ಬ್ಯಾಂಕಿಂಗ್‌ ವಲಯದ ಸ್ವಚ್ಛತೆಗೆ ಆದ್ಯತೆ ಸಿಗಲಿ


Team Udayavani, Mar 7, 2020, 6:25 AM IST

ಬ್ಯಾಂಕಿಂಗ್‌ ವಲಯದ ಸ್ವಚ್ಛತೆಗೆ ಆದ್ಯತೆ ಸಿಗಲಿ

ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು. ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪೆನಿಗಳ ಸಾಲ.

ಮತ್ತೂಂದು ಬ್ಯಾಂಕ್‌ ಅವನತಿಯತ್ತ ಸಾಗಿದೆ. ಈ ಸಲ ಮುಳುಗುತ್ತಿರುವುದು ಖಾಸಗಿ ವಲಯದ ಐದನೇ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕ್‌. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಬ್ಯಾಂಕಿನ ನಿಯಂತ್ರಣವನ್ನು ಆರ್‌ಬಿಐ ತನ್ನ ಕೈಗೆ ತೆಗೆದುಕೊಂಡಿದೆ. ಹಣ ಹಿಂಪಡೆತ ಮಿತಿಯನ್ನು ತಿಂಗಳಿಗೆ 50,000 ರೂ.ಮಿತಿಗೊಳಪಡಿಸಿರುವ ಆರ್‌ಬಿಐ ಇದೇ ವೇಳೆ ಬ್ಯಾಂಕನ್ನು ಪುನಶ್ಚೇತನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಆದರೆ ಒಂದು ಸಲ ಬ್ಯಾಂಕಿನಲ್ಲಿ ಸಮಸ್ಯೆ ಇದೆ ಎಂದು ಗೊತ್ತಾದ ಕೂಡಲೇ ಜನರು ಗಾಬರಿಯಾಗುವುದು ಸಹಜ. ಬ್ಯಾಂಕಿನ ಶಾಖೆಗಳ ಮುಂದೆ ಮತ್ತು ಎಟಿಎಂಗಳ ಮುಂದೆ ಜನರು ಹಣ ಹಿಂಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಪಿಎಂಸಿ ಎಂಬ ಸಹಕಾರಿ ಬ್ಯಾಂಕೊಂದು ಇದೇ ರೀತಿ ದಿವಾಳಿಯೆದ್ದು ರಂಪಾಟವಾಗಿತ್ತು. ಅದರ ಬಿಸಿ ಆರುವ ಮೊದಲೇ ಯೆಸ್‌ ಬ್ಯಾಂಕ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಐದನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿರುವ ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವಾಗಿರುವ ಬ್ಯಾಂಕ್‌ಗಳು ಈ ರೀತಿ ಪದೇಪದೆ ಬಿರುಗಾಳಿಗೆ ಸಿಲುಕಿದ ನಾವೆಯಂತಾಗುವುದು ಮಾತ್ರ ದುರದೃಷ್ಟಕರ ಸಂಗತಿ. ಬ್ಯಾಂಕಿಂಗ್‌ ವಲಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಅರ್ಥ ಶಾಸ್ತ್ರಜ್ಞರು ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿಪರರು ಆಡಳಿತ ವ್ಯವಸ್ಥೆಯಲ್ಲಿದ್ದರೆ ವಿತ್ತೀಯ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ಪ್ರತಿಪಾದನೆಯೂ ಯೆಸ್‌ ಬ್ಯಾಂಕ್‌ ವಿಚಾರದಲ್ಲಿ ಹುಸಿಯಾಗಿದೆ. ಏಕೆಂದರೆ ಈ ಬ್ಯಾಂಕನ್ನು ಸ್ಥಾಪಿಸಿದ್ದು ಹಣಕಾಸು ಕ್ಷೇತ್ರದ ಮೂವರು ದಿಗ್ಗಜರು. ಆದರೆ ಸರಿಯಾಗಿ ಎರಡು ದಶಕ ಪೂರ್ತಿ ಅವರಿಗೆ ಬ್ಯಾಂಕನ್ನು ನಡೆಸಿಕೊಂಡು ಬರಲು ಸಾಧ್ಯವಾಗಿಲ್ಲ. ಹಾಗೆಂದು ಯೆಸ್‌ ಬ್ಯಾಂಕಿನಲ್ಲಿ ಸಮಸ್ಯೆಯಿದೆ ಎನ್ನುವುದು ಗೊತ್ತಾಗಿದ್ದು ಇದೇ ಮೊದಲೇನಲ್ಲ. 2017ರಲ್ಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು.ಇತ್ತೀಚೆಗೆ ಪಿಎಂಸಿ ಬ್ಯಾಂಕಿನ ಸಮಸ್ಯೆ ಬಹಿರಂಗವಾದ ಸಂದರ್ಭದಲ್ಲೂ ಯೆಸ್‌ ಬ್ಯಾಂಕ್‌ ಶೇರು ಮೌಲ್ಯ ಸುಮಾರು ಶೇ. 40 ಕುಸಿದಿತ್ತು. ಈ ಸಂದರ್ಭದಲ್ಲೇ ಈ ಬ್ಯಾಂಕಿನ ಮೇಲೆ ಕಣ್ಗಾವಲು ಇಡಬೇಕೆಂಬ ಸಲಹೆಯನ್ನು ಆರ್ಥಿಕ ತಜ್ಞರು ನೀಡಿದ್ದರು. ಆದರೆ ಆರ್‌ಬಿಐ ಮತ್ತು ಸರಕಾರ ಅದು ಪೂರ್ತಿ ಕುಸಿಯುವ ತನಕ ಕಾದು ಕುಳಿತುಕೊಂಡದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ.

ದೇಶದ ಬ್ಯಾಂಕ್‌ಗಳನ್ನು ಈಗ ಸಮಸ್ಯೆಯ ಕೂಪಕ್ಕೆ ನೂಕುತ್ತಿರುವುದು ವಸೂಲಾಗದ ಸಾಲಗಳು.ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಗುರುತಿಸುವ ಈ ಸಾಲ ಈಗ ಅಗಾಧವಾಗಿ ಬೆಳೆದು ನಿಂತು ಬ್ಯಾಂಕ್‌ಗಳನ್ನೇ ನುಂಗುತ್ತಿರುವುದು ವಿಪರ್ಯಾಸ. ಹಾಗೆಂದು ಇದು ಜನಸಾಮಾನ್ಯರಿಗೆ ನೀಡಿದ ಸಾಲ ಅಲ್ಲ, ಬದಲಾಗಿ ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪೆನಿಗಳ ಸಾಲ. 2005ರಿಂದೀಚೆಗೆ ಕಾರ್ಪೋರೇಟ್‌ ಕಂಪೆನಿಗಳಿಗೆ ಉದಾರವಾಗಿ ಸಾಲ ನೀಡುವ ನೀತಿಯನ್ನು ಅನುಸರಿಸಿದ ಪರಿಣಾಮವನ್ನು ಈಗ ಬ್ಯಾಂಕ್‌ಗಳು ಅನುಭವಿಸುತ್ತಿವೆ ಎನ್ನುತ್ತಿದೆ ಒಂದು ವರದಿ. ಇದರ ಜೊತೆಗೆ ಸಾಲಮನ್ನಾದಂಥ ಮತಬೇಟೆಯ ತಂತ್ರಗಳು ಕೂಡ ಬ್ಯಾಂಕುಗಳಿಗೆ ಕಂಟಕವಾಗುತ್ತಿರುವುದು ಸುಳ್ಳಲ್ಲ.

ಆದರೆ ಇದರಿಂದ ಸಾಲ ಪಡೆದಿರುವ ಕಾರ್ಪೋರೇಟ್‌ ಕಂಪೆನಿಗಳಿಗೆ ಸಮಸ್ಯೆಯಾಗುವುದಿಲ್ಲ. ಹಣ ಕಳೆದುಕೊಳ್ಳುವುದು ಚಿಕ್ಕಪುಟ್ಟ ಮೊತ್ತವನ್ನು ಠೇವಣಿಯಾಗಿಟ್ಟಿರುವ ಬಡ ಮತ್ತು ಮಧ್ಯಮ ವರ್ಗದ ಜನರು. ಯೆಸ್‌ ಬ್ಯಾಂಕಿನಲ್ಲೂ ಜನಸಾಮಾನ್ಯರ 2 ಲಕ್ಷ ಕೋಟಿ ರೂ.ಗೂ ಮಿಕ್ಕಿದ ಠೇವಣಿಯಿದೆ. ಈ ಠೇವಣಿಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ಸರಕಾರ ಹೇಳುತ್ತಿದ್ದರೂ ಜನರಲ್ಲಿ ಭರವಸೆ ಹುಟ್ಟುತ್ತಿಲ್ಲ.ಠೇವಣಿ ಮೇಲಿನ ವಿಮಾ ಸುರಕ್ಷೆಯನ್ನು 5 ಲ.ರೂ.ಗೇರಿಸಿರುವುದರಿಂದ ಕನಿಷ್ಠ ಇಷ್ಟು ಮೊತ್ತವಾದರೂ ಸಿಗುವ ಭರವಸೆ ಇಟ್ಟುಕೊಳ್ಳಬಹುದು.

ಖಾಸಗಿ, ಸರಕಾರಿ ಮತ್ತು ಸಹಕಾರಿ ಬ್ಯಾಂಕ್‌ಗಳೆಲ್ಲ ದೇಶದ ಆರ್ಥಿಕತೆಯ ಬಂಡಿಯ ಗಾಲಿಗಳಿದ್ದಂತೆ. ಆರ್ಥಿಕತೆ ಮುಂದೆ ಸಾಗಬೇಕಾದರೆ ಈ ಎಲ್ಲ ಗಾಲಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಇದು ಸಾಧ್ಯವಾಗಬೇಕಾದರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಆದ್ಯತೆಯಲ್ಲಿ ಮಾಡಬೇಕು.ಬ್ಯಾಂಕಿಂಗ್‌ ವಲಯ ಸ್ವಚ್ಚವಾಗುವುದು ಅತಿ ಅಗತ್ಯ. ಆಗಾಗ ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ ಸುದ್ದಿಗಳು ಬರುತ್ತಿದ್ದರೆ ಜನಸಾಮಾನ್ಯರಿಗೆ ಈ ವ್ಯವಸ್ಥೆಯ ಮೇಲಿನ ನಂಬಿಕೆ ಹೊರಟು ಹೋಗುವ ಅಪಾಯವಿದೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.