ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…


Team Udayavani, Oct 16, 2021, 6:20 AM IST

ದೇಗುಲಗಳ ಆಡಳಿತ ಭಕ್ತರ ಬಳಿಯೇ ಇರಲಿ…

ಹಿಂದೂ ದೇವಾಲಯಗಳ ಆಡಳಿತ ಭಕ್ತರ ಕೈಗೆ ಬರಬೇಕು ಎಂದು ಹೇಳುವ ಮೂಲಕ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಷ್ಟು ಶಕ್ತಿ ತುಂಬಿದ್ದಾರೆ.

ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೀಗೊಂದು ಚರ್ಚೆ ತೀವ್ರಗೊಂಡಿತ್ತು. ತಮಿಳುನಾಡಿನ ಎಲ್ಲ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು, ಇದು ಸರಕಾರದ ಬಳಿಯೇ ಇರಬಾರದು ಎಂಬುದು ಆಗಿನ ಒತ್ತಡವಾಗಿತ್ತು. ಸದ್ಗುರು ಜಗ್ಗಿ ವಾಸುದೇವ್‌ ಅವರು ಈ ಬಗ್ಗೆ ತಮಿಳುನಾಡಿನಲ್ಲಿ ಒಂದು ಆಂದೋಲನವನ್ನೇ ಶುರು ಮಾಡಿದ್ದರು. ಜತೆಗೆ ಬಿಜೆಪಿ ಕೂಡ ಆಗಿನ ಚುನಾವಣೆ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ, ಭಕ್ತರ ಕೈಗೇ ದೇಗುಲಗಳ ಆಡಳಿತ ಇರಲಿ ಎಂದು ಒತ್ತಾಯಿಸಿ, ಸದ್ಗುರು ಆರಂಭಿಸಿದ್ದ ಆಂದೋಲನಕ್ಕೆ ಕೈಜೋಡಿಸಿತ್ತು.

ಕರ್ನಾಟಕದಲ್ಲೂ ಈ ಬಗ್ಗೆ ಆಗಾಗ್ಗೆ ಚರ್ಚೆಗಳು ಕೇಳಿಬರುತ್ತಲೇ ಇವೆ. ಇಲ್ಲಿ ಮುಖ್ಯವಾಗಿ ದೇಗುಲಗಳ ಆಡಳಿತ ಯಾರ ಬಳಿ ಇರಬೇಕು ಎಂಬುದಕ್ಕಿಂತ, ಹಿಂದೂ ದೇಗುಲಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು. ಬೇರೆ ಧರ್ಮದ ದೇಗುಲಗಳ ಅಭಿವೃದ್ಧಿ ಅಥವಾ ಮತ್ಯಾವುದೇ ಕಾರಣಗಳಿಗಾಗಿ ಬಳಕೆ ಮಾಡಬಾರದು ಎಂದು ಭಕ್ತರ ಕಡೆಯಿಂದಲೇ ಆಗ್ರಹವೂ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲೂ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಕಡೆಯಿಂದ ಇತರೆ ಧರ್ಮದ ಧಾರ್ಮಿಕ ನಾಯಕರಿಗೆ ವೇತನ ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು. ಆಗ ಮುಜರಾಯಿ ಇಲಾಖೆಯೇ ಈ ಆದೇಶ ತಿದ್ದುಪಡಿ ಮಾಡಿ, ಹಿಂದೂ ದೇಗುಲಗಳಿಂದ ಸಂಗ್ರಹವಾದ ಹಣವನ್ನು ಬೇರೆ ಧರ್ಮದ ಕಾರ್ಯಕ್ಕಾಗಿ ವಿನಿಯೋಗಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಇದನ್ನೂ ಓದಿ:ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

ಈಗ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಮೋಹನ್‌ ಭಾಗವತ್‌ ಅವರು ಹಿಂದೂ ದೇಗುಲಗಳ ಆಡಳಿತ ಭಕ್ತರ ಕೈಗೇ ಹೋಗಬೇಕು ಮತ್ತು ಹಿಂದೂ ದೇಗುಲಗಳಿಂದ ಸಂಗ್ರಹವಾದ ಕಾಣಿಕೆಯನ್ನು ಹಿಂದೂ ದೇಗುಲಗಳ ಅಭಿವೃದ್ಧಿಗೇ ಬಳಕೆ ಮಾಡಬೇಕು ಎಂದಿದ್ದಾರೆ.

ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸರಕಾರಗಳ ಅಡಿಯಲ್ಲಿ ಬಹಳಷ್ಟು ದೇಗುಲಗಳಿವೆ. ಅಷ್ಟೇ ಅಲ್ಲ, ಕೆಲವು ದೇಗುಲಗಳನ್ನು ಭಕ್ತರೇ ಅಲ್ಲದ ಟ್ರಸ್ಟ್‌ಗಳು ನೋಡಿಕೊಳ್ಳುತ್ತಿವೆ. ಹಿಂದೂ ದೇಗುಲಗಳು ಮತ್ತು ದೇಗುಲಗಳ ಆಸ್ತಿಪಾಸ್ತಿಗಳನ್ನು ಭಕ್ತರ ವಶಕ್ಕೇ ಒಪ್ಪಿಸಬೇಕು. ಇದರಿಂದ ಬಂದ ವರಮಾನವನ್ನು ದೇಗುಲಗಳಿಗೇ ಬಳಸಬೇಕು ಎಂಬುದು ಭಾಗವತ್‌ ಅವರ ಅಭಿಪ್ರಾಯ ಜತೆಗೆ ದೇಗುಲ ನೋಡಿಕೊಳ್ಳುತ್ತಿರುವ ಕೆಲವು ಟ್ರಸ್ಟ್‌ಗಳಲ್ಲಿ ದೇವರನ್ನೇ ನಂಬದ ಜಾತ್ಯತೀತವಾದಿಗಳೂ ಇದ್ದಾರೆ. ಇವರು ಹೇಗೆ ಆಡಳಿತ ನಡೆಸಲು ಸಾಧ್ಯ ಎಂಬುದು ಆರ್‌ಎಸ್‌ಎಸ್‌ ಮುಖ್ಯಸ್ಥರ ಪ್ರಶ್ನೆ.

ಈ ಅಭಿಪ್ರಾಯ ಒಪ್ಪುವಂಥದ್ದೇ ಆಗಿದೆ. ದೇಗುಲಗಳನ್ನು ಸರಕಾರಗಳೇಕೇ ನಡೆಸಬೇಕು ಎಂಬುದು ಇಲ್ಲಿನ ಮೂಲ ಪ್ರಶ್ನೆ. ದೇಗುಲಗಳನ್ನು ದೇವರನ್ನು ನಂಬುವ ಭಕ್ತರೇ ನಡೆಸಿಕೊಂಡು ಹೋಗಬೇಕು. ಅಲ್ಲಿಂದ ಬಂದ ಹಣವನ್ನು ದೇಗುಲಗಳಿಗಾಗಿಯೇ ಬಳಕೆ ಮಾಡಬೇಕು. ಇದು ಆಸ್ತಿಕರಿಗೂ ಸಮಾ ಧಾನಕರ ವಿಷಯವಾಗಲಿದೆ. ಇಂಥದ್ದೊಂದು ದಿಕ್ಕಿನಲ್ಲಿ ರಾಜ್ಯ ಸರಕಾರ‌ ಹೆಜ್ಜೆ ಇಡಬೇಕು. ಜತೆಜತೆಗೆ ಈ ಟ್ರಸ್ಟ್‌ಗಳ ವ್ಯವಹಾರ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದನ್ನು ರೂಪಿಸಬೇಕು.

ಟಾಪ್ ನ್ಯೂಸ್

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

1-sadsad-asd

ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

6-vitla

ವಿಟ್ಲ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

1——dasdsa

ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ?: ಖರ್ಗೆ ತಿರುಗೇಟು

PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?

PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಾಪ ಸುಗಮವಾಗಿ ನಡೆಯುವಂತಾಗಲಿ

ಕಲಾಪ ಸುಗಮವಾಗಿ ನಡೆಯುವಂತಾಗಲಿ

chandrachud

ಸಿಜೆಐ ಟ್ರೋಲಿಂಗ್‌: ಕೇಂದ್ರ ಸರಕಾರದ ಮೌನ ಪ್ರಶ್ನಾರ್ಹ

ಗಡಿ ಗ್ರಾಮಗಳಿಗೆ ಆರೋಗ್ಯ ವಿಮೆ: ಕೇಂದ್ರದ ಮಧ್ಯಪ್ರವೇಶ ಅಗತ್ಯ

ಗಡಿ ಗ್ರಾಮಗಳಿಗೆ ಆರೋಗ್ಯ ವಿಮೆ: ಕೇಂದ್ರದ ಮಧ್ಯಪ್ರವೇಶ ಅಗತ್ಯ

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಸರ್ವಥಾ ಸಲ್ಲದು

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಸರ್ವಥಾ ಸಲ್ಲದು

indನಿಯಂತ್ರಣದತ್ತ ಹಣದುಬ್ಬರ ಆಶಾದಾಯಕ ಬೆಳವಣಿಗೆ

ನಿಯಂತ್ರಣದತ್ತ ಹಣದುಬ್ಬರ ಆಶಾದಾಯಕ ಬೆಳವಣಿಗೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ

1-sdsdsad

ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

1-sadsad-asd

ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.