ನೇಪಥ್ಯಕ್ಕೆ ಮಿಗ್‌ 21 ವಿಮಾನ, ಸಕಾಲಿಕ ಕ್ರಮ


Team Udayavani, Jul 30, 2022, 6:00 AM IST

ನೇಪಥ್ಯಕ್ಕೆ ಮಿಗ್‌ 21 ವಿಮಾನ, ಸಕಾಲಿಕ ಕ್ರಮ

ಭಾರತದ ವಾಯುಪಡೆಗೆ ಸೇರ್ಪಡೆಯಾದಾಗಿನಿಂದಲೂ ಮಿಗ್‌ 21 ಯುದ್ಧ ವಿಮಾನಗಳ ಅಪಘಾತ ಸರಣಿ ನಿಂತಿಲ್ಲ. ವಿಪರ್ಯಾಸವೆಂದರೆ, ಈ ಯುದ್ಧ ವಿಮಾನಗಳನ್ನು ಶವದ ಹಾರುಪೆಟ್ಟಿಗೆಗಳು ಎಂದೇ ಕರೆಯಲಾಗುತ್ತಿತ್ತು. 1963ರಲ್ಲಿ ರಷ್ಯಾ ನಿರ್ಮಿತ ಯುದ್ಧವಿಮಾನವು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಒಟ್ಟಾರೆಯಾಗಿ 400 ಅಪಘಾತಗಳಾಗಿವೆ. ಸರಿಸುಮಾರು 200ಕ್ಕೂ ಅಧಿಕ ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ.

ಗುರುವಾರ ರಾತ್ರಿಯಷ್ಟೇ ರಾಜಸ್ಥಾನದ ಬರ್ಮರ್‌ನಲ್ಲಿ ಮಿಗ್‌ 21 ಯುದ್ಧ ವಿಮಾನದ ಅಪಘಾತವಾಗಿದ್ದು, ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ. ಈ ಘಟನೆ ಬಳಿಕವೇ ರಕ್ಷಣ ಸಚಿವಾಲಯ ಈ ಬಗ್ಗೆ ಕಠಿನ ನಿರ್ಧಾರಕ್ಕೆ ಬಂದಿದ್ದು, 2025ರ ಸೆಪ್ಟಂಬರ್‌ ವೇಳೆಗೆ ಮಿಗ್‌ 21 ಯುದ್ಧ ವಿಮಾನಗಳಿಗೆ ನಿವೃತ್ತಿ ಹೇಳಲು ತೀರ್ಮಾನಿಸಿದೆ.

ಈ ಯುದ್ಧ ವಿಮಾನವನ್ನು ಖರೀದಿಸಿದಾಗಿನಿಂದಲೂ ಅಪಘಾತಕ್ಕೀಡಾಗುತ್ತಲೇ ಇದೆ. ಆದರೆ ದುರದೃಷ್ಟವಶಾತ್‌ ಭಾರತದ ಬತ್ತಳಿಕೆಯಲ್ಲಿ ಇದಕ್ಕೂ ಹೆಚ್ಚಿನ ಸಾಮರ್ಥ್ಯದ ಯುದ್ಧ ವಿಮಾನಗಳು ಇಲ್ಲದೇ ಹೋಗಿದ್ದುದು, ಅನಿವಾರ್ಯವಾಗಿ ಇವುಗಳನ್ನೇ ಉಪಯೋಗಿಸುವಂತೆ ಆಗಿತ್ತು. ಅಲ್ಲದೆ, ಮೊದಲೇ ಹೇಳಿದ ಹಾಗೆ, ಅಲ್ಲಿಂದ ಇಲ್ಲಿವರೆಗೆ 400ಕ್ಕೂ ಹೆಚ್ಚು ಅಪಘಾತಗಳೂ ನಡೆದು ಹೋಗಿರುವುದರಿಂದ ಇವುಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತದೆ ಬೇರೆ ಮಾರ್ಗವೇ ಇಲ್ಲದ ಸ್ಥಿತಿ ಉಂಟಾಗಿತ್ತು. ಜತೆಗೆ ವಾಯುಪಡೆಯಿಂದ ಇವುಗಳನ್ನು ವಾಪಸ್‌ ಪಡೆಯಬೇಕು ಎಂಬ ಒತ್ತಾಯವೂ ಈ ಹಿಂದೆಯೇ ಕೇಳಿಬಂದಿತ್ತು.

ಈಗ ವಾಯುಸೇನೆಯಿಂದ ಈ ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸುವ ನಿರ್ಧಾರದ ಹಿಂದೆ ರಫೇಲ್‌ ಯುದ್ಧ ವಿಮಾನಗಳ ಶಕ್ತಿಯೂ ಇದೆ. ಅಂದರೆ, ಮಿಗ್‌ 21ಕ್ಕಿಂತ ಹೆಚ್ಚಿನ ಸಾಮರ್ಥ್ಯ ಇರುವ ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನಗಳು ವಾಯುಸೇನೆಗೆ ಹೆಚ್ಚಿನ ಶಕ್ತಿ ತುಂಬಿವೆ. ಹೀಗಾಗಿ, ಮಿಗ್‌ 21ರ ನೆರವು ಇಲ್ಲದೇ, ಬಾಹ್ಯ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದು ಕೇಂದ್ರ ಸರಕಾರದ ಚಿಂತನೆಯೂ ಆಗಿದೆ.

ವಿಚಿತ್ರವೆಂದರೆ, ಈ ಯುದ್ಧ ವಿಮಾನಗಳು ಆಗಾಗ ಅಪಘಾತಕ್ಕೀಡಾಗುತ್ತವೆ ಎಂಬ ಆತಂಕ ಒಂದು ಕಡೆಯಾದರೆ, ಈ ಯುದ್ಧ ವಿಮಾನಗಳ ಶಕ್ತಿ ಬಗ್ಗೆ ಯಾರಲ್ಲೂ ಅನುಮಾನವಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ, 2019  ರಲ್ಲಿನ ಭಾರತ-ಪಾಕಿಸ್ಥಾನ ಘರ್ಷಣೆ ವೇಳೆ ಆಗಿನ ವಿಂಗ್‌ ಕಮಾಂ ಡರ್‌ ಅಭಿನಂದನ್‌ ವರ್ಧಮಾನ್‌ ಅವರು ಮಿಗ್‌ 21 ಯುದ್ಧ ವಿಮಾನವೇ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು.

ಇದರ ಜತೆಯಲ್ಲೇ, ಮಿಗ್‌ 21 ಯುದ್ಧ ವಿಮಾನಗಳು ಆಗಾಗ ದುರಂತಕ್ಕೀಡಾಗುತ್ತಿರುವುದಕ್ಕೆ ಕಾರಣವೇನು ಎಂಬ ಕುರಿತಂತೆಯೂ ಅಧ್ಯಯನ ನಡೆಸಲಾಗಿದೆ. ತಜ್ಞರ ಪ್ರಕಾರ, ಇದು ಸಿಂಗಲ್‌ ಎಂಜಿನ್‌ ಯುದ್ಧ ವಿಮಾನವಾಗಿರುವುದರಿಂದ ಹೆಚ್ಚಿನ ಅಪಘಾತಗಳಾಗುತ್ತಿವೆ. ಒಂದು ವೇಳೆ ಎಂಜಿನ್‌ ಆಫ್ ಆದರೆ, ಮತ್ತೆ ಇದನ್ನು ಸ್ಟಾರ್ಟ್‌ ಮಾಡಲು ಸಮಯ ಬೇಕು. ಇಂಥ ಸಂದರ್ಭದಲ್ಲಿಯೇ ಹೆಚ್ಚಾಗಿ ಅಪಘಾತಗಳು ನಡೆಯುತ್ತವೆ ಎಂದು ಹೇಳುತ್ತಾರೆ.

ಮಿಗ್‌ 21 ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈಗ ಆಧುನಿಕ ಕಾಲದಲ್ಲಿ ಮಿಗ್‌ 21ಗಿಂತ ಹೆಚ್ಚು ಸುಧಾರಿತ ಎಂಜಿನ್‌ನ ಯುದ್ಧ ವಿಮಾನಗಳು ಬರುತ್ತಿವೆ. ಹೀಗಾಗಿ, ಮಿಗ್‌ 21 ನೇಪಥ್ಯಕ್ಕೆ ಸರಿಯುವುದರಿಂದ ವಾಯುಪಡೆಗೆ ಅಷ್ಟೇನೂ ಸಮಸ್ಯೆಯಾಗದು.

ಟಾಪ್ ನ್ಯೂಸ್

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.