯುಗಳು ದಾಖಲಾದ ಬಳಿಕ ರಾಜ್ಯ ಸರಕಾರ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾಗೃತಗೊಂಡು ರಾಜ್ಯಾದ್ಯಂತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿತ್ತು. ಒಟ್ಟು 1.47 ಲಕ್ಷ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿತ್ತು. ಸರಕಾರಿ ಸ್ಥಳದಲ್ಲಿ ತೆರೆದ ಕೊಳವೆ ಬಾವಿಗಳಿದ್ದರೆ ಅವುಗಳನ್ನು ಮುಚ್ಚಿಸುವುದಕ್ಕೆ ಸಂಬಂಧಿತ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ನಿಯಮವನ್ನು ಸರಕಾರ ರೂಪಿಸಿತ್ತು. ಖಾಸಗಿ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಪಂಚಾಯತ್‌ ಪರವಾನಗಿ ಪಡೆಯುವುದು ಮತ್ತು ಆ ಬಳಿಕ ಅದು ತೆರೆದಿದೆಯೋ ಮುಚ್ಚಿದೆಯೋ ಎಂಬುದನ್ನು ಪಂಚಾಯತ್‌ ಮಟ್ಟದಲ್ಲಿ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಕೂಡ ಒಂದು ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಇದಕ್ಕೆ ಹಿಂದೆ 2010ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿತ್ತು. 

ತೆರೆದ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದು ಬಲಿಯಾಗುವುದನ್ನು ತಡೆಯಲು ಅಗತ್ಯ ಕಾನೂನು ಜಾರಿಗೆ ತಂದಿರುವುದು ಸರಿ. ಆದರೂ ಆರೇಳು ತಿಂಗಳ ಹಿಂದೆ ಕೊಳವೆ ಬಾವಿ ಕೊರೆದು, ನೀರು ಸಿಗದ ಅದನ್ನು ಹಾಗೆಯೇ ಬಿಟ್ಟಿರುವ ಝಂಜರವಾಡದಂತಹ ಪ್ರಕರಣಗಳು ಅಕ್ಷಮ್ಯ. 2014ರ ಬಳಿಕ ಕೊರೆಯಲ್ಪಟ್ಟು, ವಿಫ‌ಲಗೊಂಡು ಬಾಯ್ದೆರೆದು ಬಲಿಗಾಗಿ ಕಾದುಕುಳಿತಿರುವ ಕೊಳವೆ ಬಾವಿಗಳು ರಾಜ್ಯದಲ್ಲಿ ಇನ್ನಷ್ಟು ಇರಬಹುದು, ಇವೆ.   ಮುಚ್ಚದ ವಿಫ‌ಲ ಖಾಸಗಿ ಕೊಳವೆ ಬಾವಿಗಳಿಗೆ ಆಯಾ ಜಮೀನು ಮಾಲಕರನ್ನು ಹೊಣೆ ಮಾಡುವ, ಕ್ರಮ ಕೈಗೊಳ್ಳುವ ಚಿಂತನೆ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌. ಕೆ. ಪಾಟೀಲ್‌ ಹೇಳಿದ್ದಾರೆ. ಇದು ಕೂಡ ಆಗಲೇ ಬೇಕಾದುದೇ. ನೀರಿರುವ ಕೊಳವೆ ಬಾವಿಗೆ ಪಂಪ್‌ ಅಳವಡಿಸಿ ತಿಂಗಳೊಪ್ಪತ್ತಿನಲ್ಲಿ ನೀರು ಹೀರಲು ಮುಂದಾಗಲು ಬಲ್ಲವರಿಗೆ ವಿಫ‌ಲ ಕೊಳವೆ ಬಾವಿಯನ್ನು ಕೆಲವು ನೂರು ಅಥವಾ ಸಾವಿರ ರೂ. ವೆಚ್ಚದಲ್ಲಿ ಮುಚ್ಚಿಸಬೇಕು ಎನ್ನುವ ಜವಾಬ್ದಾರಿಯನ್ನು ಶಿಕ್ಷೆಯ ಭಯದಲ್ಲಾದರೂ ಮೂಡಿಸಬೇಕು.   

ಸರಕಾರಿ ಸ್ಥಳದಲ್ಲಿ ಕೊರೆದ ಕೊಳವೆ ಬಾವಿಗಳನ್ನು ಮುಚ್ಚುವುದಕ್ಕೆ ಸಂಬಂಧಿತ ಅಧಿಕಾರಿಗಳು ಹೊಣೆ ಎಂದು ಸಚಿವರು ಹೇಳಿದ್ದಾರೆ. ಖಾಸಗಿ ಕೊಳವೆ ಬಾವಿಗಳ ವಿಚಾರದಲ್ಲಿ ಕೂಡ, ಜಮೀನು ಮಾಲಕರು ಎಷ್ಟು ಜವಾಬ್ದಾರರೋ ಅಷ್ಟೇ ಹೊಣೆಗಾರಿಕೆಯನ್ನು ಸ್ಥಳೀಯ ಅಧಿಕಾರಿಗಳ ಮೇಲೂ ಹೊರಿಸಬೇಕು. ಇದರ ಜತೆಗೆ ಕೊರೆಯುವ ಕೊಳವೆ ಬಾವಿಗಳು ಮತ್ತು ಅವುಗಳ ಸ್ಥಿತಿಗತಿಯ ಬಗ್ಗೆ ವಾಸ್ತವ ನೆಲೆಗಟ್ಟಿನ ವರದಿ ಕಾಲಕಾಲಕ್ಕೆ ಸಿದ್ಧವಾಗಿ ಸರಕಾರದ ಕೈಸೇರುವ ವ್ಯವಸ್ಥೆಯೂ ರೂಪುಗೊಳ್ಳಬೇಕು. ಆಗ ಮಾತ್ರ ಇಂತಹ ದುರ್ಘ‌ಟನೆಗಳಿಗೆ ಇತಿಶ್ರೀ ಹೇಳುವುದು ಸಾಧ್ಯ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.