ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !


Team Udayavani, Nov 8, 2021, 6:20 AM IST

ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ಥಾನದ ವಿರುದ್ಧ ಸೋತಾಗಲೇ ಸೆಮಿಫೈನಲ್‌ ತಲುಪುವುದು ಕಷ್ಟ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತಾಗಲಂತೂ ಬಾಗಿಲು ಬಂದ್‌ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ರವಿವಾರ ಒಂದು ಸಣ್ಣ ಆಸೆಯಿತ್ತು. ಅದು ಅಫ್ಘಾನಿಸ್ಥಾನದ ವಿರುದ್ಧ ನ್ಯೂಜಿಲ್ಯಾಂಡ್‌ ಸೋಲುವುದು. ಹಾಗಾದರೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಲಾ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಸರಿಸಮನಾಗು ತ್ತವೆ (ಸೋಮವಾರ ನಮೀಬಿಯ ವಿರುದ್ಧ ಭಾರತ ಗೆದ್ದರೆ). ಈಗ ರನ್‌ರೇಟ್‌ ಉತ್ತಮಗೊಳಿಸಿಕೊಂಡರೆ ಭಾರತ, ನ್ಯೂಜಿಲ್ಯಾಂಡನ್ನು ಕೆಳಕ್ಕೆ ತಳ್ಳಿ ಮೇಲೇರಬಹುದೆನ್ನುವುದು ಒಂದು ಕಷ್ಟದ ಲೆಕ್ಕಾಚಾರ. ಆದರೆ ಅಷ್ಟೆಲ್ಲ ಲೆಕ್ಕಾಚಾರಗಳ ಆವಶ್ಯಕತೆಯೇ ಈಗಿಲ್ಲ. ರವಿವಾರ ನ್ಯೂಜಿಲ್ಯಾಂಡ್‌ ಗೆದ್ದು ಸೆಮಿಫೈನಲ್‌ಗೇರಿದೆ, ಭಾರತ ಹೊರಬಿದ್ದಿದೆ. ಹಾಗಾಗಿ ಸೋಮವಾರ ನಮೀಬಿಯ ವಿರುದ್ಧದ ಪಂದ್ಯ ಭಾರತ ಪಾಲಿಗೆ ಲೆಕ್ಕಭರ್ತಿಗೆ ಮಾತ್ರ.

ಈಗಾಗಲೇ ಕೂಟದಿಂದ ಭಾರತ ಹೊರಬಿದ್ದಿರುವುದರಿಂದ ಟಿವಿ ಆದಾ ಯಕ್ಕೆ ಹೊಡೆತ ಬೀಳುವುದು ಖಚಿತ. ಭಾರತದಲ್ಲೇ ಗರಿಷ್ಠ ವೀಕ್ಷಕರಿರು ವುದರಿಂದ ಭಾರತ ಕಣದಲ್ಲಿದ್ದರೆ ಜಾಹೀರಾತುದಾರರಿಗೆ ಹಾಕಿದ ಹಣ ವಾಪಸ್‌ ಬರುತ್ತದೆನ್ನುವ ನಂಬಿಕೆಯಿರುತ್ತದೆ. ಈಗ ತಲೆಬಿಸಿ ಶುರುವಾಗಿದೆ. ಅವೆಲ್ಲ ಲೆಕ್ಕಾಚಾರಗಳನ್ನು ಬದಿಗಿಟ್ಟು ನೋಡು ವುದಾದರೆ ಭಾರತಕ್ಕೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಅದರಲ್ಲೂ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಐಸಿಸಿ ಕೂಟವೊಂದನ್ನು ಯಾಕೆ ಗೆಲ್ಲಲು ಆಗಿಲ್ಲ? ಇದು ಬಹಳ ಮುಖ್ಯ ಪ್ರಶ್ನೆ.

ಈ ಬಾರಿ ಬೌಲಿಂಗ್‌ಗೆ ಗರಿಷ್ಠ ಬೆಂಬಲ ನೀಡುವ ದುಬಾೖಯಲ್ಲೇ ಭಾರತ ನಾಲ್ಕು ಪಂದ್ಯಗಳನ್ನಾಡಬೇಕಾಗಿ ಬಂದಿದೆ. ಹಾಗೆಯೇ ಎಲ್ಲ ಪಂದ್ಯಗಳೂ ರಾತ್ರಿ 7.30ಕ್ಕೇ ಆರಂಭವಾಗುವುದು. ಇವನ್ನೆಲ್ಲ ಮಾಡಿದ್ದು ಕೇವಲ ಆರ್ಥಿಕ ಲಾಭದ ಹಿನ್ನೆಲೆಯಲ್ಲಿ! ಮೊದಲೇ ಬೌಲಿಂಗ್‌ ಸ್ನೇಹಿ ಪಿಚ್‌ಗಳು, ಇನ್ನೊಂದು ಕಡೆ ರಾತ್ರಿ ಹೊತ್ತೇ ಪಂದ್ಯಗಳು. ರಾತ್ರಿ ಇಬ್ಬನಿಯ ಪರಿಣಾಮ ವಿಪರೀತ. ಭಾರತದ ಬೌಲಿಂಗ್‌ ಎಷ್ಟೇ ಸಮರ್ಥವಾಗಿರಲಿ, ಬ್ಯಾಟಿಂಗ್‌ ಈ ತಂಡದ ನೈಜಶಕ್ತಿ. ಬೌಲಿಂಗ್‌ ಸ್ನೇಹಿ ಪಿಚ್‌ನಲ್ಲಿ ಪಾಕ್‌, ನ್ಯೂಜಿಲ್ಯಾಂಡ್‌ ವಿರುದ್ಧ ಭಾರತದ ಬ್ಯಾಟಿಂಗ್‌ ವಿಫ‌ಲವಾಯಿತು.

ಇದನ್ನೂ ಓದಿ:ಟಿ20 ವಿಶ್ವಕಪ್ 2021: ಪಾಕಿಸ್ಥಾನ ಅಜೇಯ ಓಟ

ಇನ್ನೊಂದು ತೀವ್ರ ಸಮಸ್ಯೆಯೆಂದರೆ ಸತತ ಒಂದೂವರೆ ವರ್ಷ ದಿಂದ ಜೈವಿಕ ಸುರಕ್ಷ ವಲಯದಲ್ಲಿ ಕೂಡಿ ಹಾಕಲ್ಪಟ್ಟಿರುವ ಭಾರತೀಯ ಕ್ರಿಕೆಟಿಗರು! ಅದನ್ನು ವೇಗಿ ಬುಮ್ರಾ ನೇರವಾಗಿಯೇ ಹೇಳಿಬಿಟ್ಟಿದ್ದಾರೆ. ಹಣ ಎಷ್ಟೇ ಬರಲಿ, ಸೌಲಭ್ಯ ಎಷ್ಟೇ ಇರಲಿ, ಇದ್ದಲ್ಲೇ ಇರಬೇಕು. ಅದೇ ಯಾಂತ್ರಿಕ ಪರಿಸ್ಥಿತಿ ಎಂದಾಗ ಆಟಗಾರರಲ್ಲಿ ಜೀವಂತಿಕೆ ಕುಸಿಯುತ್ತದೆ. ಇಷ್ಟರ ಮಧ್ಯೆ ನಿರಂತರ ಕ್ರಿಕೆಟ್‌. ಐಪಿಎಲ್‌ನಂತಹ ಹಣದ ಕೊಪ್ಪರಿಗೆಯಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ. ಐಪಿಎಲ್‌ ಅ.15ಕ್ಕೆ ಮುಗಿಯಿತು. ಕೇವಲ ಎರಡು ದಿನಗಳ ಅಂತರದಲ್ಲಿ ವಿಶ್ವಕಪ್‌ ಶುರು. ಜತೆಗೆ ಕ್ವಾರಂಟೈನ್‌ನಂತಹ ಸಮಸ್ಯೆಗಳು. ಈಗ ಆಟಗಾರರಿಂದ ಹೆಚ್ಚಿನದೇನನ್ನು ನಿರೀಕ್ಷಿಸಬಹುದು?

ಎಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಕೊಹ್ಲಿಯ ನಾಯಕತ್ವದಲ್ಲಿನ ದೋಷಗಳು. ಅಶ್ವಿ‌ನ್‌ರನ್ನು ಅವರು ನಿರಂತರವಾಗಿ ಕಡೆಗಣಿಸುತ್ತಲೇ ಬಂದಿ ದ್ದಾರೆ. ಅದೇಕೆ ಎನ್ನುವುದು ಅರ್ಥವಾಗಿಲ್ಲ. ದ್ವಿಪಕ್ಷೀಯ ಸರಣಿ ಗಳಲ್ಲಿ ಯಶಸ್ವಿಯಾಗುವ ಕೊಹ್ಲಿ, ಬಹುರಾಷ್ಟ್ರೀಯ ಕೂಟಗಳಲ್ಲಿ ಎಡವು ತ್ತಾರೆ! ಪ್ರತೀ ಬಾರಿ ಎದುರಾಳಿ ತಂಡ ಬದಲಾಗುವ ಸನ್ನಿವೇಶದಲ್ಲಿ ಕೊಹ್ಲಿಗೆ ರಣತಂತ್ರ ರೂಪಿಸಲು ಆಗುವುದಿಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಈಗಂತೂ ಕೊಹ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಕ್ಕಿಳಿದಿದ್ದಾರೆ, ಏಕದಿನ ನಾಯಕತ್ವವೂ ಅವರ ಕೈತಪ್ಪಬಹುದು. ಮುಂದಿನ ದಿನಗಳಲ್ಲಿ ಭಾರತ ಏನು ಸಾಧಿಸಲಿದೆ ಎನ್ನುವುದೇ ಈಗಿನ ಕುತೂಹಲ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.