ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…


Team Udayavani, Oct 16, 2021, 6:20 AM IST

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ಹಿಂದೂ ದೇವಾಲಯಗಳ ಆಡಳಿತ ಭಕ್ತರ ಕೈಗೆ ಬರಬೇಕು ಎಂದು ಹೇಳುವ ಮೂಲಕ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಷ್ಟು ಶಕ್ತಿ ತುಂಬಿದ್ದಾರೆ.

ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೀಗೊಂದು ಚರ್ಚೆ ತೀವ್ರಗೊಂಡಿತ್ತು. ತಮಿಳುನಾಡಿನ ಎಲ್ಲ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು, ಇದು ಸರಕಾರದ ಬಳಿಯೇ ಇರಬಾರದು ಎಂಬುದು ಆಗಿನ ಒತ್ತಡವಾಗಿತ್ತು. ಸದ್ಗುರು ಜಗ್ಗಿ ವಾಸುದೇವ್‌ ಅವರು ಈ ಬಗ್ಗೆ ತಮಿಳುನಾಡಿನಲ್ಲಿ ಒಂದು ಆಂದೋಲನವನ್ನೇ ಶುರು ಮಾಡಿದ್ದರು. ಜತೆಗೆ ಬಿಜೆಪಿ ಕೂಡ ಆಗಿನ ಚುನಾವಣೆ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ, ಭಕ್ತರ ಕೈಗೇ ದೇಗುಲಗಳ ಆಡಳಿತ ಇರಲಿ ಎಂದು ಒತ್ತಾಯಿಸಿ, ಸದ್ಗುರು ಆರಂಭಿಸಿದ್ದ ಆಂದೋಲನಕ್ಕೆ ಕೈಜೋಡಿಸಿತ್ತು.

ಕರ್ನಾಟಕದಲ್ಲೂ ಈ ಬಗ್ಗೆ ಆಗಾಗ್ಗೆ ಚರ್ಚೆಗಳು ಕೇಳಿಬರುತ್ತಲೇ ಇವೆ. ಇಲ್ಲಿ ಮುಖ್ಯವಾಗಿ ದೇಗುಲಗಳ ಆಡಳಿತ ಯಾರ ಬಳಿ ಇರಬೇಕು ಎಂಬುದಕ್ಕಿಂತ, ಹಿಂದೂ ದೇಗುಲಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು. ಬೇರೆ ಧರ್ಮದ ದೇಗುಲಗಳ ಅಭಿವೃದ್ಧಿ ಅಥವಾ ಮತ್ಯಾವುದೇ ಕಾರಣಗಳಿಗಾಗಿ ಬಳಕೆ ಮಾಡಬಾರದು ಎಂದು ಭಕ್ತರ ಕಡೆಯಿಂದಲೇ ಆಗ್ರಹವೂ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲೂ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಕಡೆಯಿಂದ ಇತರೆ ಧರ್ಮದ ಧಾರ್ಮಿಕ ನಾಯಕರಿಗೆ ವೇತನ ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು. ಆಗ ಮುಜರಾಯಿ ಇಲಾಖೆಯೇ ಈ ಆದೇಶ ತಿದ್ದುಪಡಿ ಮಾಡಿ, ಹಿಂದೂ ದೇಗುಲಗಳಿಂದ ಸಂಗ್ರಹವಾದ ಹಣವನ್ನು ಬೇರೆ ಧರ್ಮದ ಕಾರ್ಯಕ್ಕಾಗಿ ವಿನಿಯೋಗಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಇದನ್ನೂ ಓದಿ:ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

ಈಗ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಮೋಹನ್‌ ಭಾಗವತ್‌ ಅವರು ಹಿಂದೂ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು ಮತ್ತು ಹಿಂದೂ ದೇಗುಲಗಳಿಂದ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು ಎಂದಿದ್ದಾರೆ.

ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸರಕಾರಗಳ ಅಡಿಯಲ್ಲಿ ಬಹಳಷ್ಟು ದೇಗುಲಗಳಿವೆ. ಅಷ್ಟೇ ಅಲ್ಲ, ಕೆಲವು ದೇಗುಲಗಳನ್ನು ಭಕ್ತರೇ ಅಲ್ಲದ ಟ್ರಸ್ಟ್‌ಗಳು ನೋಡಿಕೊಳ್ಳುತ್ತಿವೆ. ಹಿಂದೂ ದೇಗುಲಗಳು ಮತ್ತು ದೇಗುಲಗಳ ಆಸ್ತಿಪಾಸ್ತಿಗಳನ್ನು ಭಕ್ತರ ವಶಕ್ಕೇ ಒಪ್ಪಿಸಬೇಕು. ಇದರಿಂದ ಬಂದ ವರಮಾನವನ್ನು ದೇಗುಲಗಳಿಗೇ ಬಳಸಬೇಕು ಎಂಬುದು ಭಾಗವತ್‌ ಅವರ ಅಭಿಪ್ರಾಯ ಜತೆಗೆ ದೇಗುಲ ನೋಡಿಕೊಳ್ಳುತ್ತಿರುವ ಕೆಲವು ಟ್ರಸ್ಟ್‌ಗಳಲ್ಲಿ ದೇವರನ್ನೇ ನಂಬದ ಜಾತ್ಯತೀತವಾದಿಗಳೂ ಇದ್ದಾರೆ. ಇವರು ಹೇಗೆ ಆಡಳಿತ ನಡೆಸಲು ಸಾಧ್ಯ ಎಂಬುದು ಆರ್‌ಎಸ್‌ಎಸ್‌ ಮುಖ್ಯಸ್ಥರ ಪ್ರಶ್ನೆ.

ಈ ಅಭಿಪ್ರಾಯ ಒಪ್ಪುವಂಥದ್ದೇ ಆಗಿದೆ. ದೇಗುಲಗಳನ್ನು ಸರಕಾರಗಳೇಕೇ ನಡೆಸಬೇಕು ಎಂಬುದು ಇಲ್ಲಿನ ಮೂಲ ಪ್ರಶ್ನೆ. ದೇಗುಲಗಳನ್ನು ದೇವರನ್ನು ನಂಬುವ ಭಕ್ತರೇ ನಡೆಸಿಕೊಂಡು ಹೋಗಬೇಕು. ಅಲ್ಲಿಂದ ಬಂದ ಹಣವನ್ನು ದೇಗುಲಗಳಿಗಾಗಿಯೇ ಬಳಕೆ ಮಾಡಬೇಕು. ಇದು ಆಸ್ತಿಕರಿಗೂ ಸಮಾ ಧಾನಕರ ವಿಷಯವಾಗಲಿದೆ. ಇಂಥದ್ದೊಂದು ದಿಕ್ಕಿನಲ್ಲಿ ರಾಜ್ಯ ಸರಕಾರ‌ ಹೆಜ್ಜೆ ಇಡಬೇಕು. ಜತೆಜತೆಗೆ ಈ ಟ್ರಸ್ಟ್‌ಗಳ ವ್ಯವಹಾರ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದನ್ನು ರೂಪಿಸಬೇಕು.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.