ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ


Team Udayavani, May 21, 2020, 6:04 AM IST

ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ನೇಪಾಲದ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿಬಿಟ್ಟಿದೆ.

ಅದರಲ್ಲೂ ಲಿಂಪಿಯಾಧುರಾ, ಲಿಪುಲೇಖ್‌ ಮತ್ತು ಕಾಲಾಪಾನಿ ಪ್ರದೇಶಗಳ ವಿಚಾರವಾಗಿ ಎರಡೂ ದೇಶಗಳ ನಡುವಿನ ವಿವಾದ ಹೆಚ್ಚಾಗಲಾರಂಭಿಸಿದೆ.

ನೇಪಾಲವು ಹೊಸ ನಕ್ಷೆಯನ್ನು ಜಾರಿಗೊಳಿಸುವ ಘೋಷಣೆ ಮಾಡುತ್ತಿದ್ದಂತೆಯೇ, ಆ ದೇಶದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಕೂಡ ಭಾರತದ ಮೇಲೆ ಹರಿಹಾಯ್ದಿದ್ದಾರೆ.

ಭೂ ವಿವಾದವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು “ಭಾರತ ಸತ್ಯಮೇವ ಜಯತೇ’ ಎಂಬುದಕ್ಕೆ ವಿರುದ್ಧವಾಗಿ ಹೋಗಬಾರದು ಎಂದು ಎಚ್ಚರಿಸಿದ್ದಾರೆ. ಇದಷ್ಟೇ ಅಲ್ಲದೇ, ಚೀನದ ಕೋವಿಡ್ ಗಿಂತಲೂ ಕ್ಕಿಂತಲೂ ಭಾರತದ ಕೋವಿಡ್ ಅಪಾಯಕಾರಿ ಎಂದು ಕೊಂಕು ನುಡಿದಿದ್ದಾರೆ.

ನೇಪಾಳ ಸರಕಾರದ ಈ ಹಠಾತ್‌ ಅಸಮಾಧಾನದ ಹಿಂದೆ ಹಲವು ಕಾರಣಗಳಿವೆ. ಈ ತಿಂಗಳ ಆರಂಭದಿಂದಲೂ ನೇಪಾಲ – ಭಾರತದ ನಡುವೆ ಕಾಲಾಪಾನಿ, ಲಿಪುಲೇಖ್‌ ವಿಚಾರವಾಗಿ ವಿವಾದ ನಡೆದೇ ಇದೆ.

ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸುಗಮಗೊಳಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ್ದರು.

ಭಾರತ ಈ ವಿಚಾರದಲ್ಲಿ ತನ್ನ ಅನುಮತಿ ಪಡೆದಿಲ್ಲ, ಉತ್ತರಾಖಂಡದಿಂದ ಲಿಪುಲೆಖ್‌ ಪಾಸ್‌ವರೆಗಿನ ಈ ರಸ್ತೆ ತನ್ನ ಗಡಿಯಲ್ಲೂ ಹಾದು ಹೋಗಿದೆ ಎಂದು ನೇಪಾಳ ತಗಾದೆ ತೆಗೆಯಿತು.

ಮೊದಲಿನಿಂದಲೂ ನೇಪಾಳ ಭಾರತದೊಂದಿಗಿರುವ ಪಶ್ಚಿಮ ಗಡಿಯ ಕಾಲಾಪಾನಿ ಒಳಗೊಂಡಂತೆ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶಗಳು ತನ್ನದೆಂದು ಹೇಳುತ್ತಾ ಬಂದಿದೆ.

ಆದಾಗ್ಯೂ ನೇಪಾಲದ ಈ ಆರ್ಭಟದ ಹಿಂದೆ ಚೀನದ ಕುಮ್ಮಕ್ಕೂ ಆಡಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. 2015ರಲ್ಲಿ ನೇಪಾಳ ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದಾಗಿನಿಂದಲೂ ಭಾರತದೊಂದಿಗಿನ ಅದರ ಸಂಬಂಧ ಸಮತೋಲನ ಕಳೆದುಕೊಂಡಿದೆ. ಇದರ ಲಾಭ ಪಡೆದು ಚೀನ ನೇಪಾಲವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದು ನೇಪಾಲವು ಸಂವಿಧಾನದಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಭಾರತಕ್ಕೆ ಸಹಮತವಿರಲಿಲ್ಲ.

ನೇಪಾಲದಲ್ಲಿರುವ ಮಧೇಸಿಯರೊಂದಿಗೆ (ಭಾರತೀಯ ಮೂಲದ ಜನ) ಅಲ್ಲಿನ ಸಂವಿಧಾನ ತಾರತಮ್ಯ ಮಾಡುತ್ತದೆ ಎನ್ನುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ  ವಿರೋಧಕ್ಕೆ ನೇಪಾಳ ಕ್ಯಾರೆ ಎನ್ನದಿದ್ದಾಗ, ನಮ್ಮ ದೇಶ ನೇಪಾಲದ ವಿರುದ್ಧ ಅಘೋಷಿತ ನಾಕಾಬಂದಿ ಹಾಕಿಬಿಟ್ಟಿತು.

ಇದರಿಂದಾಗಿ, ಹಠಾತ್ತನೆ ಆ ದೇಶದಲ್ಲಿ ಅಗತ್ಯ ವಸ್ತುಗಳ ಭಾರೀ ಕೊರತೆ ಎದುರಾಯಿತು. ಆಗ ನೇಪಾಳ ಸರಕಾರ ಚೀನದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿತು. ಚೀನ ತನ್ನ ಬಂದರು ಬಳಸಿಕೊಳ್ಳಲೂ ನೇಪಾಲಕ್ಕೆ ಅನುಮತಿ ನೀಡಿತು. ಅಲ್ಲದೇ, ತನ್ನ ಮಹತ್ವಾಕಾಂಕ್ಷಿ ಬಿಆರ್‌ಐ ಕಾರ್ಯಕ್ರಮದಲ್ಲೂ ಸೇರಿಸಿಕೊಂಡಿತು.

ಅಂದಿನಿಂದಲೂ ಕಟ್ಟರ್‌ ಕಮ್ಯೂನಿಷ್ಟರಾಗಿರುವ ಕೆ.ಪಿ.ಶರ್ಮಾ ಚೀನದ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದ್ದಾರೆ. ಯಾವ ಮಟ್ಟಕ್ಕೆ ಎಂದರೆ, ಈಗ ನೇಪಾಲದ ಹಲವು ಶಾಲೆಗಳಲ್ಲಿ ಚೀನಿ ಭಾಷೆಯನ್ನೂ ಬೋಧಿಸಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ, ನೇಪಾಲಕ್ಕೆ ಹೆಚ್ಚು ದಿನ ಭಾರತದ ವಿರೋಧ ಕಟ್ಟಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ.

ಭಾರತದ ಮೇಲಿನ ಅವಲಂಬನೆಯನ್ನು ಸಂಪೂರ್ಣ ತಗ್ಗಿಸಿ ಚೀನದ ಕೈ ಹಿಡಿದುಕೊಳ್ಳಬೇಕು ಎಂಬ ನೇಪಾಳ ಸರಕಾರ‌ದ ಯೋಚನೆ, ಅಪಾಯಕಾರಿಯಾಗಿದ್ದು, ಟಿಬೆಟ್‌ – ಹಾಂಕಾಂಗ್‌ನಲ್ಲಿ ಚೀನ ಹೇಗೆ ದಾರ್ಷ್ಟ್ಯ ಮೆರೆಯುತ್ತಿದೆ ಎನ್ನುವುದನ್ನು ಅದು ಮರೆಯಬಾರದು. ಕೆ.ಪಿ. ಶರ್ಮಾಗೆ ಚೀನ ಆಪ್ತವಾಗಿರಬಹುದು, ಆದರೆ ನೇಪಾಲ-ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧ-ಸಾಮ್ಯತೆ ಬಹಳ ಗಾಢವಾಗಿದ್ದು, ಭಾರತದೊಂದಿಗಿನ ಸ್ನೇಹವೇ ಅದಕ್ಕೆ ಶ್ರೀರಕ್ಷೆಯಾಗಬಲ್ಲದು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.