ಆಸಾರಾಮ್‌ಗೆ ಶಿಕ್ಷೆ : ಶೋಷಿಸುವವರಿಗೆ ಎಚ್ಚರಿಕೆ


Team Udayavani, Apr 27, 2018, 6:00 AM IST

328.jpg

ಅಪ್ರಾಪ್ತ ವಯಸ್ಕ ಯುವತಿಯ ಮೇಲೆ ತನ್ನ ಆಶ್ರಮದಲ್ಲೇ ಅತ್ಯಾಚಾರ ಎಸಗಿದ ಆರೋಪಕ್ಕೊಳಗಾಗಿದ್ದ ಸ್ವಘೋಷಿತ ದೇವಮಾನವ ಅಸಾರಾಮ್‌ ಬಾಪುಗೆ ಜೋಧ್‌ಪುರದ ನ್ಯಾಯಾಲಯ ಆಜೀವ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ದೇಶಾದ್ಯಂತ ಅತ್ಯಾಚಾರ ಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಈ ತೀರ್ಪು ಬಂದಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲನಾಗಿರುವ ಆಸಾರಾಮ್‌ಗೆ ನ್ಯಾಯಾಲಯ ವಿಧಿಸಿರುವ ಕಠಿನ ಶಿಕ್ಷೆ ಲೈಂಗಿಕ ಶೋಷಣೆಗೊಳಗಾದವರಿಗೆ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ಧೈರ್ಯ ತುಂಬುವ ಸಾಧ್ಯತೆಯಿದೆ. ಅಂತೆಯೇ ಪ್ರಬಲರಾದರೂ ಕಾನೂನಿನ ಉರುಳಿನಿಂದ ಪಾರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ. 

ಆಸಾರಾಮ್‌ ಐದು ವರ್ಷದ ಹಿಂದೆ ಜೋಧ್‌ಪುರದ ತನ್ನ ಆಶ್ರಮದಲ್ಲಿ 16ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯನ್ನು ಆಕೆಯ ಹೆತ್ತವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಆಶ್ರಮಕ್ಕೆ ಸೇರಿಸಿದ್ದರು. ಆದರೆ ಅದೇ ಆಶ್ರಮದಲ್ಲಿ ಆಕೆಯ ಭವಿಷ್ಯವನ್ನು ಮುರುಟಿ ಹಾಕುವ ಹೀನ ಕೃತ್ಯವನ್ನು ಆಸಾರಾಮ್‌ ಎಸಗಿದ್ದಾನೆ. ಚಿಕ್ಕಪುಟ್ಟ ನೌಕರಿ ಮಾಡುತ್ತಾ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಸುಮಾಲ್‌ ಅನಂತರ ಆಸಾರಾಮ್‌ ಆಗಿ ಬದಲಾದದ್ದೇ ಒಂದು ನಿಗೂಢ ಕತೆ. ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿ ಗುರುವನ್ನು ಒಲಿಸಿ ಅಪೂರ್ವ ಸಿದ್ಧಿಗಳನ್ನು ಪಡೆದುಕೊಂಡಿದ್ದಾನೆ ಎಂಬೆಲ್ಲ ಕತೆಗಳನ್ನು ಅವನ ಕುರಿತಾಗಿರುವ ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳು ಹೇಳುತ್ತಿವೆ. ಇದೆಷ್ಟು ನಿಜ ಎನ್ನುವುದು ಇನ್ನೂ ಸಾಬೀತಾಗಿಲ್ಲ. ಆದರೆ ಧಾರ್ಮಿಕ ಗುರುವಿನ ಅವತಾರ ತಾಳಿದ ಬಳಿಕ ಆಸಾರಾಮ್‌ನದ್ದು ಬಿರುಸಿನ ನಡಿಗೆ. ಕೆಲವೇ ವರ್ಷಗಳಲ್ಲಿ ಅವನು 10,000 ಕೋ. ರೂ. ಸಾಮ್ರಾಜ್ಯದ ಒಡೆಯನಾಗುತ್ತಾನೆ, ದೇಶ ವಿದೇಶಗಳಲ್ಲಿ 400ಕ್ಕೂ ಅಧಿಕ ಆಶ್ರಮಗಳನ್ನು ಸ್ಥಾಪಿಸುತ್ತಾನೆ, ಲಕ್ಷಾಂತರ ಮಂದಿ ಅವನ ಅನುಯಾಯಿಗಳಾಗುತ್ತಾರೆ. ಇವರಲ್ಲಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಿನೇಮಾ ಕ್ಷೇತ್ರದವರೂ ಇದ್ದಾರೆ. 

ಅತ್ಯಾಚಾರ ಪ್ರಕರಣಕ್ಕೂ ಮೊದಲೇ ಆಸಾರಾಮ್‌ನ ಕೆಲವು ಕುಕೃತ್ಯಗಳು ಬೆಳಕಿಗೆ ಬಂದಿದ್ದವು. ಅವನ ಒಂದು ಆಶ್ರಮದಲ್ಲಿ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದವು. ತಾಂತ್ರಿಕ ಕ್ರಿಯೆಯಂಗವಾಗಿ ನರಬಲಿ ನೀಡಿದ ಅನುಮಾನ ವ್ಯಕ್ತವಾಗಿದ್ದರೂ ಆಸಾರಾಮ್‌ ತನ್ನ ಪ್ರಭಾವ ಬಳಸಿ ಈ ಕೇಸನ್ನು ಮುಚ್ಚಿ ಹಾಕುವಲ್ಲಿ ಸಫ‌ಲನಾಗಿದ್ದ. ಭೂಕಬಳಿಕೆ ಆರೋಪವೂ ಅವನ ಮೇಲಿದೆ. ಹಲವು ಕೃತ್ಯಗಳಲ್ಲಿ ಮಗನೂ ಸಹಭಾಗಿಯಾಗಿದ್ದು, ಅವನೀಗ ಜೈಲಿನಲ್ಲಿದ್ದಾನೆ.  ಕಾನೂನು ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಂಡ ಧೈರ್ಯವೇ ಆಸಾರಾಮ್‌ ಹಾಗೂ ಅವನಂಥ ಕೆಲವು ಸ್ವಘೋಷಿತ ದೇವಮಾನವರಿಗೆ ಮಹಿಳೆಯರನ್ನು ಶೋಷಿಸಲು ಹಾಗೂ ಇತರ ಅಪರಾಧ ನಡೆಸಲು ಕುಮ್ಮಕ್ಕು ನೀಡುತ್ತದೆ. ತಮಗಿರುವ ರಾಜಕೀಯ ಕೃಪಾ ಶ್ರಯಗಳನ್ನು ಗುರಾಣಿಯಾಗಿ ಬಳಸಿಕೊಂಡು ಎಗ್ಗಿಲ್ಲದೆ ಮೆರೆಯುತ್ತಾ ಹೋಗುತ್ತಾರೆ. ಇಂಥ ನಕಲಿ ಸಂತರು ಹೊಂದಿರುವ ಬೃಹತ್‌ ಅನುಯಾಯಿ ವರ್ಗದಲ್ಲಿ ಮತಬ್ಯಾಂಕ್‌ ಕಾಣುವ ರಾಜಕಾರಣಿಗಳು ಅವರ ಅನ್ಯಾಯಗಳಿಗೆ ಕಿವಿಕಣ್ಣು ಮುಚ್ಚಿಕೊಳ್ಳುವುದರಿಂದಲೇ ಪರಿಸ್ಥಿತಿ ಇಷ್ಟು ಹದಗೆಟ್ಟಿದೆ. ಅವರ ಜನಪ್ರಿಯತೆಗೆ ದೃಶ್ಯ ಮಾಧಯಮಗಳು ಹಾಗೂ ಆಧುನಿಕ ಮಾಧ್ಯಮಗಳು ಧಾರಾಳ ಕೊಡುಗೆ ನೀಡುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆಸಾರಾಮ್‌ ಪ್ರಕರಣವೊಂದರಿಂದಲೇ ಇಡೀ ಧಾರ್ಮಿಕ ವ್ಯವಸ್ಥೆಯನ್ನು ದೂಷಿಸುವುದು ತಪ್ಪಾಗುತ್ತದೆ. ಭಾರತದ ಸಂತ ಪರಂಪರೆಯಲ್ಲಿ ಸಮಾಜಕ್ಕೆ, ದೇಶಕ್ಕೆ ಆಗಣಿತವಾದ ಕೊಡುಗೆಯನ್ನು ನೀಡಿದವರು ಅನೇಕ ಮಂದಿಯಿದ್ದಾರೆ.

ಶಿಕ್ಷಣ, ಆರೋಗ್ಯಸೇರಿದಂತೆ ಸಮಾಜ ವಿವಿಧ ಕ್ಷೇತ್ರಗಳಲಿ ಸೇವೆ ಸಲ್ಲಿಸುತ್ತಿರುವ ಅನೇಕ ಧಾರ್ಮಿಕ ಸಂಸ್ಥೆಗಳಿವೆ. ಆದರೆ ಇಂತಹ ಕೆಲವು ಘಟನೆಗಳಿಂದಾಗಿ ಇಡೀ ಸಂತ ಕುಲವೇ ತಲೆತಗ್ಗಿಸುವಂತಾಗಿದೆ. ಧಾವಂತದ ಆಧುನಿಕ ಜೀವನಶೈಲಿಯಿಂದಾಗಿ ನಿರ್ಮಾಣವಾಗುತ್ತಿರುವ ಒತ್ತಡದಿಂದ ಮುಕ್ತಿ ಹೊಂದಲು ಜನರು ಧಾರ್ಮಿಕ ಸಂಸ್ಥೆಗಳು, ಧಾರ್ಮಿಕ ವ್ಯಕ್ತಿಗಳ ಮೊರೆ ಹೋಗುತ್ತಾರೆ. ಆದರೆ ಆಸಾರಾಮ್‌ನಂತಹ ಸಂತರು ಮಾಡಿದ ಕೃತ್ಯಗಳಿಂದಾಗಿ ಜನರ ಈ ನಂಬಿಕೆಗೆ ಕೊಡಲಿಯೇಟು ಬೀಳುತ್ತಿದೆ.  ಜೈಲಿನಲ್ಲಿರುವಾಗಲೇ ಪ್ರಕರಣದ ಇಬ್ಬರು ಸಾಕ್ಷಿದಾರರನ್ನು ಕೊಲ್ಲಿಸಿದ ಆರೋಪ ಆಸಾರಾಮ್‌ ಮೇಲಿದೆ.ಹಲವು ಮಂದಿಯನ್ನು ಬೆದರಿಸಲಾಗಿದೆ, ಇಲ್ಲವೇ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗಿದೆ. ಈ ಎಲ್ಲ ಘಟನೆಗಳ ನಿಷ್ಪಕ್ಷಪಾತ ತನಿಖೆ ನಡೆದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು. ತಮ್ಮ ಲಾಲಸೆಗಳಿಗೆ ಧರ್ಮವನ್ನು ಬಳಸಿಕೊಂಡು ಮುಗ್ಧ ಜನರನ್ನು ಶೋಷಿಸುವವರಿಗೆ ಆಸಾರಾಮ್‌ ಪ್ರಕರಣ ಒಂದು ಎಚ್ಚರಿಕೆಯ ಗಂಟೆ ಆಗಲಿ. ಅಂತೆಯೇ ಜನರೂ ಇಂತಹ ನಕಲಿ ಬಾಬಾಗಳ ಕುರಿತು ಎಚ್ಚೆತ್ತುಕೊಳ್ಳಲಿ. 

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.