ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹವಾಗಿರಲಿ


Team Udayavani, Apr 8, 2019, 6:30 AM IST

election

ಮತಯಂತ್ರ ಅಥವಾ ಇವಿಎಂಗೆ ಮುತ್ತಿಕೊಂಡಿದ್ದ ವಿವಾದವೀಗ ಮತ ಖಾತರಿಪಡಿಸುವ ವಿವಿಪ್ಯಾಟ್‌ ಯಂತ್ರದತ್ತ ತಿರುಗಿದೆ. ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ, ಯಾವುದೇ ಗುಂಡಿ ಒತ್ತಿದರೂ ಒಬ್ಬನೇ ಅಭ್ಯರ್ಥಿಗೆ ಮತ ಬೀಳುವಂತೆ ಅದರಲ್ಲಿರುವ ಆಂತರಿಕ ವ್ಯವಸ್ಥೆಯನ್ನು ಬದಲಾ­ಯಿಸಿ­ಕೊಳ್ಳ­ಬಹುದು ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡಿದಾಗ ಆಯೋಗ ವೋಟರ್‌ ವೆರಿಫ‌ಯಬಲ್‌ ಪೇಪರ್‌ ಆಡಿಟ್‌ ಟ್ರಯಲ್‌ ಎಂಬ ಈ ವ್ಯವಸ್ಥೆ ಜಾರಿಗೆ ತಂದಿದೆ. ನಾವು ಚಲಾಯಿಸಿದ ಮತ ನಾವು ಇಚ್ಚಿಸಿದ ಅಭ್ಯರ್ಥಿಗೆ ಬಿದ್ದಿದೆ ಎನ್ನುವುದನ್ನು ದೃಢಪಡಿಸುವುದು ಈ ಉಪಕರಣದ ಕೆಲಸ.

ವಿವಿಪ್ಯಾಟ್‌ನಿಂದ ಮುದ್ರಿತ ಚೀಟಿಯೊಂದು ಲಭ್ಯವಾಗುತ್ತದೆ. ಇದು ನಮ್ಮ ಮತ ಸರಿಯಾಗಿ ಚಲಾವಣೆಯಾಗಿದೆ ಎನ್ನುವುದನ್ನು ಖಾತರಿಪಡಿಸುತ್ತದೆ.
ಇದೀಗ ಪ್ರತಿಪಕ್ಷಗಳಿಗೆ ಆಕ್ಷೇಪ ಇರುವುದು ವಿವಿಪ್ಯಾಟ್‌ ಕಾರ್ಯ­ಕ್ಷಮತೆಯ ಮೇಲೆ ಅಲ್ಲ, ಬದಲಾಗಿ ವಿವಿಪ್ಯಾಟ್‌ ಮತ ರಶೀದಿಗಳನ್ನು ಎಣಿಸುವ ವಿಚಾರದಲ್ಲಿ.ಪಾರದರ್ಶಕತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರತಿ ಇವಿಎಂಗೆ ಜೋಡಿಸಲಾದ ವಿವಿಪ್ಯಾಟ್‌ನ ಮತ ರಶೀದಿಗಳನ್ನು ಇವಿಎಂ ನಲ್ಲಿ ದಾಖಲಾದ ಮತಗಳೊಂದಿಗೆ ಹೋಲಿಸಿ ನೋಡಿ ಫ‌ಲಿತಾಂಶವನ್ನು ಖಾತರಿಪಡಿಸಿಕೊಳ್ಳಬೇಕೆನ್ನುವುದು ವಿಪಕ್ಷಗಳ ವಾದ. ಚುನಾವಣ ಆಯೋಗ ಈ ಬೇಡಿಕೆ ತಿರಸ್ಕರಿಸಿದ ಬಳಿಕ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

21 ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಚುನಾವಣ ಆಯೋಗ ರಚಿಸಿದ್ದ ಸಮಿತಿ 479 ಐಚ್ಚಿಕವಾಗಿ ಆಯ್ಕೆ ಮಾಡಿದ ವಿವಿಪ್ಯಾಟ್‌ಗಳ ಮತ ಎಣಿಸುವುದರ ಮೂಲಕ ಶೇ.99.99 ಖಾತರಿಪಡಿಸಿಕೊಳ್ಳಬಹುದು ಎಂದು ವರದಿ ನೀಡಿದೆ. ಈ ವರದಿಯ ಬಗ್ಗೆಯೇ ಪ್ರತಿಪಕ್ಷಗಳಿಗೆ ಆಕ್ಷೇಪ ಇರುವುದು. 543 ಕ್ಷೇತ್ರಗಳಲ್ಲಿ 13.5 ಮತಯಂತ್ರಗಳು ಬಳಕೆಯಾಗಲಿವೆ. ಎಲ್ಲ ಮತಯಂತ್ರಗಳಿಗೆ ವಿವಿಪ್ಯಾಟ್‌ ಜೋಡಿಸಲು ಆಯೋಗ ನಿರ್ಧರಿ ಸಿದೆ.ಈ ಪೈಕಿ ಬರೀ 479 ವಿವಿಪ್ಯಾಟ್‌ಗಳ ಮತ ಎಣಿಸುವುದು ಎಂದರೆ ಕನಿಷ್ಠ ಕ್ಷೇತ್ರಕ್ಕೊಂದು ವಿವಿಪ್ಯಾಟ್‌ನ್ನು ಕೂಡ ಪರಿಶೀಲಿಸಿ­ದಂತಾಗುವುದಿಲ್ಲ. ಬರೀ ಶೇ.0.046 ವಿವಿಪ್ಯಾಟ್‌ಗಳ ಮತ ಎಣಿಸುವುದರಿಂದ ಚುನಾವಣೆಯ ಪಾರದರ್ಶಕತೆ ಮತ್ತು ಪಾವಿತ್ರ್ಯವನ್ನು ಕಾಪಾಡಲು ಸಾಧ್ಯವಿಲ್ಲ ಎನ್ನುವ ಪ್ರತಿಪಕ್ಷಗಳ ವಾದದಲ್ಲಿ ಹುರುಳಿಲ್ಲದಿಲ್ಲ. ಕನಿಷ್ಠ ಶೇ. 50 ವಿವಿಪ್ಯಾಟ್‌ಗಳನ್ನಾದರೂ ಎಣಿಸಬೇಕೆನ್ನುವುದು ಅವುಗಳ ವಾದ.

ಆದರೆ ಇಷ್ಟು ವಿವಿಪ್ಯಾಟ್‌ಗಳ ಮತ ಎಣಿಕೆ ಪ್ರಾಯೋಗಿಕವಾಗಿ ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಚುನಾವಣ ಆಯೋಗ ಹೇಳುವಂತೆ ಶೇ.50 ವಿವಿಪ್ಯಾಟ್‌ಗಳ ಮತ ಎಣಿಸಿದರೆ ಫ‌ಲಿತಾಂಶ ಪ್ರಕಟನೆ ಆರು ದಿನ ವಿಳಂಬವಾಗಬಹುದು. ಅಂದರೆ ಮೇ 29 ಅಥವಾ 30ರಂದಷ್ಟೇ ಫ‌ಲಿತಾಂಶದ ಪೂರ್ಣ ಚಿತ್ರಣ ಲಭ್ಯವಾಗಬಹುದು. ಈಗಾಗಲೇ ಚುನಾವಣ ಪ್ರಕ್ರಿಯೆ ಬಹಳ ದೀರ್ಘ‌ವಾಯಿತು ಎನ್ನುವ ತಕರಾರು ಇದೆ. ಹೀಗಿರುವಾಗ ಫ‌ಲಿತಾಂಶವನ್ನು ಇನ್ನಷ್ಟು ವಿಳಂಬಿಸುವುದು ಜನರ ಸಹನೆಯ ಪರೀಕ್ಷೆ ಯಾಗುತ್ತದೆ.

ಮತಯಂತ್ರಗಳಿಗೆ ಭದ್ರತೆ ನೀಡುವುದು, ಮತ ಎಣಿಕೆ ಸಿಬಂದಿ ಗಳ ನೇಮಕ ಇತ್ಯಾದಿ ಸಮಸ್ಯೆಗಳೂ ಇವೆ.ಅಲ್ಲದೆ ಇದು ಹಿಂದಿನಂತೆ ಮತ ಗಳನ್ನು ಚುನಾವಣ ಅಧಿಕಾರಿಗಳು ಎಣಿಸುವ ಪ್ರಕ್ರಿಯಾಗಿರುವುದರಿಂದ ನಾವು ಮರಳಿ ಮತಪತ್ರಗಳ ಕಾಲಕ್ಕೆ ಹೋದಂತಾಗುತ್ತದೆ. ಈ ಸಂದರ್ಭದಲ್ಲಿ ಮಾನವ ಸಹಜ ತಪ್ಪುಗಳಾಗುವ ಸಾಧ್ಯತೆಯೂ ಇದೆ.

ಚುನಾವಣೆಯ ಪಾವಿತ್ರ್ಯವನ್ನು ಉಳಿಸುವುದಕ್ಕಾಗಿ ಫ‌ಲಿತಾಂಶ ಆರು ದಿನ ವಿಳಂಬವಾಗುವುದನ್ನು ಸಹಿಸಿಕೊಳ್ಳಲು ತಯಾರಿದ್ದೇವೆ ಎಂದು ಪ್ರತಿಪಕ್ಷಗಳು ಹೇಳುತ್ತಿದ್ದರೂ ನಾವು ಹಿಮ್ಮುಖವಾಗಿ ಚಲಿಸುವುದು ಬುದ್ಧಿವಂತಿಕೆಯಲ್ಲ. ಆದರೆ ಆಕ್ಷೇಪಗಳನ್ನು ಪರಿಗಣಿಸಿ ಹೇಳುವುದಾದರೆ ಮತಯಂತ್ರದ ವಿಶ್ವಾಸಾ­ರ್ಹತೆಯನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿ­ರುವುದು ಅಗತ್ಯ ಮತ್ತು ತುರ್ತಾಗಿ ಆಗಬೇಕು.

ಸಮಿತಿ 479 ವಿವಿಪ್ಯಾಟ್‌ಗಳ ಮತ ಎಣಿಸಲು ಶಿಫಾರಸು ಮಾಡಿದ್ದರೂ ಚುನಾವಣ ಆಯೋಗ ಈಗಾಗಲೇ ಕನಿಷ್ಠ ವಿಧಾನಸಭೆಗೊಂದರಂತೆ ವಿವಿಪ್ಯಾಟ್‌ ಮತ ಎಣಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಅಂದರೆ 4125 ವಿವಿಪ್ಯಾಟ್‌ಗಳ ಮತ ಎಣಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಇದು ಸಾಧ್ಯವಾದರೆ ಸಮಿತಿ ಹೇಳಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ವಿವಿಪ್ಯಾಟ್‌ಗಳ ಮತ ಎಣಿಸಿದಂತಾಗುತ್ತದೆ. 2017ರಲ್ಲಿ ವಿವಿಪ್ಯಾಟ್‌ ವ್ಯವಸ್ಥೆ ಪ್ರಾರಂಭಿಸಿದ ಬಳಿಕ 1500 ವಿವಿಪ್ಯಾಟ್‌ಗಳನ್ನು ಪರಿಶೀಲನೆಗೊಳಪಡಿ­ಸಲಾ­ಗಿದೆ. ಎಲ್ಲ ಸಂದರ್ಭದಲ್ಲೂ ಶೇ. 99.99 ನಿಖರ ಫ‌ಲಿತಾಂಶ ಬಂದಿದೆ ಎಂದು ಆಯೋಗ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಶೇ. 5 ವಿವಿಪ್ಯಾಟ್‌ಗಳನ್ನು ಪರಿಶೀಲಿ­ಸುವ ಸಲಹೆಯನ್ನು ಈ ಚುನಾವಣೆಯಲ್ಲಿ ಪರಿಗಣಿಸಬಹುದು. ಆದರೆ ಈ ವಿವಿಪ್ಯಾಟ್‌ಗಳ ಆಯ್ಕೆ ಅತ್ಯಂತ ಸಮರ್ಪಕವೂ ಸಮುಚಿತವೂ ಆಗಿರಬೇಕು.

ಒಟ್ಟಾರೆಯಾಗಿ ನಮ್ಮ ಚುನಾವಣ ಪ್ರಕ್ರಿಯೆಯಲ್ಲಿ ಜನರಿಗೆ ವಿಶ್ವಾಸ ನಷ್ಟವಾಗದಂತೆ ನೋಡಿಕೊಳ್ಳಬೇಕಾಗಿರುವುದು ಆಯೋಗ ಮಾತ್ರವಲ್ಲದೆ ಸರಕಾರದ ಹೊಣೆಯೂ ಹೌದು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.