ಎಲ್ಲರಿಗೂ ಜೋಶಿಮಠ ಘಟನೆ ಎಚ್ಚರಿಕೆ ಗಂಟೆಯಾಗಲಿ


Team Udayavani, Jan 14, 2023, 6:00 AM IST

ಎಲ್ಲರಿಗೂ ಜೋಶಿಮಠ ಘಟನೆ ಎಚ್ಚರಿಕೆ ಗಂಟೆಯಾಗಲಿ

ಮನುಕುಲವನ್ನು ಕಾಡುತ್ತಿರುವ ತಾಪಮಾನ ಏರಿಕೆ ಸಮಸ್ಯೆಗೆ ಅತ್ಯುತ್ತಮ ಉದಾಹರಣೆ ಜೋಶಿಮಠ ನಗರದ ಕುಸಿಯುವಿಕೆ. ದಿನದಿಂದ ದಿನಕ್ಕೆ ಮನೆಗಳೆಲ್ಲ ಬಿರುಕು ಬಿಡುತ್ತಿದ್ದು, ಜನ ಊರು ಖಾಲಿ ಮಾಡುತ್ತಿದ್ದಾರೆ. ಇಸ್ರೋ ಹೇಳಿರುವ ಪ್ರಕಾರ, ಕಳೆದ 12 ದಿನಗಳಿಂದ ಜೋಶಿಮಠದಲ್ಲಿ  5.4 ಸೆ.ಮೀ. ಭೂಮಿ ಕುಸಿದಿದೆ.

ಜೋಶಿಮಠದ ಘಟನೆಯಿಂದಾಗಿ ಉತ್ತರಾಖಂಡ ಸರಕಾರ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದೆ. ಜೋಶಿಮಠದ ಜತೆಗೆ ಕರ್ಣಪ್ರಯಾಗದಲ್ಲೂ ಕಟ್ಟಡಗಳಲ್ಲಿ ಬಿರುಕು ಮೂಡಿದ್ದು ಈ ಘಟನೆಯ ಗಂಭೀರತೆಯನ್ನು ತೋರಿದೆ.

ಜೋಶಿಮಠವು ಹಿಮಾಲಯದ ತಪ್ಪಲಿನ ಒಂದು ನಗರವಾಗಿದೆ. ಉತ್ತರಾಖಂಡದ ಪ್ರಮುಖ ಪ್ರವಾಸಿತಾಣವೂ ಹೌದು. ಸದ್ಯ ಈ ನಗರ ಭೂಗರ್ಭ ಸೇರುತ್ತಿರುವುದರಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಜೋಶಿಮಠದ ಇಂದಿನ ಪರಿಸ್ಥಿತಿಗೆ ಅರಣ್ಯ ನಾಶ, ಮಣ್ಣು ಸವಕಳಿ, ಹಿಮ ಕರಗುವಿಕೆ ಹೆಚ್ಚಳದಂಥ ಸಮಸ್ಯೆಗಳೇ ಕಾರಣ. ಹಾಗೆಯೇ ಇನ್ನೊಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಮಿತಿಮೀರಿದ ನಗರೀಕರಣವೂ ಭೂಕುಸಿತಕ್ಕೆ ಪ್ರಮುಖ ಕಾರಣ. ಅಂದರೆ ಜೋಶಿಮಠದ ನೆಲ, ನಗರೀಕರಣವನ್ನು ತಡೆದುಕೊಳ್ಳಬಲ್ಲದೇ ಎಂಬ ಬಗ್ಗೆ ಅಧ್ಯಯನವನ್ನೇ ನಡೆಸದೆ ಮನಬಂದಂತೆ ಕಟ್ಟಡಗಳ ನಿರ್ಮಾಣ ಮಾಡಿದ್ದೂ ಇಂದಿನ ಸ್ಥಿತಿಗೆ ಕಾರಣ ಎಂಬ ವಿಶ್ಲೇಷಣೆಯೂ ಇದೆ.

ಸದ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಜೋಶಿಮಠದ ಬಗ್ಗೆ ಸುದ್ದಿಯಾಗುತ್ತಿರುವುದರಿಂದ ಎಲ್ಲರ ಗಮನಸೆಳೆಯುತ್ತಿದೆ. ಅಲ್ಲದೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಈ ರೀತಿ ಆಗುತ್ತಿದೆ ಎಂಬ ಆತಂಕವೂ ಪರಿಸರವಾದಿಗಳಲ್ಲಿ ಹೆಚ್ಚುತ್ತಿದೆ.

ವಿಚಿತ್ರವೆಂದರೆ ಜೋಷಿಮಠದ ಭೂಕುಸಿತ ಮಾತ್ರ ಭೂಮಿಯ ತಾಪಮಾನ ಏರಿಕೆ ಅಥವಾ ಹವಾಮಾನ ಬದಲಾವಣೆಯ ಪಾಪದ ಕೂಸೇನಲ್ಲ. ಇದರ ಜತೆಯಲ್ಲೇ ಒಂದೇ ಸುಮನೆ ಸುರಿಯುತ್ತಿರುವ ಮಳೆ, ಕೆಲವೆಡೆ ಬರಗಾಲ, ಪ್ರವಾಹ, ಕಾಳ್ಗಿಚ್ಚು ಕೂಡ ಇದರಿಂದಾಗಿಯೇ ಆಗುತ್ತಿರುವುದು. ಕಳೆದ ವರ್ಷ ಭಾರತದಲ್ಲಿ ಇಂಥ ಹಲವಾರು ಘಟನೆಗಳನ್ನು ನೋಡಿದ್ದೇವೆ. ಕರ್ನಾಟಕ ಮತ್ತು ಕೇರಳದಲ್ಲಂತೂ ಕಳೆದ ಎರಡರಿಂದ ಮೂರು ವರ್ಷಗಳ ಕಾಲ ಈ ಭೂಕುಸಿತದಂಥ ಪ್ರಕರಣಗಳನ್ನು ನೋಡುತ್ತಿದ್ದೇವೆ.

ಇದಕ್ಕೆ ಕರ್ನಾಟಕದಲ್ಲಿ ಕಳೆದ ವರ್ಷ ಸುರಿದ ಮಳೆಯನ್ನೇ ನೋಡಬಹುದು. ಇಡೀ ವರ್ಷ ಒಂದೇ ಸಮನೆ ಸುರಿದು, ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ನೋಡಿದ್ದೇವೆ. ಮಳೆಯೇ ಬರದ ಜಾಗದಲ್ಲೂ ಈ ಬಾರಿ ಪ್ರವಾಹ ಸ್ಥಿತಿ ನೋಡಿದ್ದೇವೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಭೂಕುಸಿತದಂಥ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನಲ್ಲೂ ಕಂಡರಿಯದ ಪ್ರವಾಹ ನೋಡಿದ್ದೇವೆ. ಹಾಗಾದರೆ ಈ ಎಲ್ಲ ನೈಸರ್ಗಿಕ ವಿಕೋಪಗಳಿಗೆ ಯಾರು ಕಾರಣ ಎಂಬ ಪ್ರಶ್ನೆಯೂ ಮೂಡುತ್ತದೆ.

ಸರಿಯಾಗಿ ಗಮನಿಸಿ ಹೇಳುವುದಾದರೆ ಈ ಘಟನೆಗಳಿಗೆ ಮನುಷ್ಯನೇ ಕಾರಣ. ಮಿತಿಮೀರಿದ ಆಸೆಯಿಂದಾಗಿ ಕಾಡನ್ನು ಕಡಿದು, ನಗರ ನಿರ್ಮಿಸುತ್ತಾ ಹೋಗುತ್ತಿದ್ದಾನೆ. ಸರಾಗವಾಗಿ ನೀರು ಹರಿಯುವ ಜಾಗದಲ್ಲಿ ಅಥವಾ ಕೆರೆಗಳಿದ್ದ ಜಾಗದಲ್ಲಿ ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ. ಪ್ರಕೃತಿಗೆ ವಿರುದ್ಧವಾಗಿ ಹೋದರೆ ಏನಾಗುತ್ತದೆ ಎಂಬುದನ್ನು ಈ ಮೂಲಕವೇ ಪರಿಸರ ನಮಗೆ ತೋರಿಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು.

ಟಾಪ್ ನ್ಯೂಸ್

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

1-qwwqewq

Gadag ವಿರೇಶ್ವರ ಪುಣ್ಯಾಶ್ರಮದಲ್ಲಿ ಅದ್ದೂರಿ ಮಹಾರಥೋತ್ಸವ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kharif crops

ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಸ್ವಾಗತಾರ್ಹ

ರಷ್ಯಾ-ಉಕ್ರೇನ್‌ ನಡುವಣ ಯುದ್ಧ ಶೀಘ್ರ ಕೊನೆಗಾಣಲಿ

ರಷ್ಯಾ-ಉಕ್ರೇನ್‌ ನಡುವಣ ಯುದ್ಧ ಶೀಘ್ರ ಕೊನೆಗಾಣಲಿ

inಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

ಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

train tragedy

ತ್ರಿವಳಿ ರೈಲು ದುರಂತದ ನಿಗೂಢತೆ ಶೀಘ್ರ ಬಯಲಾಗಲಿ

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ