ಜಪಾನ್‌-ಭಾರತ ಒಪ್ಪಂದ: ಚೀನಕ್ಕೆ ಪ್ರಬಲ ಸಂದೇಶ


Team Udayavani, Sep 11, 2020, 6:00 AM IST

ಜಪಾನ್‌-ಭಾರತ ಒಪ್ಪಂದ: ಚೀನಕ್ಕೆ ಪ್ರಬಲ ಸಂದೇಶ

ಸಾಂದರ್ಭಿಕ ಚಿತ್ರ

ಭಾರತ ಮತ್ತು ಜಪಾನ್‌ ನಡುವಿನ ಮೈತ್ರಿ ಮತ್ತೂಂದು ಸ್ತರಕ್ಕೆ ಏರಿದೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಎರಡೂ ದೇಶಗಳು ಪರಸ್ಪರ ಸೈನ್ಯ ಲಾಜಿಸ್ಟಿಕ್ಸ್‌ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿರುವುದು ಐತಿಹಾಸಿಕ ನಡೆಯೇ ಸರಿ. ಹಿಂದೂ ಮಹಾಸಾಗರದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ನಿರಂತರ ಪ್ರಯತ್ನಿಸುತ್ತಲೇ ಇರುವ ಚೀನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಇಂಥದ್ದೊಂದು ಒಪ್ಪಂದ ಅಗತ್ಯವಾಗಿತ್ತು. ಎರಡೂ ಸೇನೆಗಳ ನಡುವಿನ ಸಹಕಾರ, ಮಿಲಿಟರಿ ಬೇಸ್‌ಗಳ ಬಳಕೆಗೆ ಅನುಕೂಲ ಸೇರಿದಂತೆ ಅನೇಕ ಪೂರಕ ಅಂಶಗಳನ್ನು ಒಳಗೊಂಡಿರುವ ಈ ಒಪ್ಪಂದವನ್ನು ರಕ್ಷಣಾ ಪರಿಣತರು ಸ್ವಾಗತಿಸುತ್ತಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ಮತ್ತು ಜಪಾನ್‌ ನಡುವಿನ ಮೈತ್ರಿ ಸದೃಢವಾಗುತ್ತಾ ಸಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅದರಲ್ಲೂ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ಸರಕಾರ ಎರಡೂ ರಾಷ್ಟ್ರಗಳ ನಡುವಿನ ಸಾಮರಿಕ, ವ್ಯಾವಹಾರಿಕ ನಂಟನ್ನು ಮತ್ತಷ್ಟು ಗಟ್ಟಿಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಈ ರೀತಿಯ ಒಪ್ಪಂದದ ಹಿಂದೆ ಚೀನದ ಉಪಟಳ, ದುರುದ್ದೇಶಗಳನ್ನು ಕಟ್ಟಿಹಾಕುವ ಉದ್ದೇಶವೂ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎನ್ನುವುದು. ಕೆಲವು ಸಮಯದಿಂದ ಜಪಾನ್‌ ಸಹ ಭಾರತದೆಡೆಗಿನ ಸಂಬಂಧ ವೃದ್ಧಿಗಾಗಿ ಬಹಳ ಪರಿಶ್ರಮಿಸುತ್ತಿದೆ. ಜಪಾನ್‌ – ಯುನೈಟೆಡ್‌ ಸ್ಟೇಟ್ಸ್‌- ಇಂಡಿಯಾ ಕೂಟ (ಜೆಎಐ) ವಿಷಯದಲ್ಲೇ ಆಗಲಿ ಅಥವಾ ಇತ್ತೀಚೆಗಿನ ಆಸ್ಟ್ರೇಲಿಯಾ – ಭಾರತ-ಜಪಾನ್‌ ಪೂರೈಕೆ ಸರಪಳಿಯ ನಿಟ್ಟಿನಲ್ಲಿ ರಚನೆಯಾದ ಸಹಯೋಗವಿರಲಿ, ಇವುಗಳ ರಚನೆಯಲ್ಲಿ ಜಪಾನ್‌ನ ಪರಿಶ್ರಮ, ಯೋಚನೆ ಬಹಳವೇ ಇದೆ. ನಿಸ್ಸಂಶಯವಾಗಿಯೂ ಟೋಕಿಯೋದ ಈ ನೀತಿ ನಿರೂಪಣೆಯಲ್ಲಿ, ಹೆಚ್ಚುತ್ತಿರುವ ಚೀನದ ಭೂ-ರಾಜಕೀಯ ಅಪಾಯಕ್ಕೆ ಪ್ರತಿರೋಧವೊಡ್ಡುವ ಯೋಚನೆ ಕೆಲಸ ಮಾಡುತ್ತಿದೆ.

ಅಬೆ ಅವಧಿಯಲ್ಲಿ ಜಪಾನ್‌ ಭಾರತದೊಂದಿಗೆ ಬಹು ಆಯಾಮದ ನಂಟು ವಿಸ್ತರಿಸಿಕೊಂಡಿದೆ. ಒಂದರ್ಥದಲ್ಲಿ ಭಾರತದ ಆರ್ಥಿಕ ಆಧುನೀಕರಣದ ಹಾದಿಯಲ್ಲಿ ಜಪಾನ್‌ನ ಕೊಡುಗೆಯನ್ನು ಕಡೆಗಣಿಸಲು ಸಾಧ್ಯವೇ ಆಗುವುದಿಲ್ಲ. ರಾಜತಾಂತ್ರಿಕ ಸಹಕಾರವಷ್ಟೇ ಅಲ್ಲದೇ ಬೃಹತ್‌ ಕೈಗಾರಿಕಾ ಕಾರಿಡಾರ್‌ಗಳು, ರಸ್ತೆ ನಿರ್ಮಾಣ ಯೋಜನೆಗಳು, ಹೈ-ಸ್ಪೀಡ್‌ ರೈಲು ವ್ಯವಸ್ಥೆ ಹಾಗೂ ಮಹಾನಗರಿಗಳಲ್ಲಿನ ಸಂಚಾರ ವ್ಯವಸ್ಥೆಯಲ್ಲಿನ ಆಧುನೀಕರಣದ ಯೋಜನೆಗಳಲ್ಲಿ ಜಪಾನ್‌ನ ಸಹಕಾರ ಹಾಗೂ ಮಹತ್ತರ ಪ್ರಮಾಣದ ಹೂಡಿಕೆಯಿದೆ.

ಇವೆಲ್ಲದರ ನಡುವೆಯೇ, ಎರಡೂ ದೇಶಗಳ ನಡುವಿನ ಮಿಲಿಟರಿ ವಲಯದಲ್ಲಿ ಅಷ್ಟಾಗಿ ಕೊಡುಕೊಳ್ಳುವಿಕೆ ಇಲ್ಲ ಎನ್ನುವ ಚೂರು ಅಸಮಾಧಾನವಂತೂ ಇದ್ದೇ ಇತ್ತು. ಈಗ ಭಾರತ-ಜಪಾನ್‌ ಲಾಜಿಸ್ಟಿಕ್ಸ್‌ ಒಪ್ಪಂದ (ಎಂಎಲ್‌ಎಸ್‌ಎ)ಕ್ಕೆ ಸಹಿ ಹಾಕುವ ಮೂಲಕ, ಈ ಅಭಾವವನ್ನು ತುಂಬುವ ನಿಟ್ಟಿನಲ್ಲಿ ಜಪಾನ್‌ ಹಾಗೂ ಭಾರತ ಬೃಹತ್‌ ಹೆಜ್ಜೆಯಿಟ್ಟಿವೆ. ನಿಸ್ಸಂಶಯವಾಗಿಯೂ ಈ ಬೆಳವಣಿಗೆಗಳೆಲ್ಲ ನೆರೆಯ ಚೀನಕ್ಕೆ ಕಳವಳ ಹುಟ್ಟಿಸಿರಲಿಕ್ಕೂ ಸಾಕು. ತನ್ನ ವಿಸ್ತರಣಾವಾದದ ಹುಚ್ಚು ಪ್ರಯತ್ನಗಳನ್ನು ಯಾರೂ ತಡೆಯರು ಎಂಬ ಭ್ರಮೆಯಲ್ಲಿರುವ ಜಿನ್‌ಪಿಂಗ್‌ ಆಡಳಿತಕ್ಕೆ ಇದೊಂದು ಪ್ರಬಲ ಸಂದೇಶವೇ ಸರಿ.

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.